ಭುವನೇಶ್ವರ: ಒಡಿಶಾದ ಗುನುಪುರ್ ಕ್ಷೇತ್ರದ ಬಿಜೆಡಿ ಶಾಸಕ ತ್ರಿನಾಥ್ ಗೊಮಾಂಗೊ ಸೋಮವಾರ ಶಾಸಕ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ತಮ್ಮನ್ನ ಉ ಕಡೆಗಣಿಸಲಾಗುತ್ತಿರುವುದೇ ಈ ನಿರ್ಧಾರಕ್ಕೆ ಕಾರಣ ಎಂದು ಅವರು ಪಕ್ಷದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. 2014ರಲ್ಲಿ ಗುನುಪುರ್ ಕ್ಷೇತ್ರದಿಂದ ಮೊದಲ ಸಲ ವಿಧಾನಸಭೆ ಪ್ರವೇಶಿಸಿದ್ದ ತ್ರಿನಾಥ್ ಅವರು ಮಾಜಿ ಮುಖ್ಯಮಂತ್ರಿ ಗಿರಿಧರ ಗೊಮಾಂಗ್ ಅವರ ಭಾವ. ಕೆಲವರ್ಷಗಳ ಹಿಂದೆ ಕಾಂಗ್ರೆಸ್ ತೊರೆದಿರುವ ಗಿರಿಧರ್, ಬಿಜೆಪಿ ಸೇರಿದ್ದಾರೆ. ತ್ರಿನಾಥ್ ಗೊಮಾಂಗ್ ಸಹ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ''ಬೆಂಬಲಿಗರ ಜತೆ ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುವೆ,'' ಎಂದು ಅವರು ತಿಳಿಸಿದ್ದಾರೆ. ಒಡಿಶಾ ವಿಧಾನಸಭೆ ಹಾಗೂ ಲೋಕಸಭೆಗಳಿಗೆ ಏ.11ರಿಂದ 29ರವರೆಗೆ ನಾಲ್ಕು ಹಂತಗಳಲ್ಲಿ ಮತದಾನ ನಡೆಯಲಿದೆ.
ಬಿಜೆಡಿ ಶಾಸಕ ತ್ರಿನಾಥ್ ಗೊಮಾಂಗೊ ರಾಜೀನಾಮೆ
ತ್ರಿನಾಥ್ ಗೊಮಾಂಗ್ ಸಹ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ''ಬೆಂಬಲಿಗರ ಜತೆ ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುವೆ,'' ಎಂದು ಅವರು ತಿಳಿಸಿದ್ದಾರೆ.
Vijaya Karnataka 19 Mar 2019, 5:00 am