ಆ್ಯಪ್ನಗರ

ಅಧಿಕಾರದಿಂದ ಬಿಜೆಪಿಯನ್ನು ಹೊರಗಿಡಲು ದೀದಿ-ನಾಯ್ಡು ರಣತಂತ್ರ

ಇದೆಲ್ಲದರ ಹಿನ್ನೆಲೆಯಲ್ಲಿ ಮೇ 23ರಂದು ಸೋನಿಯಾ ಗಾಂಧಿ ನೇತೃತ್ವದಲ್ಲಿ ಆಯೋಜನೆಯಾಗಿರುವ ವಿಪಕ್ಷ ನಾಯಕರ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ.

Vijaya Karnataka Web 19 May 2019, 10:08 pm
ಕೋಲ್ಕತ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಶತಾಯಗತಯಾ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಹೊರಗಿಡಬೇಕು ಎಂಬ ಹಠಕ್ಕೆ ಬಿದ್ದಿದ್ದು, ಭಾರಿ ರಣತಂತ್ರವನ್ನೇ ಹೆಣೆಯುತ್ತಿದ್ದಾರೆ.
Vijaya Karnataka Web New Delhi: Andhra Pradesh Chief Minister Chandrababu Naidu during a press confer...
Andhra Pradesh Chief Minister Chandrababu Naidu during a press conference after opposition leaders meeting in New Delhi.Photo/ Manvender Vashist )(


ಮಮತಾ ಬ್ಯಾನರ್ಜಿ ಮೋದಿ ಅವರ ಖಟ್ಟರ್‌ ವಿರೋಧಿ ಎಂದು ಇತ್ತೀಚಿನ ಹಲವು ಘಟನೆಗಳಿಂದ ಬಹಿರಂಗಗೊಂಡಿದೆ. ಆಂಧ್ರ ಸಿಎಂ ನಾಯ್ಡು , ದೀದಿ ಜತೆಗೆ ಉತ್ತಮ ಒಡನಾಟ ಹೊಂದಿದ್ದಾರೆ. ನಾಯ್ಡುಗೂ ಮೋದಿ ಮತ್ತೆ ಅಧಿಕಾರ ಹಿಡಿಯುವುದು ಬೇಡವಾಗಿದೆ. ಹೀಗಾಗಿ ಇಬ್ಬರೂ ಸೇರಿ ಬಿಜೆಪಿಯೇತರ ಸರಕಾರ ರಚನೆಯ ಸಂಕಲ್ಪ ಮಾಡಿ, ಒಡೆದ ಮನೆಯಾಗಿರುವ ಮಹಾಘಟಬಂಧನವನ್ನು ಒಟ್ಟಾಗಿ ಸೇರಿಸುವ ಹರಸಾಹಸ ನಡೆಸುತ್ತಿದ್ದಾರೆ.

ದೀದಿ ರಣತಂತ್ರದಂತೆ ನಾಯ್ಡು ಹಲವು ನಾಯಕರನ್ನು ಭೇಟಿಯಾಗಿ, ಚರ್ಚೆ ನಡೆಸಿ ಸಂಖ್ಯಾಬಲ ವೃದ್ಧಿಸಿಕೊಂಡು ಕೇಂದ್ರದ ಗದ್ದುಗೆ ಹಿಡಿಯುವ ಯತ್ನ ನಡೆಸಿದ್ದಾರೆ ಎಂದು ಹಲವು ನಾಯಕರು ವಿಶ್ಲೇಷಿಸಿದ್ದಾರೆ. ಇದೆಲ್ಲದರ ಹಿನ್ನೆಲೆಯಲ್ಲಿ ಮೇ 23ರಂದು ಸೋನಿಯಾ ಗಾಂಧಿ ನೇತೃತ್ವದಲ್ಲಿ ಆಯೋಜನೆಯಾಗಿರುವ ವಿಪಕ್ಷ ನಾಯಕರ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ