ಆ್ಯಪ್ನಗರ

ಸಿಎಂ ಜತೆ ಸಮಸ್ಯೆ ಇದ್ದರೆ ಸಿಧು ರಾಜೀನಾಮೆ ನೀಡಲಿ

ಪಂಜಾಬ್‌ನ ಮತ್ತೊಬ್ಬ ಸಚಿವ ಸಾಧು ಸಿಂಗ್‌ ಧರಂಸೊತ್‌ ಸವಾಲು ಹಾಕಿದ್ದಾರೆ.

Vijaya Karnataka 21 May 2019, 5:00 am
ಚಂಡೀಗಢ : ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಜತೆಗೆ ಸಚಿವ ಸಿಧುಗೆ ಸಮಸ್ಯೆಗಳಿದ್ದಲ್ಲಿ, ಮೊದಲು ಸಂಪುಟ ಸಚಿವ ಸ್ಥಾನ ತ್ಯಜಿಸಲಿ ಎಂದು ಪಂಜಾಬ್‌ನ ಮತ್ತೊಬ್ಬ ಸಚಿವ ಸಾಧು ಸಿಂಗ್‌ ಧರಂಸೊತ್‌ ಸವಾಲು ಹಾಕಿದ್ದಾರೆ. ''ಬಿಜೆಪಿ ತ್ಯಜಿಸಿ ಸಿಧು ಕಾಂಗ್ರೆಸ್‌ಗೆ ಬಂದರು. ಕಾಂಗ್ರೆಸ್‌ನಿಂದ ಕೂಡ ಹೊರ ನಡೆದರೆ ಸಿಧು ಎಲ್ಲಿಗೆ ಹೋಗುತ್ತಾರೆ ಎಂದು ಆ ದೇವರು ಮಾತ್ರ ಹೇಳಲು ಸಾಧ್ಯ. ಪಕ್ಷದ ಸಭೆಯಲ್ಲಿ ಸಿಧು ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಹೈಕಮಾಂಡ್‌ಗೆ ಆಗ್ರಹಿಸುತ್ತೇನೆ,'' ಎಂದು ಸಾಧು ಸಿಂಗ್‌ ಹೇಳಿದ್ದಾರೆ. ''ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸಿಧು, ಕೇವಲ ರಾಜ್ಯ ಸರಕಾರವನ್ನು ಮಾತ್ರವಲ್ಲ ಕಾಂಗ್ರೆಸ್‌ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಅವರಿಗೆ ನನ್ನನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿ, ತಾವು ಸಿಎಂ ಆಗುವ ಆಸೆ ಇದೆ,'' ಎಂದು ಭಾನುವಾರ ಸಿಎಂ ಅಮರಿಂದರ್‌ ಸಿಂಗ್‌ ಆರೋಪಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ