ಮುಂಬಯಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ ಮಾಧ್ಯಮ ಸಂಯೋಜಕಿಯಾಗಿದ್ದ ಪ್ರಿಯಾಂಕಾ ಚತುರ್ವೇದಿ ಶುಕ್ರವಾರ ಕಾಂಗ್ರೆಸ್ ತೊರೆದು, ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಅನ್ನು ತೀವ್ರವಾಗಿ ವಿರೋಧಿಸುವ ಶಿವಸೇನೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕೈ ಪಾಳಯಕ್ಕೆ ಒಂದೇ ದಿನ ಎರಡು ಆಘಾತ ನೀಡಿದ್ದಾರೆ.
ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಅಮಾನತು ಮಾಡುವ ನಾಟಕವಾಡಿ, ಮತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇ ತಮ್ಮ ಈ ನಿರ್ಧಾರಕ್ಕೆ ಕಾರಣ ಎಂದು ಪ್ರಿಯಾಂಕಾ ಸ್ಪಷ್ಟಪಡಿಸಿದ್ದಾರೆ. ''ಮಹಿಳಾ ಸ್ವಾವಲಂಬನೆ ಕುರಿತು ನಾನು ಸಾಕಷ್ಟು ಸಲ ಮಾತನಾಡಿದ್ದೇನೆ. ಆದರೆ ಪಕ್ಷದ ಕಾರ್ಯಕರ್ತರೇ ನನಗೆ ಅವಮಾನ ಮಾಡಿದಾಗ ನೋವು ಸಹಿಸಿಕೊಳ್ಳಲು ಆಗಲಿಲ್ಲ. ನನ್ನ ಗೌರವಕ್ಕಾಗಿ ನಾನು ಹೋರಾಟ ಮಾಡದಿದ್ದರೆ, ಅದು ಮಹಿಳಾ ಸಮುದಾಯಕ್ಕೆ ಮಾಡುವ ಅವಮಾನ ಎಂಬ ಭಾವನೆಯಿಂದ ಪಕ್ಷ ತೊರೆದಿದ್ದೇನೆ,'' ಎಂದು ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿ ಬದಲು ಶಿವಸೇನೆ ಸೇರಿದ್ದೇಕೆ ಎಂದು ಪ್ರಶ್ನಿಸಿದಾಗ, ''ನಾನು ಮುಂಬಯಿಯವಳು. ಮುಂಬಯಿ ನನ್ನ ಕರ್ಮಭೂಮಿ. ಹೀಗಾಗಿ ಬಿಜೆಪಿಗಿಂತಲೂ ಶಿವಸೇನೆ ಹೆಚ್ಚು ಆಪ್ತವಾಗುತ್ತದೆ. ಸಾಕಷ್ಟು ಯೋಚಿಸಿದ ಬಳಿಕವೇ ಈ ನಿರ್ಧಾರಕ್ಕೆ ಬಂದಿದ್ದೇನೆ,'' ಎಂದು ಹೇಳಿದರು. ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದರಿಂದ ಪಕ್ಷ ಬಿಡುವ ತೀರ್ಮಾನ ಕೈಗೊಂಡಿರುವ ವದಂತಿ ಅಲ್ಲಗಳೆದ ಅವರು, ಮಹಿಳೆಯರ ಸ್ವಾಭಿಮಾನದ ಸಲುವಾಗಿ ಕಾಂಗ್ರೆಸ್ ತ್ಯಜಿಸಿರುವುದಾಗಿ ಪುನರುಚ್ಚರಿಸಿದರು.
ತಮ್ಮ ನಿವಾಸ 'ಮತೋಶ್ರೀ'ಯಲ್ಲಿ ಪ್ರಿಯಾಂಕಾ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡ ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ ಅವರು, ''ಪ್ರಿಯಾಂಕಾ ರೂಪದಲ್ಲಿ ಪಕ್ಷದ ಕಾರ್ಯಕರ್ತರಿಗೆ ಒಳ್ಳೆಯ ಸಹೋದರಿ ಸಿಕ್ಕಿದ್ದಾರೆ. ಅವರ ಸಾಮರ್ಥ್ಯಕ್ಕೆ ಅನುಗುಣವಾದ ಹುದ್ದೆ ನೀಡಲಾಗುವುದು,'' ಎಂದು ತಿಳಿಸಿದರು.
ಯಾವುದೇ ವ್ಯಕ್ತಿ ಪಕ್ಷ ತೊರೆದಾಗಲೂ ನೋವಾಗುತ್ತದೆ. ಉಜ್ವಲ ಭವಿಷ್ಯ ಅರಸಿ ಪ್ರಿಯಾಂಕಾ ಚತುರ್ವೇದಿ ಕಾಂಗ್ರೆಸ್ ತೊರೆದಿದ್ದಾರೆ. ಆದರೆ ಇದರಲ್ಲಿ ನನ್ನ ನಾಯಕತ್ವದ ವೈಫಲ್ಯವೂ ಇದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ.
- ರಣದೀಪ್ ಸುರ್ಜೆವಾಲಾ, ಕಾಂಗ್ರೆಸ್ ವಕ್ತಾರ
ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಅಮಾನತು ಮಾಡುವ ನಾಟಕವಾಡಿ, ಮತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇ ತಮ್ಮ ಈ ನಿರ್ಧಾರಕ್ಕೆ ಕಾರಣ ಎಂದು ಪ್ರಿಯಾಂಕಾ ಸ್ಪಷ್ಟಪಡಿಸಿದ್ದಾರೆ. ''ಮಹಿಳಾ ಸ್ವಾವಲಂಬನೆ ಕುರಿತು ನಾನು ಸಾಕಷ್ಟು ಸಲ ಮಾತನಾಡಿದ್ದೇನೆ. ಆದರೆ ಪಕ್ಷದ ಕಾರ್ಯಕರ್ತರೇ ನನಗೆ ಅವಮಾನ ಮಾಡಿದಾಗ ನೋವು ಸಹಿಸಿಕೊಳ್ಳಲು ಆಗಲಿಲ್ಲ. ನನ್ನ ಗೌರವಕ್ಕಾಗಿ ನಾನು ಹೋರಾಟ ಮಾಡದಿದ್ದರೆ, ಅದು ಮಹಿಳಾ ಸಮುದಾಯಕ್ಕೆ ಮಾಡುವ ಅವಮಾನ ಎಂಬ ಭಾವನೆಯಿಂದ ಪಕ್ಷ ತೊರೆದಿದ್ದೇನೆ,'' ಎಂದು ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿ ಬದಲು ಶಿವಸೇನೆ ಸೇರಿದ್ದೇಕೆ ಎಂದು ಪ್ರಶ್ನಿಸಿದಾಗ, ''ನಾನು ಮುಂಬಯಿಯವಳು. ಮುಂಬಯಿ ನನ್ನ ಕರ್ಮಭೂಮಿ. ಹೀಗಾಗಿ ಬಿಜೆಪಿಗಿಂತಲೂ ಶಿವಸೇನೆ ಹೆಚ್ಚು ಆಪ್ತವಾಗುತ್ತದೆ. ಸಾಕಷ್ಟು ಯೋಚಿಸಿದ ಬಳಿಕವೇ ಈ ನಿರ್ಧಾರಕ್ಕೆ ಬಂದಿದ್ದೇನೆ,'' ಎಂದು ಹೇಳಿದರು. ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದರಿಂದ ಪಕ್ಷ ಬಿಡುವ ತೀರ್ಮಾನ ಕೈಗೊಂಡಿರುವ ವದಂತಿ ಅಲ್ಲಗಳೆದ ಅವರು, ಮಹಿಳೆಯರ ಸ್ವಾಭಿಮಾನದ ಸಲುವಾಗಿ ಕಾಂಗ್ರೆಸ್ ತ್ಯಜಿಸಿರುವುದಾಗಿ ಪುನರುಚ್ಚರಿಸಿದರು.
ತಮ್ಮ ನಿವಾಸ 'ಮತೋಶ್ರೀ'ಯಲ್ಲಿ ಪ್ರಿಯಾಂಕಾ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡ ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ ಅವರು, ''ಪ್ರಿಯಾಂಕಾ ರೂಪದಲ್ಲಿ ಪಕ್ಷದ ಕಾರ್ಯಕರ್ತರಿಗೆ ಒಳ್ಳೆಯ ಸಹೋದರಿ ಸಿಕ್ಕಿದ್ದಾರೆ. ಅವರ ಸಾಮರ್ಥ್ಯಕ್ಕೆ ಅನುಗುಣವಾದ ಹುದ್ದೆ ನೀಡಲಾಗುವುದು,'' ಎಂದು ತಿಳಿಸಿದರು.
ಯಾವುದೇ ವ್ಯಕ್ತಿ ಪಕ್ಷ ತೊರೆದಾಗಲೂ ನೋವಾಗುತ್ತದೆ. ಉಜ್ವಲ ಭವಿಷ್ಯ ಅರಸಿ ಪ್ರಿಯಾಂಕಾ ಚತುರ್ವೇದಿ ಕಾಂಗ್ರೆಸ್ ತೊರೆದಿದ್ದಾರೆ. ಆದರೆ ಇದರಲ್ಲಿ ನನ್ನ ನಾಯಕತ್ವದ ವೈಫಲ್ಯವೂ ಇದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ.
- ರಣದೀಪ್ ಸುರ್ಜೆವಾಲಾ, ಕಾಂಗ್ರೆಸ್ ವಕ್ತಾರ