ಆ್ಯಪ್ನಗರ

ಮತ ಚಲಾಯಿಸದೆ ಮಹಾಪಾಪ ಮಾಡಿದ 'ಡಿಗ್ಗಿ ರಾಜಾ': ನರೇಂದ್ರ ಮೋದಿ

ರಾಷ್ಟ್ರದ 21ನೇ ಶತಮಾನದ ಭವಿಷ್ಯವನ್ನು ನಿರ್ಣಯಿಸಲು ಹೊರಟಿರುವ ಮತದಾರರಿಗೆ ದಿಗ್ವಿಜಯ್‌ ಸಿಂಗ್‌ ನೀಡುತ್ತಿರುವ ಸಂದೇಶ ಇದೇನಾ? ಮತ ಚಲಾಯಿಸುವುದು ಪ್ರಮುಖವಲ್ಲ ಎಂಬ ಸಂದೇಶ ನೀಡುತ್ತಿದ್ದೀರಾ? ನೀವು ಮಹಾಪಾಪ ಮಾಡಿದ್ದೀರಿ, ಡಿಗ್ಗಿ ರಾಜಾ ಎಂದು ಮೋದಿ ಲೇವಡಿ ಮಾಡಿದ್ದಾರೆ.

TOI.in 13 May 2019, 4:02 pm
ರಾಟ್ಲಾಂ: ಮಧ್ಯ ಪ್ರದೇಶದ ಭೋಪಾಲ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ದಿಗ್ವಿಜಯ್‌ ಸಿಂಗ್‌ ಅವರು ಸ್ವತಃ ತಮ್ಮ ಮತ ಚಲಾವಣೆ ಮಾಡದೆ ಮಹಾಪಾಪವನ್ನು ಎಸಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Vijaya Karnataka Web pm modi says congress leader digvijaya singh not casting his vote infighting with in his party
ಮತ ಚಲಾಯಿಸದೆ ಮಹಾಪಾಪ ಮಾಡಿದ 'ಡಿಗ್ಗಿ ರಾಜಾ': ನರೇಂದ್ರ ಮೋದಿ


ದಿಗ್ವಿಜಯ್‌ ಸಿಂಗ್‌ ಮತ ಚಲಾಯಿಸದೆ ಇರುವುದು ಕಾಂಗ್ರೆಸ್‌ ಒಳಗೆ ಏನೇನು ಸರಿಯಿಲ್ಲ ಎಂಬುದನ್ನು ಬಯಲು ಮಾಡಿದೆ ಎಂದು ಮೋದಿ ಅಣಕವಾಡಿದ್ದಾರೆ. ರಾಜಗಢ ಲೋಕಸಭಾ ಕ್ಷೇತ್ರದ ಮತದಾರರಾಗಿರುವ ದಿಗ್ವಿಜಯ್‌ ಸಿಂಗ್‌ ಭಾನುವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ.

ರಾಷ್ಟ್ರದ 21ನೇ ಶತಮಾನದ ಭವಿಷ್ಯವನ್ನು ನಿರ್ಣಯಿಸಲು ಹೊರಟಿರುವ ಮತದಾರರಿಗೆ ದಿಗ್ವಿಜಯ್‌ ಸಿಂಗ್‌ ನೀಡುತ್ತಿರುವ ಸಂದೇಶ ಇದೇನಾ? ಮತ ಚಲಾಯಿಸುವುದು ಪ್ರಮುಖವಲ್ಲ ಎಂಬ ಸಂದೇಶ ನೀಡುತ್ತಿದ್ದೀರಾ? ನೀವು ಮಹಾಪಾಪ ಮಾಡಿದ್ದೀರಿ, ಡಿಗ್ಗಿ ರಾಜಾ ಎಂದು ಮೋದಿ ಲೇವಡಿ ಮಾಡಿದ್ದಾರೆ.

ಭೋಪಾಲ್‌ನಲ್ಲಿ ಕಾಂಗ್ರೆಸ್‌ ಪಕ್ಷದ ಅಹಂಕಾರವನ್ನು ನೋಡಿದ್ದಾರೆ. ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ರಾಷ್ಟ್ರವೇ ಪ್ರಜಾಪ್ರಭುತ್ವದ ಹಬ್ಬವನ್ನುಆಚರಿಸುತ್ತಿದೆ. ನಾನು ನನ್ನ ಮತ ಚಲಾಯಿಸಲು ಅಹಮದಾಬಾದ್‌ಗೆ ಹೋಗಿದ್ದೇನೆ. ರಾಷ್ಟ್ರದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಆದರೆ ಡಿಗ್ಗಿ ರಾಜಾ ಮಾತ್ರ ಪ್ರಜಾಪ್ರಭುತ್ವವನ್ನು ಕೇರ್‌ ಮಾಡಿಲ್ಲ. ಮತದಾರನ ಕರ್ತವ್ಯವನ್ನು ನಿರ್ವಹಿಸಿಲ್ಲ ಎಂದು ರಾಟ್ಲಾಂನಲ್ಲಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ