ಆ್ಯಪ್ನಗರ

ಸೋಲಿನ ಭೀತಿಯಿಂದ ಅಮೇಥಿ ಬಿಟ್ಟು ವಯನಾಡಿಗೆ ರಾಹುಲ್ ಪಲಾಯನ: ಅಮಿತ್ ಶಾ

ನಿಜಕ್ಕೂ ರಾಹುಲ್ ಪಲಾಯನ ಮಾಡಿದ್ದಾರೆಯೆ? ಅಥವಾ ಅಮೇಥಿಯಲ್ಲಿ ಸೋಲು ಖಚಿತವೆಂದು ತಿಳಿದ ಬಳಿಕ ಕೇರಳದಲ್ಲಿ ಮತೀಯ ನೆಲೆಯಲ್ಲಿ ಮತಗಳ ಧ್ರುವೀಕರಣದ ಮೂಲಕ ಗೆಲ್ಲಲು ಹೊರಟಿದ್ದಾರೆ ಎಂದು ಅಮಿತ್ ಶಾ ಹೇಳಿದರು.

Vijaya Karnataka Web 31 Mar 2019, 3:13 pm
ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿಯಲ್ಲಿ ಸೋಲಿನ ಭೀತಿಯಿಂದ ಕೇರಳಕ್ಕೆ ಪಲಾಯನ ಮಾಡಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದಾರೆ.
Vijaya Karnataka Web Amit Shah


ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿರುವ ಹೀಗೊಂದು ಸಂದೇಶ ತಮಗೂ ಬಂದಿತ್ತು ಎಂದಿರುವ ಅಮಿತ್ ಶಾ, ನಿಜಕ್ಕೂ ರಾಹುಲ್ ಪಲಾಯನ ಮಾಡಿದ್ದಾರೆಯೆ? ಅಥವಾ ಅಮೇಥಿಯಲ್ಲಿ ಸೋಲು ಖಚಿತವೆಂದು ತಿಳಿದ ಬಳಿಕ ಕೇರಳದಲ್ಲಿ ಮತೀಯ ನೆಲೆಯಲ್ಲಿ ಮತಗಳ ಧ್ರುವೀಕರಣದ ಮೂಲಕ ಗೆಲ್ಲಲು ಹೊರಟಿದ್ದಾರೆ ಎಂದು ಅಮಿತ್ ಶಾ ಹೇಳಿದರು.

ಅಮಿತ್ ಶಾ ಹೇಳಿಕೆಯನ್ನು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ. ಈ ಟ್ವೀಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳೂ ಬಂದಿವೆ.

ಎಡಪಕ್ಷ ವಿರುದ್ಧ ಹೋರಾಡಿದ್ರೆ ರಾಹುಲ್‌ಗೆ ಸೋಲು ಖಚಿತ ಎಂದ ಕೇರಳ ಸಿಎಂ

ರಾಹುಲ್ ಗಾಂಧಿ ಅಮೇಥಿಯ ಜತೆಗೆ ಕೇರಳದ ವಯನಾಡಿನಿಂದಲೂ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಎ.ಕೆ ಆಂಟನಿ ಇಂದು ಬೆಳಗ್ಗೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ವಯನಾಡಿಗೆ ಬಂದರೆ ರಾಹುಲ್‌ಗೆ ಸೋಲು ಖಚಿತ, ಎಲ್‌ಡಿಎಫ್‌ ವಿರುದ್ಧ ಸ್ಪರ್ಧೆ ಬೇಡ ಎಂದು ಎಚ್ಚರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌