ಆ್ಯಪ್ನಗರ

ಸಿದ್ದರಾಮಯ್ಯರನ್ನು ಪ್ರಚಾರಕ್ಕೆ ಆಹ್ವಾನಿಸಿದ ಪ್ರಜ್ವಲ್‌ ರೇವಣ್ಣ

ತಲೆಗೆ 500 ರೂ. ಹಂಚಿ ಜನ ಸೇರಿಸಬೇಕು ಎಂದಾದರೆ ನಾವೂ ಹಾಸನದ ತುಂಬೆಲ್ಲಾ ಜನ ಸೇರಿಸುತ್ತೇವೆ ಎಂದು ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರು ಬಿಜೆಪಿ ಎದುರಾಳಿ ಎ.ಮಂಜು ಅವರಿಗೆ ಟಾಂಗ್‌ ನೀಡಿದ್ದಾರೆ.

Vijaya Karnataka 27 Mar 2019, 5:00 am
ಬೆಂಗಳೂರು: ತಲೆಗೆ 500 ರೂ. ಹಂಚಿ ಜನ ಸೇರಿಸಬೇಕು ಎಂದಾದರೆ ನಾವೂ ಹಾಸನದ ತುಂಬೆಲ್ಲಾ ಜನ ಸೇರಿಸುತ್ತೇವೆ ಎಂದು ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರು ಬಿಜೆಪಿ ಎದುರಾಳಿ ಎ.ಮಂಜು ಅವರಿಗೆ ಟಾಂಗ್‌ ನೀಡಿದ್ದಾರೆ.
Vijaya Karnataka Web prajwal revanna invited former cm siddaramaiah for election campaign
ಸಿದ್ದರಾಮಯ್ಯರನ್ನು ಪ್ರಚಾರಕ್ಕೆ ಆಹ್ವಾನಿಸಿದ ಪ್ರಜ್ವಲ್‌ ರೇವಣ್ಣ


ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹಾಸನದಲ್ಲಿ ತಮ್ಮ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸುವಂತೆ ಮನವಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ''ದುಡ್ಡು ಹಂಚಿ ಜನರನ್ನು ಸೇರಿಸೋದು ದೊಡ್ಡ ವಿಚಾರವಲ್ಲ'' ಎಂದು ವ್ಯಂಗ್ಯವಾಡಿದರು. ''ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಚಿಕ್ಕವನಾಗಿದ್ದ ದಿನಗಳಿಂದಲೂ ಸಿದ್ದರಾಮಯ್ಯ ಅವರನ್ನು ನೋಡಿಕೊಂಡು ಬೆಳೆದಿದ್ದೇನೆ. ಅವರ ಬಗ್ಗೆ ಗೌರವ ಮತ್ತು ಅಭಿಮಾನವಿದೆ. ಮೈತ್ರಿಕೂಟದ ಅಭ್ಯರ್ಥಿಯಾದ ನನ್ನ ಪರ ಪ್ರಚಾರಕ್ಕೆ ಬರುವಂತೆ ಮನವಿ ಮಾಡಿದ್ದೇನೆ. ಕಡೂರು, ಅರಕಲಗೂಡು, ಅರಸೀಕೆರೆ ಸೇರಿ ನಾನಾ ಕಡೆಗಳಲ್ಲಿ ಪ್ರಚಾರಕ್ಕೆ ಬರುವುದಾಗಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ'' ಎಂದು ಪ್ರಜ್ವಲ್‌ ಹೇಳಿದರು. ಸಿದ್ದರಾಮಯ್ಯ ಭೇಟಿ ಬಳಿಕ ಡಿಸಿಎಂ ಡಾ.ಜಿ.ಪರಮೇಶ್ವರ್‌ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನೂ ಪ್ರಜ್ವಲ್‌ ಭೇಟಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ