ಆ್ಯಪ್ನಗರ

ನಾನು ನೋಡದ ಚಿತ್ರರಂಗನಾ? ಎಲ್ಲ ನಟರು ಬಂದು ಮಂಡ್ಯದಲ್ಲಿ ದಾಳಿ ಮಾಡಲಿ ನನಗೇನೂ ಆತಂಕ ಇಲ್ಲ: ಕುಮಾರಸ್ವಾಮಿ

ನಾನು ನೋಡದ ಚಿತ್ರರಂಗನಾ, ಇಡೀ ಚಿತ್ರರಂಗವೇ ಬಂದು ನಿಲ್ಲಲಿ, ಸ್ಟಾರ್‌ ನಟರೆಲ್ಲರೂ ಮಂಡ್ಯಗೆ ಬಂದು ದಾಳಿ ಮಾಡಲಿ ನನಗೇನೂ ಆತಂಕ ಇಲ್ಲ. ನಾನು ಕೂಡ ಚಿತ್ರರಂಗದಿಂದಲೇ ಬಂದವನು. ಚಿತ್ರರಂಗದ ಎಲ್ಲವನ್ನೂ ನಾನು ಬಲ್ಲೆ. ಆದರೆ ರಾಜಕಾರಣವೇ ಬೇರೆ ಎಂದು ಕುಮಾರಸ್ವಾಮಿ ಹೇಳಿದರು.

Vijaya Karnataka Web 18 Mar 2019, 8:55 pm
ಶೃಂಗೇರಿ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಸ್ಪರ್ಧೆ ಮಾಡುವುದಾಗಿ ಘೋಷಣೆಯಾದ ನಂತರ ಇಡೀ ದೇಶದಲ್ಲಿ ಇದೊಂದು ಸ್ಟಾರ್‌ವಾರ್‌ ಕಣವಾಗಿ ಮಾರ್ಪಟ್ಟಿದೆ.
Vijaya Karnataka Web ಕುಮಾರಸ್ವಾಮಿ
ಕುಮಾರಸ್ವಾಮಿ


ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಜೆಡಿಎಸ್‌ಗೆ ಇದೊಂದು ಪ್ರತಿಷ್ಠೆಯ ಕ್ಷೇತ್ರವಾಗಿದೆ.

ಬೆಂಗಳೂರಿನಲ್ಲಿ ಸುಮಲತಾ ತಮ್ಮ ಸ್ಪರ್ಧೆಯ ಕುರಿತು ಘೋಷಣೆ ಮಾಡಿದ್ದು, ಅದಕ್ಕೆ ಯಶ್‌ ಮತ್ತು ದರ್ಶನ್‌ ಬೆಂಬಲ ನೀಡಿದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ನಾನು ನೋಡದ ಚಿತ್ರರಂಗನಾ, ಇಡೀ ಚಿತ್ರರಂಗವೇ ಬಂದು ನಿಲ್ಲಲಿ, ಸ್ಟಾರ್‌ ನಟರೆಲ್ಲರೂ ಮಂಡ್ಯಗೆ ಬಂದು ದಾಳಿ ಮಾಡಲಿ ನನಗೇನೂ ಆತಂಕ ಇಲ್ಲ ಎಂದಿದ್ದಾರೆ.

ನಾನು ಕೂಡ ಚಿತ್ರರಂಗದಿಂದಲೇ ಬಂದವನು. ಚಿತ್ರರಂಗದ ಎಲ್ಲವನ್ನೂ ನಾನು ಬಲ್ಲೆ. ಆದರೆ ರಾಜಕಾರಣವೇ ಬೇರೆ ಎಂದು ಕುಮಾರಸ್ವಾಮಿ ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ನಿಖಿಲ್‌, ಪಕ್ಷದ ಅಭ್ಯರ್ಥಿಗಳ ಪರವಾಗಿ ಪೂಜೆ ಸಲ್ಲಿಸಿದ್ದೇವೆ. ಪಕ್ಷದ ಬಿ ಫಾರಂ ಅನ್ನು ಜಗದ್ಗುರು, ಶಾರದಾಂಬೆ ಮುಂದಿಟ್ಟು ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದಿದ್ದೇವೆ ಎಂದರು.

ಸುಮಲತಾ ಸ್ಪರ್ಧೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ನಿಖಿಲ್‌, ಸುಮಲತಾ ಅಮ್ಮನವರಿಗೆ ಒಳ್ಳೆಯದಾಗಲಿ, ಮಂಡ್ಯ ಜಿಲ್ಲೆಯ ಜನತೆ ಹಾಗೂ ನಮ್ಮ ಕುಟುಂಬದವರ ಜತೆ ನಂಟು ಹೇಗಿದೆ ಎಂಬುದು ನಮಗೆ ಗೊತ್ತು. ಜನರ ವಿಶ್ವಾಸವನ್ನು ಗಳಿಸುವ ವಿಶ್ವಾಸ ಇದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ