ಹೊಸದಿಲ್ಲಿ: ಸಿಖ್ ವಿರೋಧಿ ದಂಗೆ ಕುರಿತು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೊಡಾ ನೀಡಿರುವ ಉದಾಸೀನದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು, ''ಈ ಹೇಳಿಕೆಯೊಂದಿಗೆ ಕಾಂಗ್ರೆಸ್ನ ಹೀನ ಮನಸ್ಥಿತಿ ಅನಾವರಣಗೊಂಡಿದೆ,'' ಎಂದಿದ್ದಾರೆ. 1984ರ ದಂಗೆಯಲ್ಲಿ ನೊಂದವರಿಗೆ ನ್ಯಾಯ ಕೊಡಿಸಲು ನರೇಂದ್ರ ಮೋದಿ ಅವರ ಸರಕಾರವೇ ಬರಬೇಕಾಯಿತು. ಅಂದಿನ ದಂಗೆಗೆ ಕಾರಣರಾದವರನ್ನು ದಂಡಿಸಿ, ನೊಂದ ಕುಟುಂಬಗಳಿಗೆ ಈಗ ಪರಿಹಾರ ನೀಡಿದ್ದಾಗಿದೆ ಎಂದು ಅಮಿತ್ ಶಾ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ''ದಂಗೆಯಲ್ಲಿ ಸಾವಿರಾರು ಸಿಖ್ಖರು ನಿರ್ದಯವಾಗಿ ಕೊಲೆಯಾದರು. ಅಂದು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ಅಮಾಯಕರ ಕೊಲೆಗಳನ್ನು ಸಮರ್ಥಿಸಿದರು. ತಪ್ಪಿತಸ್ಥರಾರನ್ನೂ ದಂಡಿಸಲಿಲ್ಲ. ಕೊನೆಗೆ ಮನಮೋಹನ್ ಸಿಂಗ್ ಮೂಲಕ ಕಾಂಗ್ರೆಸ್ ಕ್ಷಮೆಯಾಚಿಸಿತ್ತು. ಆದರೆ ಸ್ಯಾಮ್ ಪಿತ್ರೊಡಾ, 'ಆಗಿದ್ದು ಆಗಿ ಹೋಗಿತು ಏನೀಗ' ಎಂದು ಪ್ರಶ್ನಿಸುವ ಮೂಲಕ ತಮ್ಮ ಪಕ್ಷದ ಮೂಲ ಮನಸ್ಥಿತಿ ಎಂತಹದ್ದು ಎನ್ನುವುದನ್ನು ಮತ್ತೊಮ್ಮೆ ಎತ್ತಿ ತೋರಿಸಿದರು,'' ಎಂದು ಶಾ ಟೀಕಿಸಿದ್ದಾರೆ.
ಪಿಟ್ರೊಡಾ ಹೇಳಿಕೆ ಕಾಂಗ್ರೆಸ್ ಮನಸ್ಥಿತಿಯ ಕನ್ನಡಿ
ಸ್ಯಾಮ್ ಪಿತ್ರೊಡಾ, 'ಆಗಿದ್ದು ಆಗಿ ಹೋಗಿತು ಏನೀಗ' ಎಂದು ಪ್ರಶ್ನಿಸುವ ಮೂಲಕ ತಮ್ಮ ಪಕ್ಷದ ಮೂಲ ಮನಸ್ಥಿತಿ ಎಂತಹದ್ದು ಎನ್ನುವುದನ್ನು ಮತ್ತೊಮ್ಮೆ ಎತ್ತಿ ತೋರಿಸಿದರು,'' ಎಂದು ಶಾ ಟೀಕಿಸಿದ್ದಾರೆ.
Vijaya Karnataka 12 May 2019, 5:00 am