ಆ್ಯಪ್ನಗರ

ಟಿಡಿಪಿ ಜನನ ಮಾರ್ಚ್ 29, ನಿಧನ ಮೇ.23: ವರ್ಮಾ ಟ್ವೀಟ್

ತೆಲುಗು ದೇಶಂ ಪಕ್ಷ ಮೃತಪಟ್ಟಿದೆ ಎಂದು ತನ್ನದೇ ಶೈಲಿಯಲ್ಲಿ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನೂ ತಿಳಿಸಿದ್ದಾರೆ. ವೈಎಸ್‌ಆರ್‌ಸಿಪಿ ಗೆಲುವಿನ ಕಡೆ ದಾಪುಗಾಲು ಹಾಕಿದ್ದು ರಾಜಕೀಯ ಪ್ರಮುಖರು, ಸಿನಿಮಾ ತಾರೆಗಳು ಟ್ವಿಟರ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

Vijaya Karnataka Web 23 May 2019, 12:59 pm
ಆಂಧ್ರಪ್ರದೇಶ ಚುನಾವಣೆ ಫಲಿತಾಂಶದಲ್ಲಿ ವೈಎಸ್‌ಆರ್‌ಸಿಪಿ ಭಾರಿ ಮುನ್ನಡೆ ಸಾಧಿಸಿದ್ದು ವೈ ಎಸ್ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸ್ಪಷ್ಟ ಸೂಚನೆ ಸಿಕ್ಕಿದೆ. ಈ ಬಗ್ಗೆ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
Vijaya Karnataka Web varma


ತೆಲುಗು ದೇಶಂ ಪಕ್ಷ ಮೃತಪಟ್ಟಿದೆ ಎಂದು ತನ್ನದೇ ಶೈಲಿಯಲ್ಲಿ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನೂ ತಿಳಿಸಿದ್ದಾರೆ. ವೈಎಸ್‌ಆರ್‌ಸಿಪಿ ಗೆಲುವಿನ ಕಡೆ ದಾಪುಗಾಲು ಹಾಕಿದ್ದು ರಾಜಕೀಯ ಪ್ರಮುಖರು, ಸಿನಿಮಾ ತಾರೆಗಳು ಟ್ವಿಟರ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಆದರೆ ರಾಮ್ ಗೋಪಾಲ್ ವರ್ಮಾ ಟಿಡಿಪಿ ಮೇಲಿನ ತನ್ನ ಸಿಟ್ಟನ್ನೆಲ್ಲಾ ಟ್ವಿಟರ್‌ನಲ್ಲಿ ಹೊರಹಾಕಿದ್ದಾರೆ. ಮೇ 23ರಂದು ಟಿಡಿಪಿ ಕೊನೆಯುಸಿರೆಳೆಯುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಹೆಸರು: ಟಿಡಿಪಿ, ಜನನ: ಮಾರ್ಚ್ 29, 1982, ನಿಧನ: ಮೇ.23, 2019 ಎಂದು ಟ್ವೀಟ್ ಮಾಡಿದ್ದಾರೆ.

ಟಿಡಿಪಿ ಸೋಲಿಗೆ ಕಾರಣಗಳನ್ನೂ ನೀಡಿದ್ದಾರೆ ವರ್ಮಾ. ಸುಳ್ಳು, ಬೆನ್ನಿಗೆ ಚೂರಿ ಇರಿದದ್ದು, ಭ್ರಷ್ಟಾಚಾರ, ಅಶಕ್ತಿ, ವೈ ಎಸ್ ಜಗನ್, ನಾರಾ ಲೋಕೇಶ್ ಕಾರಣ ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.

ಚಂದ್ರ ಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ತಡಬಡಾಯಿಸಿದ್ದು, ತಪ್ಪುಗಳು ಸಹ ಟಿಡಿಪಿ ಸೋಲಿಗೆ ಕಾರಣ ಎಂದಿದ್ದಾರೆ. ಚುನಾವಣೆಗೂ ಮುನ್ನ ವರ್ಮಾ ನಿರ್ದೇಶನದ ಲಕ್ಷ್ಮೀಸ್ ಎನ್‍ಟಿಆರ್ ಸಿನಿಮಾಗೆ ಆಂಧ್ರ ಸರಕಾರ ತಡೆಯೊಡ್ಡಿದ್ದು ಗೊತ್ತೇ ಇದೆ. ಈ ಸಿನಿಮಾದಲಿ ಎನ್‌ಟಿಆರ್‌ ಬೆನ್ನಿಗೆ ಚಂದ್ರಬಾಬು ನಾಯ್ಡು ಚೂರಿ ಇರಿದರು ಎಂಬಂತೆ ತೋರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ