ಆ್ಯಪ್ನಗರ

ಸ್ಮೃತಿಯಿಂದ ಅಮೇಠಿ ಜನರಿಗೆ ಅವಮಾನ

ಕ್ಷೇತ್ರದ ಮತದಾರರ ಜತೆ ಸೋಮವಾರ ಸಂವಾದ ನಡೆಸಿದ ಪ್ರಿಯಾಂಕಾ, ''ಕಾಂಗ್ರೆಸ್‌ ಅಧ್ಯಕ್ಷರು ಪ್ರತಿನಿಧಿಸುತ್ತಿರುವ ಕ್ಷೇತ್ರದ ಜನರು ಭಿಕ್ಷುಕರಲ್ಲ. ಬಿಜೆಪಿಯವರೇ ನಿಜವಾದ ಭಿಕ್ಷುಕರು. ಅವರೇ ನಿಮ್ಮಿಂದ ಮತ ಭಿಕ್ಷೆ ಕೋರುತ್ತಿದ್ದಾರೆ,'' ಎಂದರು. ''

Vijaya Karnataka 23 Apr 2019, 5:00 am
ಅಮೇಠಿ: ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರು ರಾಹುಲ್‌ ಗಾಂಧಿ ಅವರನ್ನು ಅವಮಾನಿಸಲೆಂದೇ ಅಮೇಠಿ ಕ್ಷೇತ್ರದಲ್ಲಿ ಶೂಗಳನ್ನು ವಿತರಿಸಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಪೂರ್ವ ವಲಯದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
Vijaya Karnataka Web priyanka


ಚುನಾವಣೆಗೂ ಮುನ್ನ ಇರಾನಿ ಅವರು ಕ್ಷೇತ್ರದ ಬಡವರಿಗೆ ಶೂ ವಿತರಿಸಿದ್ದನ್ನು ಪ್ರಸ್ತಾಪಿಸಿದ ಪ್ರಿಯಾಂಕಾ, ''ಹೊರಗಿನವರಾದ ಸ್ಮೃತಿ ಇರಾನಿ ಅಮೇಠಿಗೆ ಬಂದು ಶೂ ವಿತರಿಸಿದ್ದಾರೆ. ಆ ಮೂಲಕ ರಾಹುಲ್‌ ಗಾಂಧಿ ಅವರಿಗೆ ಅವಮಾನ ಮಾಡುವುದೇ ಇರಾನಿಯವರ ಉದ್ದೇಶ. ವಾಸ್ತವಿಕವಾಗಿ ಅವರು ಅಮೇಠಿಯ ಜನರಿಗೆ ಅವಮಾನ ಮಾಡಿದ್ದಾರೆ,'' ಎಂದು ಹೇಳಿದರು.

ಕ್ಷೇತ್ರದ ಮತದಾರರ ಜತೆ ಸೋಮವಾರ ಸಂವಾದ ನಡೆಸಿದ ಅವರು, ''ಕಾಂಗ್ರೆಸ್‌ ಅಧ್ಯಕ್ಷರು ಪ್ರತಿನಿಧಿಸುತ್ತಿರುವ ಕ್ಷೇತ್ರದ ಜನರು ಭಿಕ್ಷುಕರಲ್ಲ. ಬಿಜೆಪಿಯವರೇ ನಿಜವಾದ ಭಿಕ್ಷುಕರು. ಅವರೇ ನಿಮ್ಮಿಂದ ಮತ ಭಿಕ್ಷೆ ಕೋರುತ್ತಿದ್ದಾರೆ,'' ಎಂದರು. ''ಅಮೇಠಿಯ ಜನ ಬಹಳ ಸೂಕ್ಷ್ಮ ಮನಸ್ಸಿನವರು. ಇಲ್ಲಿ ಫುಡ್‌ ಪಾರ್ಕ್‌ ನಿರ್ಮಾಣಕ್ಕೆ ಪ್ರಯತ್ನಿಸಿದವರು ಯಾರು ಮತ್ತು ಯಾವ ಕಾರಣದಿಂದ ಈವರೆಗೂ ಅದು ಆರಂಭವಾಗಿಲ್ಲ ಎನ್ನುವುದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲರು. ಒಂದೊಮ್ಮೆ ಫುಡ್‌ ಪಾರ್ಕ್‌ ಕಾರ್ಯರಂಭ ಮಾಡಿದ್ದರೆ ಕ್ಷೇತ್ರದ ಐದು ಲಕ್ಷ ಜನರಿಗೆ ಉದ್ಯೋಗ ಸಿಗುತ್ತಿತ್ತು,'' ಎಂದು ಹೇಳಿದರು.

ಪ್ರಿಯಾಂಕಾ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ, ''ಮೂಲತಃ ನಾನು ನಟಿ. ಪ್ರಿಯಾಂಕಾ ಅವರ ನಾಟಕವನ್ನು ಅರ್ಥ ಮಾಡಿಕೊಳ್ಳಬಲ್ಲೆ. ಪ್ರಿಯಾಂಕಾ ಬಡವರ ಮನೆಗಳಿಗೆ ತೆರಳಿ ಪಾದರಕ್ಷೆಯೂ ಇಲ್ಲದೇ ಜನ ಹೇಗೆ ಪರದಾಡುತ್ತಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲಿ,'' ಎಂದಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಅವರಿಗೆ ತೀವ್ರ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದ್ದ ಸ್ಮೃತಿ ಇರಾನಿ, ಈ ಸಲ ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌