ಆ್ಯಪ್ನಗರ

ಪ್ರಶಾಂತ ಕಿಶೋರ್‌ ‘ಡಕಾಯಿತ’ ಎಂದ ಚಂದ್ರಬಾಬು ನಾಯ್ಡು

ಮುಂಬರುವ ಚುನಾವಣೆಗಳಲ್ಲಿ ಟಿಡಿಪಿ ಸೋಲು ಅನುಭವಿಸುತ್ತದೆ ಎಂದು ಭವಿಷ್ಯ ನುಡಿದ ಚುನಾವಣಾ ವಿಶ್ಲೇಷಕ, ಜೆಡಿಯು ಮುಖಂಡ ಪ್ರಶಾಂತ್‌ ಕಿಶೋರ್‌ ವಿರುದ್ಧ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಕ್ರಮಣಕಾರಿ ವಾಗ್ದಾಳಿ ನಡೆಸಿದ್ದಾರೆ.

Vijaya Karnataka 21 Mar 2019, 7:11 pm
ಅಮರಾವತಿ: ಮುಂಬರುವ ಚುನಾವಣೆಗಳಲ್ಲಿ ಟಿಡಿಪಿ ಸೋಲು ಅನುಭವಿಸುತ್ತದೆ ಎಂದು ಭವಿಷ್ಯ ನುಡಿದ ಚುನಾವಣಾ ವಿಶ್ಲೇಷಕ, ಜೆಡಿಯು ಮುಖಂಡ ಪ್ರಶಾಂತ್‌ ಕಿಶೋರ್‌ ವಿರುದ್ಧ ಆಕ್ರಮಣಕಾರಿ ವಾಗ್ದಾಳಿ ನಡೆಸಿದ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಅವರನ್ನು 'ಬಿಹಾರಿ ಡಕಾಯಿತ' ಎಂದು ಜರಿದಿದ್ದಾರೆ. ಇದಕ್ಕೆ ಪ್ರಶಾಂತ್‌ ಕಿಶೋರ್‌ ಅವರದ್ದೇ ಧಾಟಿಯಲ್ಲಿ ತಿರುಗೇಟು ನೀಡಿದ್ದಾರೆ.
Vijaya Karnataka Web Andhra Pradesh Chief Minister Chandrababu Naidu
Andhra Pradesh Chief Minister Chandrababu Naidu


ಆಂಧ್ರಪ್ರದೇಶ ವಿಧಾನಸಭೆ ಮತ್ತು ಲೋಕಸಭೆ ಏಕಕಾಲದ ಚುನಾವಣೆ ಎದುರಿಸುತ್ತಿದ್ದು, ಟಿಡಿಪಿ ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ ಎನ್ನುವ ವರದಿಗಳು ಪ್ರಕಟವಾಗಿವೆ. ಇಂತಹದ್ದೊಂದು ಒತ್ತಡದ ನಡುವೆ ನಾಯ್ಡು ತಮ್ಮ ನೆರೆ ರಾಜ್ಯದ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕರ ವಿರುದ್ಧ ಅಸಮಾಧಾನದ ಟ್ವೀಟ್‌ ಮಾಡಿದ್ದರು. ''ಟಿಡಿಪಿ ಮತ್ತು ಕಾಂಗ್ರೆಸ್‌ನ ಶಾಸಕರನ್ನು ಸೆಳೆಯುವ ಮೂಲಕ ಕೆ.ಚಂದ್ರಶೇಖರ್‌ ರಾವ್‌ ಕ್ರಿಮಿನಲ್‌ ರಾಜಕೀಯ ಮಾಡುತ್ತಿದ್ದಾರೆ. ಇವರ ಜತೆಗೆ ಸೇರಿರುವ ಬಿಹಾರದ ದರೋಡೆಕೋರ ಪ್ರಶಾಂತ್‌ ಕಿಶೋರ್‌ ಆಂಧ್ರದ ಲಕ್ಷಾಂತರ ವೋಟುಗಳನ್ನೇ ತೆಗೆದು ಹಾಕುತ್ತಿದ್ದಾನೆ,'' ಎಂದು ಟೀಕಿಸಿದ್ದರು.

ಇದಕ್ಕೆ ತಮ್ಮದೇ ಮೃದು ಧಾಟಿಯಲ್ಲಿ ಕಠಿಣ ತಿರುಗೇಟು ನೀಡಿರುವ ಕಿಶೋರ್‌, ''ಕದ ತಟ್ಟಿರುವ ಸೋಲೊಂದು ಅನುಭವಿ ರಾಜಕಾರಣಿಯನ್ನು ಅಲ್ಲಾಡಿಸಿ ಬಿಟ್ಟಿದೆ,'' ಎಂದು ಕುಟುಕಿದ್ದಾರೆ. ಜತೆಗೆ ''ಸರ್‌ಜೀ, ಆಧಾರರಹಿತ ನಿಮ್ಮ ಆಪಾದನೆ ನನ್ನನ್ನು ಚಕಿತಗೊಳಿಸಿಲ್ಲ. ಬಿಹಾರದ ವಿರುದ್ಧ ನಿಮ್ಮ ಪೂರ್ವಾಗ್ರಹ ಮತ್ತು ದುರುದ್ದೇಶದ ಅವಹೇಳನಕಾರಿ ಭಾಷೆ ಬಳಸುವ ಬದಲು ಆಂಧ್ರದ ಜನರು ನಿಮಗೆ ಮತ್ತೆ ಏಕೆ ಮತಹಾಕಬೇಕು ಎನ್ನುವುದರ ಬಗ್ಗೆ ಯೋಚಿಸಿ,'' ಎಂದು ಕಾಲೆಳೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌