ಆ್ಯಪ್ನಗರ

ಬಹಿರಂಗ ಚರ್ಚೆಗೆ ಬನ್ನಿರೆಂದು ಆರ್‌ಜೆಡಿಗೆ ಕಿಶೋರ್‌ ಸವಾಲು

ಪ್ರಧಾನಿ ಅಭ್ಯರ್ಥಿಯಾಗುವ ಇರಾದೆಯಿಂದ ಬಿಹಾರ ಸಿಎಂ ನಿತೀಶ್‌ಕುಮಾರ್‌ ಅವರು ಆರ್‌ಜೆಡಿ-ಜೆಡಿಯು ವಿಲೀನ ಪ್ರಸ್ತಾವವನ್ನು ಜೆಡಿಯು ಉಪಾಧ್ಯಕ್ಷ ಪ್ರಶಾಂತ್‌ ಕಿಶೋರ್‌ ಮೂಲಕ ಮಂಡಿಸಿದ್ದರು. ಈ ಬಗ್ಗೆ ಲಾಲು ಜತೆ ಐದು ಸಲ ಮಾತುಕತೆ ನಡೆದಿದೆ ಎಂದು ರಾಬ್ರಿದೇವಿ ಶುಕ್ರವಾರ ಆರೋಪ ಮಾಡಿದ್ದರು.

Vijaya Karnataka 14 Apr 2019, 5:00 am
ಪಟನಾ: ಜೆಡಿಯು -ಆರ್‌ಜೆಡಿಯೊಂದಿಗೆ ವಿಲೀನ ಪ್ರಸ್ತಾವದ ಕುರಿತು ಲಾಲು ಪ್ರಸಾದ್‌ ಯಾದವ್‌ ಪತ್ನಿ ರಾಬ್ರಿದೇವಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪ್ರಶಾಂತ್‌ ಕಿಶೋರ್‌ ಅವರು, ''ಈ ಕುರಿತು ಮಾಧ್ಯಮಗಳ ಎದುರು ಬಹಿರಂಗ ಚರ್ಚೆಗೆ ಲಾಲು ಪ್ರಸಾದ್‌ ಯಾದವ್‌ ಬರಲಿ,'' ಎಂದು ಸವಾಲು ಹಾಕಿದ್ದಾರೆ. ''ರಾಬ್ರಿದೇವಿ ಆರೋಪ ಶುದ್ಧ ಸುಳ್ಳು. ಲಾಲು ಅವರು ನನ್ನ ಜತೆ ಬಹಿರಂಗ ಚರ್ಚೆಗೆ ಬರಲಿ. ಮಾಧ್ಯಮದ ಮುಂದೆ ಇಬ್ಬರೂ ಕುಳಿತು, ನಮ್ಮ ನಡುವೆ ನಡೆದ ಮಾತುಕತೆಯ ವಿವರಗಳೇನೆಂದು ಬಹಿರಂಗ ಪಡಿಸೋಣ. ಸತ್ಯ ಎಲ್ಲರಿಗೂ ಗೊತ್ತಾಗಲಿ,'' ಎಂದು ಟ್ವೀಟರ್‌ನಲ್ಲಿ ಸವಾಲು ಹಾಕಿದ್ದಾರೆ.
Vijaya Karnataka Web prashant kishor dares lalu to disclose what transpired during their talks
ಬಹಿರಂಗ ಚರ್ಚೆಗೆ ಬನ್ನಿರೆಂದು ಆರ್‌ಜೆಡಿಗೆ ಕಿಶೋರ್‌ ಸವಾಲು


ಕಿಶೋರ್‌ ಸವಾಲಿಗೆ ಟ್ವೀಟ್‌ ಮೂಲಕವೇ ಪ್ರತಿಕ್ರಿಯಿಸಿರುವ ಆರ್‌ಜೆಡಿ, ''ಆ ರೀತಿ ಮಾಧ್ಯಮದ ಮುಂದೆ ಕುಳಿತು ಚರ್ಚಿಸಿದರೆ ನಿಮ್ಮ ಘನತೆಗೇ ಧಕ್ಕೆಯಾಗುವುದು ಗ್ಯಾರಂಟಿ. ಕಿಶೋರ್‌ ಬಂದು ಚರ್ಚಿಸಿರುವುದು ಹಗಲಿನಲ್ಲಿಯೇ ವಿನಾ ರಾತ್ರಿ ಹೊತ್ತಿನಲ್ಲಿ ಅಲ್ಲ. ಮಾತುಕತೆಯ ವಿವರ ಬಹಿರಂಗ ಪಡಿಸಿದರೆ, ಮಾನ ಹೋಗುವುದು ನಿಮ್ಮದೇ ವಿನಾ ನಮ್ಮದಲ್ಲ,'' ಎಂದು ಹೇಳಿದೆ.

ಪ್ರಧಾನಿ ಅಭ್ಯರ್ಥಿಯಾಗುವ ಇರಾದೆಯಿಂದ ಬಿಹಾರ ಸಿಎಂ ನಿತೀಶ್‌ಕುಮಾರ್‌ ಅವರು ಆರ್‌ಜೆಡಿ-ಜೆಡಿಯು ವಿಲೀನ ಪ್ರಸ್ತಾವವನ್ನು ಜೆಡಿಯು ಉಪಾಧ್ಯಕ್ಷ ಪ್ರಶಾಂತ್‌ ಕಿಶೋರ್‌ ಮೂಲಕ ಮಂಡಿಸಿದ್ದರು. ಈ ಬಗ್ಗೆ ಲಾಲು ಜತೆ ಐದು ಸಲ ಮಾತುಕತೆ ನಡೆದಿದೆ ಎಂದು ರಾಬ್ರಿದೇವಿ ಶುಕ್ರವಾರ ಆರೋಪ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌