ಆ್ಯಪ್ನಗರ

ಮೋದಿ ದೇಶಭಕ್ತಿ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದ ರಾಹುಲ್‌

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಅಭಿಯಾನ ಮುಂದುವರಿಸಿದ್ದು, ಮೋದಿ ವಿರುದ್ಧವೇ ತಮ್ಮ ಅಸ್ತ್ರವನ್ನು ಪ್ರಯೋಗಿಸುತ್ತಿದ್ದು, ಚೀನಾದ ಎದುರು ನಮ್ಮ ಪ್ರಧಾನಿ ಧೈರ್ಯವನ್ನೇ ತೋರಿಸಲಿಲ್ಲ, ಅವರ ದೇಶಭಕ್ತಿ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದ್ದಾರೆ.

Vijaya Karnataka 20 Mar 2019, 6:00 pm
ಇಟಾನಗರ: ಈಶಾನ್ಯ ಭಾರತದಲ್ಲಿ ಚುನಾವಣಾ ಪ್ರಚಾರ ಕಹಳೆ ಮೊಳಗಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತದೇ ಹಳೆ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಟೀಕೆ ಮುಂದುವರಿಸಿದ್ದಾರೆ.
Vijaya Karnataka Web Itanagar: Congress President Rahul Gandhi with party supporters during a public ...
Congress President Rahul Gandhi with party supporters during a public meeting, in Itanagar. (Handout Photo/ PTI)(


ಅರುಣಾಚಲ ಪ್ರದೇಶದಲ್ಲಿ ಚುನಾವಣಾ ರಾರ‍ಯಲಿ ನಡೆಸಿದ ಅವರು, ''ಪುಲ್ವಾಮಾ ಉಗ್ರ ದಾಳಿಗೆ ಭಾರತ ವಾಯುದಾಳಿ ಮೂಲಕ ಪ್ರತ್ಯುತ್ತರ ನೀಡಿದ ನಂತರ ಬಿಜೆಪಿಯವರು ದೇಶಭಕ್ತಿಯನ್ನೂ ಚುನಾವಣಾ ಪ್ರಚಾರ ಸರಕಾಗಿಸಿದ್ದಾರೆ. ಆದರೆ ಕೆಲವು ವರ್ಷಗಳ ಹಿಂದೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಜತೆಗೆ ತವರು ರಾಜ್ಯ ಗುಜರಾತಿನಲ್ಲಿ ಜೋಕಾಲಿ ಆಡಿದ ಪ್ರಧಾನಿ ಮೋದಿ, ಆಗ ಉದ್ಭವಿಸಿದ್ದ ಡೊಕ್ಲಾಮ್‌ ಗಡಿ ಬಿಕ್ಕಟ್ಟನ್ನು ಅವರ ಮುಂದೆ ಪ್ರಸ್ತಾಪಿಸುವ ಧೈರ್ಯ ತೋರಲಿಲ್ಲ. ಎಲ್ಲಿ ಹೋಗಿತ್ತು ಮೋದಿ ಅವರ ದೇಶಪ್ರೇಮ?,'' ಎಂದು ಪ್ರಶ್ನಿಸಿದರು. 2017ರ ಜೂನ್‌ನಲ್ಲಿ ಡೊಕ್ಲಾಮ್‌ ಪ್ರದೇಶದಲ್ಲಿ ಚೀನಾ ಹಾಗೂ ಭಾರತದ ಸೈನಿಕರ ಮುಖಾಮುಖಿಯಿಂದ ಬಿಕ್ಕಟ್ಟು ಸೃಷ್ಟಿಯಾಗಿತ್ತು.

ಕೆಲವು ದಿನಗಳ ಹಿಂದಷ್ಟೇ ಜೈಷೆ ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಪ್ರಸ್ತಾವನೆಗೆ ವಿಶ್ವಸಂಸ್ಥೆಯಲ್ಲಿ ಚೀನಾ ಅಡ್ಡಗಾಲು ಹಾಕಿತ್ತು. ಆಗಲೂ ರಾಹುಲ್‌, ''ಪ್ರಧಾನಿ ಮೋದಿ ಚೀನಿ ಅಧ್ಯಕ್ಷರ ಮುಂದೆ ದುರ್ಬಲರಾಗಿದ್ದಾರೆ,'' ಎಂದು ಟೀಕಿಸಿದ್ದರು. ''ಚೀನಾಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಗಲು ನಿಮ್ಮ ತಾತನ (ಜವಾಹರಲಾಲ್‌ ನೆಹರೂ) ಕೊಡುಗೆ ಕಾರಣ,'' ಎಂದು ಬಿಜೆಪಿ ತಿರುಗೇಟು ನೀಡಿತ್ತು.

ವಿಶೇಷ ಸ್ಥಾನಮಾನ: ಕೇಂದ್ರದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಅರುಣಾಚಲ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ರಾಹುಲ್‌ ಘೋಷಿಸಿದರು. ಅಲ್ಲದೇ ಸ್ಥಳೀಯ ಸಂಸ್ಕೃತಿಯ ರಕ್ಷಣೆಗೆ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕಾಂಗ್ರೆಸ್‌ ಶ್ರಮಿಸಲಿದೆ ಎಂದರು. 60 ಸದಸ್ಯಬಲದ ವಿಧಾನಸಭೆ ಹಾಗೂ 2 ಲೋಕಸಭೆ ಕ್ಷೇತ್ರಗಳಿಗೆ ಏ. 11ರಂದು ಚುನಾವಣೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ