ಆ್ಯಪ್ನಗರ

ಜನರು ಮೂರ್ಖರಲ್ಲ: ಪ್ರಿಯಾಂಕಾ ತಿರುಗೇಟು

ಕಾಂಗ್ರೆಸ್‌ ವಿರುದ್ಧ ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಸಾಂವಿಧಾನಿಕ ಸಂಸ್ಥೆಗಳ ನಾಶ ಆರೋಪ ಮಾಡಿದ ಮೋದಿ ಅವರಿಗೆ ಪ್ರಿಯಾಂಕಾ ತಿರುಗೇಟು ನೀಡಿದ್ದಾರೆ.

Vijaya Karnataka 21 Mar 2019, 5:00 am
ಮಿರ್ಜಾಪುರ: ''ಜನರು ಮೂರ್ಖರು ಎಂದು ಯೋಚಿಸುವುದನ್ನು ಪ್ರಧಾನಿ ಮೋದಿ ಅವರು ನಿಲ್ಲಿಸಬೇಕು. ಜನರಿಗೆ ಎಲ್ಲಾವೂ ಅರ್ಥವಾಗುತ್ತದೆ ಎಂಬುದನ್ನು ಮೊದಲು ಮೋದಿ ಅರ್ಥಮಾಡಿಕೊಳ್ಳಬೇಕು'' ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗುಡುಗಿದ್ದಾರೆ.
Vijaya Karnataka Web priyankagandhi


ಕಾಂಗ್ರೆಸ್‌ ವಿರುದ್ಧ ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಸಾಂವಿಧಾನಿಕ ಸಂಸ್ಥೆಗಳ ನಾಶ ಆರೋಪ ಮಾಡಿದ ಮೋದಿ ಅವರಿಗೆ ಪ್ರಿಯಾಂಕಾ ತಿರುಗೇಟು ನೀಡಿದ್ದಾರೆ.

ನಾವು ಹೆದರಲ್ಲ: ''ಮೋದಿ ಅವರ ಆರೋಪಗಳಿಗೆ ನಾವು ಹೆದರುವುದಿಲ್ಲ. ಏನೇ ಮಾಡಿದರೂ, ನಮಗೆ ಕಿರುಕುಳ ನೀಡಿದರೂ ಅಂಜುವುದಿಲ್ಲ. ಅವರ ವಿರುದ್ಧ ಹೋರಾಟ ಮುಂದುವರಿಸುತ್ತೇವೆ. ನಮ್ಮಗೆ ಹೆಚ್ಚು ಕಷ್ಟ ಕೊಟ್ಟಷ್ಟೂ ಮತ್ತಷ್ಟು ದಿಟ್ಟವಾಗಿ ನಾವು ಹೋರಾಡುತ್ತೇವೆ,'' ಎಂದಿದ್ದಾರೆ.

''70 ವರ್ಷಗಳ ಕಾಂಗ್ರೆಸ್‌ ಆಡಳಿತ ಬಗ್ಗೆ ನೀವು ಪ್ರಶ್ನೆ ಕೇಳುತ್ತಿದ್ದೀರಿ. ಕಳೆದ 5 ವರ್ಷಗಳಿಂದ ಅಧಿಕಾರ ನಡೆಸಿದ ನೀವೇನು ಮಾಡಿದ್ದೀರಿ?'' ಎಂದು ಪ್ರಶ್ನಿಸಿರುವ ಅವರು, ಪ್ರತಿಯೊಂದು ಸಾಂವಿಧನಿಕ ಸಂಸ್ಥೆಯ ಮೇಲೂ ಪ್ರಧಾನಿ ಮೋದಿ ದಾಳಿ ನಡೆಸಿದ್ದಾರೆ,'' ಎಂದಿದ್ದಾರೆ.

ಗಂಗಾ ಯಾತ್ರೆ ಅಂತ್ಯ: ಮೂರು ದಿನಗಳ ಹಿಂದೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ ಆರಂಭಿಸಿದ್ದ ಗಂಗಾಯಾತ್ರೆ ಪ್ರಚಾರ ಅಭಿಯಾನವನ್ನು ಪ್ರಿಯಾಂಕಾ ಬುಧವಾರ ವಾರಾಣಸಿಯಲ್ಲಿ ಅಂತ್ಯಗೊಳಿಸಿದರು. ವಿವಿಧ ದೇಗುಲಗಳಿಗೆ ಭೇಟಿ ನೀಡಿದ ಅವರು, ಗಂಗಾ ಹಾರತಿ ಕಾರ‍್ಯಕ್ರಮದಲ್ಲಿ ಭಾಗಿಯಾದರು. ಬಳಿಕ ನೇಕಾರರ ಜತೆ ಸಂವಾದದಲ್ಲೂ ಪಾಲ್ಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ