ಆ್ಯಪ್ನಗರ

ಪ್ರಧಾನಿ ಮೋದಿ ಕೇದಾರನಾಥ ಭೇಟಿ ವಿರುದ್ಧ ಚುನಾವಣೆ ಆಯೋಗಕ್ಕೆ ಟಿಎಂಸಿ ದೂರು

'ಲೋಕಸಭಾ ಚುನಾವಣೆ 2019ರ ಕೊನೆಯ ಹಂತದ ಪ್ರಚಾರ ಅವಧಿ ಮೇ 17ಕ್ಕೆ ಸಂಜೆ 6 ಗಂಟೆಗೆ ಕೊನೆಗೊಂಡಿದ್ದರೂ ನರೇಂದ್ರ ಮೋದಿ ಅವರ ಕೇದಾರನಾಥ ಯಾತ್ರೆಯನ್ನು ರಾಷ್ಟ್ರೀಯ ಹಾಗೂ ಸ್ಥಳೀಯ ಮಾಧ್ಯಮಗಳು ಎರಡು ದಿನಗಳ ಕಾಲ ವ್ಯಾಪಕವಾಗಿ ಪ್ರಸಾರ ಮಾಡಿವೆ. ಇದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ' ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಡೆರಿಕ್‌ ಒಬ್ರೈನ್ ಪತ್ರದಲ್ಲಿ ಆರೋಪಿಸಿದ್ದಾರೆ.

Vijaya Karnataka Web 19 May 2019, 1:22 pm
ಹೊಸದಿಲ್ಲಿ: ಹಿಮಾಲಯದ ತಪ್ಪಲಿನಲ್ಲಿರುವ ಕೇದಾರನಾಥ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿರುವುದನ್ನು ವಿರೋಧಿಸಿ ಟಿಎಂಸಿ ಚುನಾವಣೆ ಆಯೋಗಕ್ಕೆ ಪತ್ರ ಬರೆದಿದೆ. ಇದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಟಿಎಂಸಿ ಆರೋಪಿಸಿದೆ.

'ಲೋಕಸಭಾ ಚುನಾವಣೆ 2019ರ ಕೊನೆಯ ಹಂತದ ಪ್ರಚಾರ ಅವಧಿ ಮೇ 17ಕ್ಕೆ ಸಂಜೆ 6 ಗಂಟೆಗೆ ಕೊನೆಗೊಂಡಿದ್ದರೂ ನರೇಂದ್ರ ಮೋದಿ ಅವರ ಕೇದಾರನಾಥ ಯಾತ್ರೆಯನ್ನು ರಾಷ್ಟ್ರೀಯ ಹಾಗೂ ಸ್ಥಳೀಯ ಮಾಧ್ಯಮಗಳು ಎರಡು ದಿನಗಳ ಕಾಲ ವ್ಯಾಪಕವಾಗಿ ಪ್ರಸಾರ ಮಾಡಿವೆ. ಇದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ' ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಡೆರಿಕ್‌ ಒಬ್ರೈನ್ ಪತ್ರದಲ್ಲಿ ಆರೋಪಿಸಿದ್ದಾರೆ.


'ಕೇದಾರನಾಥ ಮಂದಿರದ ನವೀಕರಣಕ್ಕೆ ಮಾಸ್ಟರ್‌ ಪ್ಲಾನ್‌ ಅನ್ನು ಪ್ರಧಾನಿ ಮೋದಿ ಪ್ರಕಟಿಸಿದ್ದು, ದೇಗುಲ ನಗರಿಯಲ್ಲಿ ಸಾರ್ವಜನಿಕ ಸಭೆ ಮತ್ತು ಮಾಧ್ಯಮಗೋಷ್ಠಿಯನ್ನೂ ನಡೆಸಿದ್ದಾರೆ. ಇದು ಸಂಪೂರ್ಣ ಅನೈತಿಕ' ಎಂದು ಅವರು ದೂರಿದರು.

'ಅವರ ಚಟುವಟಿಕೆಗಳ ಪ್ರತಿ ಕ್ಷಣದ ಮಾಹಿತಿಗಳಿಗೂ ವ್ಯಾಪಕವಾಗಿ ಪ್ರಚಾರ ನೀಡಲಾಯಿತು. ಮತದಾರರ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವುದೇ ಉದ್ದೇಶವಾಗಿತ್ತು. 'ಮೋದಿ, ಮೋದಿ' ಮಂತ್ರವನ್ನೂ ಆಗಾಗ್ಗೆ ಕೇಳಿಸಲಾಗುತ್ತಿತ್ತು' ಎಂದು ಟಿಎಂಸಿ ನಾಯಕ ದೂರಿದ್ದಾರೆ.

ಚುನಾವಣೆ ಆಯೋಗ ದುರದೃಷ್ಟವಶಾತ್ ಪ್ರಧಾನಿಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಡೆರಿಕ್ ಒಬ್ರೈನ್ ಟೀಕಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ