ಆ್ಯಪ್ನಗರ

ಉಗ್ರರ ನೆಲೆ ಮುಚ್ಚಿಕೊಳ್ಳಲು ಬಾಲಕೋಟ್‌ ನಿರ್ಮಾಣದಲ್ಲಿ ತೊಡಗಿದೆ ಪಾಕ್‌: ಮೋದಿ

ನಮ್ಮ ವಾಯುಪಡೆಯ ಯೋಧರು ಮಾಡಿದ ಈ ಮಹಾನ್‌ ಕಾರ್ಯವನ್ನು ಎಲ್ಲರೂ ಶ್ಲಾಘಿಸಬೇಕು. ಆದರೆ ಚುನಾವಣೆ, ರಾಜಕೀಯ ಕಾರಣಕ್ಕಾಗಿ ಅದರ ಬಗ್ಗೆ ಚಕಾರ ಎತ್ತಿ, ಸಾಕ್ಷ್ಯಗಳನ್ನು ಕೇಳುತ್ತಿರುವ ಪ್ರತಿಪಕ್ಷಗಳ ಧೋರಣೆಗೆ ಏನು ಹೇಳಬೇಕು ಗೊತ್ತಿಲ್ಲ ಎಂದರು.

Vijaya Karnataka Web 31 Mar 2019, 9:19 pm
ಹೊಸದಿಲ್ಲಿ: ಭಯೋತ್ಪಾದನೆಗೆ ಅದರಲ್ಲೂ ಭಾರತದ ಮೇಲೆ ನಿರಂತರ ಯುದ್ಧ ಸಾರುತ್ತಿದ್ದವರನ್ನು ಮಟ್ಟ ಹಾಕುವ ಉದ್ದೇಶದಿಂದ ಭಾರತೀಯ ವಾಯುಪಡೆ ಯುದ್ಧ ವಿಮಾನಗಳು ಬಾಲಕೋಟ್‌ ಮೇಲೆ ದಾಳಿ ನಡೆಸಲು ಸೂಚಿಸಲಾಗಿತ್ತು. ನಮ್ಮ ಈ ದಾಳಿಯಿಂದ ಪಾಕಿಸ್ತಾನಕ್ಕೆ ಬಿಸಿ ತಟ್ಟಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
Vijaya Karnataka Web ನರೇಂದ್ರ ಮೋದಿ
ನರೇಂದ್ರ ಮೋದಿ


ಹೊಸದಿಲ್ಲಿಯ ತಾಲಾಕ ಟೋರಾ ಕ್ರೀಡಾಂಗಣದಲ್ಲಿ ನಾನು ಕೂಡ ಚೌಕಿದಾರ್ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಈ ವಿಷಯ ತಿಳಿಸಿದರು.

ಉಗ್ರರ ಪಾಲಿನ ಸ್ವರ್ಗ ಎಲ್ಲಿದೆ ಎಂಬುದು ಇಡೀ ಜಗತ್ತಿಗೆ ಗೊತ್ತು. ಇದನ್ನು ನಾಶಪಡಿಸುವ ಮೂಲಕ ನಾವು ಜಾಗತಿಕ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ನಮ್ಮ ಕೊಡುಗೆ ನೀಡಿದ್ದೇವೆ ಎಂದು ಮೋದಿ ತಿಳಿಸಿದರು.

ನಮ್ಮ ವಾಯುಪಡೆಯ ಯೋಧರು ಮಾಡಿದ ಈ ಮಹಾನ್‌ ಕಾರ್ಯವನ್ನು ಎಲ್ಲರೂ ಶ್ಲಾಘಿಸಬೇಕು. ಆದರೆ ಚುನಾವಣೆ, ರಾಜಕೀಯ ಕಾರಣಕ್ಕಾಗಿ ಅದರ ಬಗ್ಗೆ ಚಕಾರ ಎತ್ತಿ, ಸಾಕ್ಷ್ಯಗಳನ್ನು ಕೇಳುತ್ತಿರುವ ಪ್ರತಿಪಕ್ಷಗಳ ಧೋರಣೆಗೆ ಏನು ಹೇಳಬೇಕು ಗೊತ್ತಿಲ್ಲ ಎಂದರು.

ವಾಯುಪಡೆ ದಾಳಿಯಿಂದ ಬಾಲಕೋಟ್‌ ಉಗ್ರ ನೆಲೆ ನಾಶವಾಗಿದೆ. ಈಗ ಪಾಕಿಸ್ತಾನ ಇಲ್ಲಿ ಮರು ನಿರ್ಮಾಣ ಕಾರ್ಯ ಆರಂಭಿಸಿದೆ. ನಮ್ಮಲ್ಲಿರುವ ಕೆಲವರು ಪಾಕಿಸ್ತಾನದ ಪರವಾಗಿಯೇ ಮಾತನಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳಿಗೆ ಚಾಟಿ ಬೀಸಿದರು.

ಕಳೆದ ನಾಲ್ಕು ದಶಕಗಳಿಂದ ವಿಧ್ವಂಸಕ ಕೃತ್ಯ ನೋಡಿ ಸಾಕಾಗಿದೆ. ಇದನ್ನು ಇನ್ನೆಷ್ಟು ಸಹಿಕೊಳ್ಳೋದು. ಇದಕ್ಕೆ ಅಂತ್ಯ ಹಾಡಬೇಕಾಗಿದೆ. ಇದರ ಆರಂಭ ಕೂಡ ಆಗಿದೆ ಎಂದು ನರೇಂದ್ರ ಮೋದಿ ತಿಳಿಸಿದರು.

ಮೋದಿ ಚುನಾವಣೆಯಲ್ಲಿ ನಿರತನಾಗಿಲ್ಲ. ದೇಶ ಸೇವೆಯಲ್ಲಿ ತೊಡಗಿದ್ದೇನೆ. ಏಕೆಂದರೆ ನಮ್ಮದು ರಿಮೋಟ್‌ ಕಂಟ್ರೋಲ್‌ ಸರಕಾರವಲ್ಲ ಎಂದು ಮೋದಿ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌