ಆ್ಯಪ್ನಗರ

ಕೈ ಬಿಟ್ಟು ಕಮಲ ಹಿಡಿದ ಸುಧಾಕರ ರೆಡ್ಡಿ

ಟಿಕೆಟ್ ನೀಡಲು ಕಾಂಗ್ರೆಸ್ ಕೋಟ್ಯಂತರ ರೂಪಾಯಿ ಡಿಮ್ಯಾಂಡ್ ಮಾಡುತ್ತದೆ ಎಂದು ಆರೋಪಿಸಿ ಅವರು ಭಾನುವಾರ ಕೈ ತೊರೆದಿದ್ದರು. ಅದೇ ದಿನ ಅವರು ಬಿಜೆಪಿ ಸೇರಿದ್ದಾರೆ.

TIMESOFINDIA.COM 1 Apr 2019, 3:33 pm
ಹೊಸದಿಲ್ಲಿ: ತೆಲಂಗಾಣ ಕಾಂಗ್ರೆಸ್ ಹಿರಿಯ ನಾಯಕ ಪಿ ಸುಧಾಕರ ರೆಡ್ಡಿ ಭಾನುವಾರ ಬಿಜೆಪಿ ಸೇರಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಪಸ್ಥಿತಿಯಲ್ಲಿ ಹೊಸದಿಲ್ಲಿಯಲ್ಲಿ ಅವರು ಕಮಲದ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿದರು.
Vijaya Karnataka Web Reddy Joins BJP


ಬಳಿಕ ಮಾತನಾಡಿದ ಅವರು ನಾನಿಂದು ಅಧಿಕೃತವಾಗಿ ಬಿಜೆಪಿ ಸೇರಿದ್ದೇನೆ. ನಾಳೆ ( ಸೋಮವಾರ) ಹೈದರಾಬಾದಿನಲ್ಲಿ ನಡೆಯಲಿರುವ ಪ್ರಧಾನಿ ಮೋದಿ ರ‍್ಯಾಲಿಯಲ್ಲಿ ಪಾಲ್ಗೊಳ್ಳುತ್ತೇನೆ ಎಂದರು.

ಭಾನುವಾರ ಮುಂಜಾನೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದ ಅವರು ಪಕ್ಷ ಸೇರುವ ಇಂಗಿತ ವ್ಯಕ್ತ ಪಡಿಸಿದ್ದರು.

ಕೋಟಿ ಕೊಟ್ಟರೆ ಮಾತ್ರ ಟಿಕೆಟ್ ; ಆರೋಪಿಸಿ ಪಕ್ಷ ತೊರೆದಿದ್ದ ರೆಡ್ಡಿ

ಟಿಕೆಟ್ ನೀಡಲು ಕಾಂಗ್ರೆಸ್ ಕೋಟ್ಯಂತರ ರೂಪಾಯಿ ಡಿಮ್ಯಾಂಡ್ ಮಾಡುತ್ತದೆ ಎಂದು ಆರೋಪಿಸಿ ಅವರು ಭಾನುವಾರ ಕೈ ತೊರೆದಿದ್ದರು. ಅದೇ ದಿನ ಅವರು ಬಿಜೆಪಿ ಸೇರಿದ್ದಾರೆ.

ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಆಗಿರುವ ರೆಡ್ಡಿ ಪಕ್ಷ ತೊರೆಯುವ ಮುನ್ನ, ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ವಿರುದ್ಧವಾಗಿ ಅದರ ಸಂಪ್ರದಾಯ ಮತ್ತು ಮೌಲ್ಯಗಳು ಬದಲಾಗಿರುವುದು ದುರದೃಷ್ಟಕರ. ತೆಲಂಗಾಣ ವಿಧಾನಸಭಾ ಚುನಾವಣೆ 2018, ವಿಧಾನ ಪರಿಷತ್ ಚುನಾವಣೆ ಮತ್ತೀಗ ಲೋಕ ಸಭಾ ಚುನಾವಣೆಗಾಗಿ ನಡೆಯುತ್ತಿರುವ ಟಿಕೆಟ್ ಹಂಚಿಕೆಯಲ್ಲಿ ಹಣದ ಪ್ರಭಾವ ಹೆಚ್ಚಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದರು.

ಟಿಕೆಟ್ ಪಡೆಯಲು ಕೋಟ್ಯಂತರ ರೂಪಾಯಿ ನೀಡಬೇಕಾಗಿರುವು ನಿಜಕ್ಕೂ ಆಘಾತಕಾರಿ, ಪಕ್ಷದಲ್ಲಿ ಟಿಕೆಟ್ ವಾಣಿಜ್ಯೀಕರಣ ನಡೆಯುತ್ತಿರುವುದು ಪಕ್ಷ ತೊರೆಯಲು ನನ್ನನ್ನು ಪ್ರೇರೇಪಿಸಿತು. ರಾಜ್ಯ ನಾಯಕತ್ವವೇ ಪಕ್ಷದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿರಲು ಕಾರಣ. ಇದನ್ನೆಲ್ಲ ಪಕ್ಷದ ನಾಯಕರ ಗಮನಕ್ಕೆ ತರಲು ಪ್ರಯತ್ನಿಸಿ ವಿಫಲನಾದೆ ಎಂದವರು ಪತ್ರದಲ್ಲಿ ದೂರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ