ಆ್ಯಪ್ನಗರ

ಜನ ಮೂರ್ಖರೆಂದು ಭಾವಿಸುವುದನ್ನು ನಿಲ್ಲಿಸಿ: ಪ್ರಧಾನಿಗೆ ಪ್ರಿಯಾಂಕಾ

ಗಂಗಾನದಿಯಲ್ಲಿ ಮೂರು ದಿನಗಳ ದೋಣಿ ಯಾತ್ರೆಯನ್ನು ಮುಂದುವರಿಸಿರುವ ಪೂರ್ವ ಉತ್ತರ ಪ್ರದೇಶದ ಉಸ್ತುವಾರಿ ಪ್ರಿಯಾಂಕಾ, ನದಿಯ ತೀರದಲ್ಲಿರುವ ಜನರನ್ನು ಭೇಟಿ ಮಾಡಿ ಮಾತನಾಡಿಸುತ್ತಿದ್ದಾರೆ.

TIMESOFINDIA.COM 20 Mar 2019, 4:42 pm
ಮಿರ್ಜಾಪುರ: ಜನರನ್ನು ಮೂರ್ಖರೆಂದು ಭಾವಿಸುವುದನ್ನು ಪ್ರಧಾನಿ ಮೊದಲು ನಿಲ್ಲಿಸಲಿ ಎಂದು ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
Vijaya Karnataka Web Ganga


ಗಂಗಾನದಿಯಲ್ಲಿ ಮೂರು ದಿನಗಳ ದೋಣಿ ಯಾತ್ರೆಯನ್ನು ಮುಂದುವರಿಸಿರುವ ಪೂರ್ವ ಉತ್ತರ ಪ್ರದೇಶದ ಕೈ ಉಸ್ತುವಾರಿ ಪ್ರಿಯಾಂಕಾ, ನದಿಯ ತೀರದಲ್ಲಿರುವ ಜನರನ್ನು ಭೇಟಿ ಮಾಡಿ ಮಾತನಾಡಿಸುತ್ತಿದ್ದಾರೆ.

ಪ್ರಚಾರ ಭಾಷಣ ಮಾಡುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ನೀವು ಕೂಡ ಭಾಗವಾಗಿರುವ ಸಂಸ್ಥೆಗಳು ಸೇರಿದಂತೆ ಈ ದೇಶದಲ್ಲಿರುವ ಎಲ್ಲ ಸಂಸ್ಥೆಗಳನ್ನು ಸಹ ಪ್ರಧಾನಿ ಹಾಳುಗೆಡವಿದ್ದಾರೆ. ಅವರು ಜನರನ್ನು ಮೂರ್ಖರೆಂದು ಭಾವಿಸಿರುವಂತಿದೆ. ಆದರೆ ಜನರೆಲ್ಲವನ್ನು ಗಮನಿಸುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಅವರೇನು ಮಾಡಿದರೂ ಸರಿ. ನಮ್ಮ ಮೇಲೆ ದೌರ್ಜನ್ಯ ನಡೆಸಿದರೂ ಸರಿ. ನಾವು ಹೆದರುವುದಿಲ್ಲ. ನಾವು ನಮ್ಮ ಹೋರಾಟ ಮುಂದುವರಿಸುತ್ತೇವೆ. ಅವರ ದೌರ್ಜನ್ಯ ಹೆಚ್ಚಿದಂತೆ ನಮ್ಮ ಹೋರಾಟವೂ ಬಲಯುತವಾಗುತ್ತದೆ ಎಂದಿದ್ದಾರೆ ಪ್ರಿಯಾಂಕಾ.

ಬಹು ನಿರೀಕ್ಷಿತ 'ಗಂಗಾಯಾತ್ರೆ'ಯ ಮೂಲಕ ಉತ್ತರ ಪ್ರದೇಶದಲ್ಲಿ ಪಕ್ಷದ ಅಧಿಕೃತ ಪ್ರಚಾರಕ್ಕೆ ಸೋಮವಾರ ಅವರು ಚಾಲನೆ ನೀಡಿದ್ದರು. ಇಂದು ಯಾತ್ರೆಯ ಮೂರನೆಯ ಮತ್ತು ಕೊನೆಯ ದಿನವಾಗಿದೆ. ಪ್ರಿಯಾಂಕಾ ಅವರು ಪ್ರಯಾಗ್‌ರಾಜ್‌ನಿಂದ ಜಲಮಾರ್ಗದ ಮೂಲಕ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಾಣಸಿ ತಲುಪಲಿದ್ದಾರೆ. 140 ಕಿ.ಮೀ. ಪ್ರಯಾಣದ ಮಾರ್ಗಮಧ್ಯೆ ರಸ್ತೆ ಸಂಪರ್ಕದಿಂದ ದೂರವಿರುವ ಹಲವು ಕುಗ್ರಾಮಗಳಿಗೆ ತೆರಳಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ದೋಣಿ ಸಂಚರಿಸುವ ಹಾದಿಯುದ್ದಕ್ಕೂ ಸಿಗುವ ದೇಗುಲಗಳು, ದರ್ಗಾಗಳಿಗೂ ಪ್ರಿಯಾಂಕಾ ಭೇಟಿ ನೀಡಲಿದ್ದಾರೆ. ವಾರಾಣಸಿಯಲ್ಲಿ ಹಲವು ದೇಗುಲಗಳ ಸಂದರ್ಶನ ಹಾಗೂ ನೇಕಾರರೊಂದಿಗೆ ಸಂವಾದವನ್ನೂ ಕಾಂಗ್ರೆಸ್‌ ಯೋಜಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌