ಆ್ಯಪ್ನಗರ

ವಾಯುದಾಳಿಗೆ ರಾಹುಲ್‌ ಮತ್ತವರ ಸಹಚರರಿಂದ ಮೌನಾಚರಣೆ!

ಬಿಹಾರದ ಮುಂಗೇರ್‌, ಬೇಗುಸರಾಯ್‌, ಉಜಿಯಾರ್‌ಪುರದಲ್ಲಿ ಬುಧವಾರ ಭರ್ಜರಿ ಪ್ರಚಾರ ಸಭೆ ನಡೆಸಿದ ಶಾ ಅವರು ಭಾಷಣದುದ್ದಕ್ಕೂಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

Vijaya Karnataka 25 Apr 2019, 10:20 am
ಬೆಗುಸರಾಯ್‌: ಪುಲ್ವಾಮಾ ಉಗ್ರ ದಾಳಿಗೆ ಪ್ರತಿಕಾರವಾಗಿ ಭಾರತ ಬಾಲಾಕೋಟ್‌ ಮೇಲೆ ವಾಯುದಾಳಿ ನಡೆಸಿ ಉಗ್ರರ ಸಂಹಾರ ನಡೆಸಿದ ಕಾರ್ಯಾಚರಣೆ ಬಗ್ಗೆ ಇಡೀ ದೇಶಕ್ಕೆ ಹೆಮ್ಮೆ ಇದೆ. ಆದರೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತವರ ಮಿತ್ರಕೂಟ ಈ ಬಗ್ಗೆ ಮೌನಾಚರಣೆ ನಡೆಸಿತ್ತು ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಆರೋಪಿಸಿದ್ದಾರೆ.
Vijaya Karnataka Web amith shah


ಬಿಹಾರದ ಮುಂಗೇರ್‌, ಬೇಗುಸರಾಯ್‌, ಉಜಿಯಾರ್‌ಪುರದಲ್ಲಿ ಬುಧವಾರ ಭರ್ಜರಿ ಪ್ರಚಾರ ಸಭೆ ನಡೆಸಿದ ಶಾ ಅವರು ಭಾಷಣದುದ್ದಕ್ಕೂ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ''ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ ಹಾಗೂ ದೇಶದ್ರೋಹ ಕಾಯಿದೆ ರದ್ದುಗೊಳಿಸುವ ವಿಚಾರವನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಕಾಂಗ್ರೆಸ್‌ಗೆ ದೇಶದ ಭದ್ರತೆ ಬಗ್ಗೆ ಮಾತನಾಡುವ ಯಾವ ಹಕ್ಕೂ ಇಲ್ಲ. ಬಾಲಾಕೋಟ್‌ ದಾಳಿ ಬಗ್ಗೆ ಇಡೀ ದೇಶ ಹೆಮ್ಮೆ ಪಟ್ಟರೆ, ರಾಹುಲ್‌ ಬಾಬಾ ಮತ್ತವರ ಮಿತ್ರಕೂಟ ಮೌನಾಚರಣೆ ನಡೆಸಿತು,'' ಎಂದು ಆಪಾದಿಸಿದರು. ಕಾಶ್ಮೀರದ ಪ್ರತ್ಯೇಕತಾವಾದಿಗಳ ಬಗ್ಗೆ ಮೃದು ಧೋರಣೆ ತಾಳಿರುವ ಕಾಂಗ್ರೆಸ್‌ನಿಂದ ರಾಷ್ಟ್ರೀಯತೆಯ ಪಾಠದ ಅಗತ್ಯ ನಮಗೆ ಬೇಕಿಲ್ಲ. ಒಂದಂತೂ ಸತ್ಯ ಮೋದಿ ಸರಕಾರ ಇರೋವರೆಗೂ ದೇಶದ್ರೋಹಿಗಳಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ಕಾಂಗ್ರೆಸ್‌ ಮಿತ್ರಪಕ್ಷವಾಗಿರುವ ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಉಮರ್‌ ಅಬ್ದುಲ್ಲಾ ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕು ಎನ್ನುತ್ತಾರೆ. ಇಂತಹ ಹೇಳಿಕೆ ನೀಡಲು ಅವರಿಗೆ ನಾಚಿಕೆಯಾಗಬೇಕು. ಈ ಬಗ್ಗೆ ರಾಹುಲ್‌ ಏಕೆ ಮೌನವಹಿಸಿದ್ದಾರೆ ಎಂದು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌