ಆ್ಯಪ್ನಗರ

ನ್ಯಾಯ್‌ ಯೋಜನೆಯಿಂದ ಬಡವರ ಉದ್ಧಾರ: ರಾಹುಲ್‌

ಕಡುಬಡವರ ಖಾತೆಗೆ ವಾರ್ಷಿಕ 72,000 ರೂ. ಜಮಾ ಮಾಡುವ 'ನ್ಯಾಯ್‌' ಯೋಜನೆಯಿಂದ ದೇಶದ ಆರ್ಥಿಕತೆ ಸುಧಾರಿಸಲಿದೆ. ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ರಾಹುಲ್‌ ಗಾಂಧಿ ಹೇಳಿದರು.

Vijaya Karnataka 20 Apr 2019, 5:00 am
ಸೂರತ್‌: 'ಚೌಕಿದಾರ್‌ ಚೋರ್‌ ಹೈ' ಎಂದು ಪ್ರಧಾನಿ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ತಮ್ಮ ಪಕ್ಷದ ಪ್ರಮುಖ ಭರವಸೆಯಾಗಿರುವ 'ನ್ಯಾಯ್‌' (ನ್ಯೂನ್ಯತಮ ಆಯೇ ಯೋಜನಾ) ಯೋಜನೆಯಿಂದ ಬಡವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದು ಹೇಳಿದ್ದಾರೆ.
Vijaya Karnataka Web rahul


ಗುಜರಾತಿನ ಸೂರತ್‌ ಜಿಲ್ಲೆಯ ಬಾಜಿಪುರದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ನಡೆಸಿದ ಅವರು, ಕಡುಬಡವರ ಖಾತೆಗೆ ವಾರ್ಷಿಕ 72,000 ರೂ. ಜಮಾ ಮಾಡುವ 'ನ್ಯಾಯ್‌' ಯೋಜನೆಯಿಂದ ದೇಶದ ಆರ್ಥಿಕತೆ ಸುಧಾರಿಸಲಿದೆ. ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.

''ಮೋದಿ ಅವರು ಹೋದಲ್ಲೆಲ್ಲಾ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾರೆ. 2014ರಲ್ಲಿ ಎಲ್ಲರ ಬ್ಯಾಂಕ್‌ ಖಾತೆಗೆ 15 ಲಕ್ಷ ರೂ. ಜಮೆ ಮಾಡುವ ಭರವಸೆ ನೀಡಿದ್ದರು. ಒಂದು ರೂಪಾಯಿಯೂ ನೀಡಲಿಲ್ಲ. ಕಪ್ಪು ಹಣ ನಿಯಂತ್ರಣ ವಿಚಾರದಲ್ಲೂ ಮೋದಿ ಸರಕಾರ ವಿಫಲವಾಗಿದೆ. ಕಾಂಗ್ರೆಸ್‌ ಇಂತಹ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ಬಡವರ ಬ್ಯಾಂಕ್‌ ಖಾತೆಗೆ ಪ್ರತಿ ವರ್ಷ 72,000 ರೂ. ಜಮೆ ಮಾಡುವ ಕನಿಷ್ಠ ಆದಾಯ ಒದಗಿಸುವ 'ನ್ಯಾಯ್‌' ಯೋಜನೆಯ ಆಶ್ವಾಸನೆ ಕೊಟ್ಟಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಇದು ಜಾರಿಗೆ ಬರಲಿದೆ,'' ಎಂದು ಹೇಳಿದರು. ಉದ್ಯೋಗ ಸೃಷ್ಟಿಗೂ ಕಾಂಗ್ರೆಸ್‌ ಒತ್ತು ಕೊಡಲಿದೆ ಎಂದರು.

ಎಂದಿನಂತೆ ರೇಫಲ್‌ ಒಪ್ಪಂದ ವಿಚಾರ ಪ್ರಸ್ತಾಪಿಸಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್‌ ಅಧ್ಯಕ್ಷ, ''ಈ ಒಪ್ಪಂದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯಮಿ ಅನಿಲ್‌ ಅಂಬಾನಿಗೆ 30 ಸಾವಿರ ಕೋಟಿ ರೂ. ಲಾಭ ಮಾಡಿಕೊಟ್ಟಿದ್ದಾರೆ. ಅವರ ಸರಕಾರ ಉದ್ಯಮಿಗಳ ಪರವಿದೆ. ಜಿಎಸ್‌ಟಿ ಹಾಗೂ ನೋಟು ಅಮಾನ್ಯೀಕರಣದ ಮೂಲಕ ವ್ಯಾಪಾರಿಗಳ, ಸಣ್ಣ ಉದ್ದಿಮೆದಾರರ ಬದುಕನ್ನು ಹೈರಾಣಾಗಿಸಿದೆ,'' ಎಂದು ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ