ಆ್ಯಪ್ನಗರ

ಉಳಿದವರ ಮಾನ ಕಳೆದ ಚೌಕೀದಾರ

ಚೌಕೀದಾರ ಛೋರ್‌ ಹೈ ಎಂದು ಯಾರಾದರೂ ದೂಷಿಸಿದರೆ, ಉಳಿದ ಚೌಕೀದಾರರಿಗೆ ಆ ಛೋರ್‌ ಯಾರು ಎನ್ನುವುದು ಅರ್ಥವಾಗುತ್ತದೆ ಎಂದು ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದರು. ರಾಂಚಿ: ಸೇನೆ ಮೇಲಿನ ಪುಲ್ವಾಮಾ ಉಗ್ರ ದಾಳಿ ಬಳಿಕ ಮೌನ ವಹಿಸಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಶನಿವಾರ ಮತ್ತೆ ...

Vijaya Karnataka 3 Mar 2019, 5:00 am
ರಾಂಚಿ: ಸೇನೆ ಮೇಲಿನ ಪುಲ್ವಾಮಾ ಉಗ್ರ ದಾಳಿ ಬಳಿಕ ಮೌನ ವಹಿಸಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಶನಿವಾರ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ.
Vijaya Karnataka Web rahul


''ಭ್ರಷ್ಟಾಚಾರ ನಿರ್ಮೂಲನೆ, ಉದ್ಯೋಗ ಸೃಷ್ಟಿ ಮತ್ತು ರೈತರ ಸಂಕಷ್ಟ ನಿವಾರಣೆಯಂಥ ವಿಷಯಗಳಲ್ಲಿ ಪ್ರಧಾನಿ ಮೋದಿ ಶುದ್ಧ ಸುಳ್ಳು ಹೇಳುತ್ತಿದ್ದಾರೆ. ಅಚ್ಛೇ ದಿನ್‌ ಭರವಸೆ ನೀಡಿ ಅಧಿಕಾರಕ್ಕೆ ಬಂದ ಚೌಕೀದಾರ ಈಗ ಛೋರ್‌ ಆಗಿ ಬದಲಾಗಿದ್ದಾರೆ,'' ಎಂದು ರಾಹುಲ್‌ ಆರೋಪಿಸಿದರು. ಕಾಂಗ್ರೆಸ್‌ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ರಾಹುಲ್‌, ''ಒಬ್ಬ ಚೌಕೀದಾರ ಈಗ ದೇಶದ ಉಳಿದ ಚೌಕೀದಾರರಿಗೆ ಅಪಕೀರ್ತಿ ತಂದಿದ್ದಾರೆ. ಆದರೆ, ಇವರನ್ನು ಹೊರತುಪಡಿಸಿ ಉಳಿದ ಚೌಕೀದಾರರೆಲ್ಲರೂ ಪ್ರಾಮಾಣಿಕರು. ಚೌಕೀದಾರ ಛೋರ್‌ ಹೈ ಎಂದು ಯಾರಾದರೂ ದೂಷಿಸಿದರೆ, ಉಳಿದ ಚೌಕೀದಾರರಿಗೆ ಆ ಛೋರ್‌ ಯಾರು ಎನ್ನುವುದು ಅರ್ಥವಾಗುತ್ತದೆ,'' ಎಂದು ವಾಗ್ದಾಳಿ ನಡೆಸಿದರು.

ರಫೇಲ್‌ ಪ್ರಸ್ತಾಪ: ಪುನಃ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಪ್ರಸ್ತಾಪಿಸಿದ ರಾಹುಲ್‌, ಈ ವ್ಯವಹಾರದ ಮೂಲಕ ವಾಯು ಪಡೆಯ 3000 ಕೋಟಿ ರೂ.ಗಳನ್ನು ದೋಚಿದ ಪ್ರಧಾನಿಯವರು ಎಚ್‌ಎಎಲ್‌ಗೆ ಸಿಗಬೇಕಾಗಿದ್ದ ಗುತ್ತಿಗೆ ತಪ್ಪಿಸಿ ಉದ್ಯಮಿ ಅನಿಲ್‌ ಅಂಬಾನಿ ಒಪ್ಪಿಸಿದರು ಎಂದು ಹಳೆ ಆರೋಪವನ್ನೇ ಪುನರುಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌