ಆ್ಯಪ್ನಗರ

ಅಭ್ಯರ್ಥಿ ಗೆಲ್ಲಿಸುವ ಕಾರ್ಯಕರ್ತರಿಗೆ ಒಂದು ಕೋಟಿ ರೂ. ಬಹುಮಾನ!

ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವ ಕಾರ್ಯಕರ್ತರಿಗೆ ಚಿನ್ನದ ಸರದಿಂದ ಹಿಡಿದು ರೆಫ್ರಿಜರೇಟರ್‌ವರೆಗೆ, ಮೋಟಾರ್‌ ಬೈಕ್‌ನಿಂದ ವಿದೇಶಿ ಟ್ರಿಪ್‌ಗಳವರೆಗೆ ತರಹೇವಾರಿ ಆಮಿಷಗಳನ್ನು ಒಡ್ಡಲಾಗುತ್ತಿದೆ.

Vijaya Karnataka 1 Apr 2019, 5:00 am
ಚೆನ್ನೈ: ಚುನಾವಣೆ ಆಮಿಷಗಳ ವಿಷಯದಲ್ಲಿ ತಮಿಳುನಾಡು ಹಿಂದಿನಿಂದಲೂ ಹೆಸರುವಾಸಿ ರಾಜ್ಯ. ಸೀರೆ, ಮೂಗುತಿ, ಟಿವಿ, ರೆಫ್ರಿಜಿರೇಟರ್‌ನಂತಹ ಉಚಿತ ಉಡುಗೊರೆ ನೀಡಿ ಮತ ಕೇಳುವುದು ಇಲ್ಲಿನ ಪಕ್ಷಗಳ ಖಯಾಲಿ. ಈ ಬಾರಿ ಪಕ್ಷಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವ ಕಾರ್ಯಕರ್ತರಿಗೆ ಚಿನ್ನದ ಸರದಿಂದ ಹಿಡಿದು ರೆಫ್ರಿಜರೇಟರ್‌ವರೆಗೆ, ಮೋಟಾರ್‌ ಬೈಕ್‌ನಿಂದ ವಿದೇಶಿ ಟ್ರಿಪ್‌ಗಳವರೆಗೆ ತರಹೇವಾರಿ ಆಮಿಷಗಳನ್ನು ಒಡ್ಡಲಾಗುತ್ತಿದೆ.
Vijaya Karnataka Web money


ಅಭ್ಯರ್ಥಿಗಳು ಒಡ್ಡುವ ಆಮಿಷದ ಸುದ್ದಿ ಈ ಬಾರಿ ದೊಡ್ಡ ಸದ್ದು ಮಾಡಿದ್ದರಿಂದ ಎಚ್ಚೆತ್ತ ಆದಾಯ ತೆರಿಗೆ ಇಲಾಖೆ ದಿಢೀರ್‌ ದಾಳಿ ಸಂಘಟಿಸಿ, ಹಾವಳಿ ನಿಯಂತ್ರಿಸಲು ಪ್ರಯತ್ನಿಸಿತು. ವೆಲ್ಲೂರಿನ ಅಭ್ಯರ್ಥಿ ಕಥೀರ್‌ ಆನಂದ್‌ ನಿವಾಸದ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು 10 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಕಥೀರ್‌ ಅವರು ಡಿಎಂಕೆ ಖಜಾಂಚಿ ಡಿ.ದುರೈಮುರುಗನ್‌ ಪುತ್ರ. ಅರಕೋಣಂ ಕ್ಷೇತ್ರದ ಡಿಎಂಕೆ ಅಭ್ಯರ್ಥಿ ಜಗತ್‌ರಕ್ಷಕನ್‌ ಅವರು ತಮ್ಮ ಕ್ಷೇತ್ರದಲ್ಲಿ ಗೆಲುವಿನ ಉಸ್ತುವಾರಿ ವಹಿಸಿರುವ ಆರು ಕಾರ್ಯಕರ್ತರಿಗೆ 1 ಕೋಟಿ ರೂ. ನಗದು ಬಹುಮಾನ ನೀಡುವ ಭರವಸೆ ನೀಡಿದ್ದಾರೆ. ಶಿಕ್ಷಣ ಸಂಸ್ಥೆಗಳು ಹಾಗೂ ಹೋಟೆಲ್‌ ಉದ್ಯಮದ ಕುಬೇರ ಎನಿಸಿರುವ ಜಗತ್‌ರಕ್ಷಕನ್‌, ತಮಿಳುನಾಡಿನ ನಾಲ್ವರು ಅಗರ್ಭ ಶ್ರೀಮಂತ ಅಭ್ಯರ್ಥಿಗಳ ಪೈಕಿ ಒಬ್ಬರಾಗಿದ್ದಾರೆ. ದುರೈಮುರುಗನ್‌ ತಮ್ಮ ಪುತ್ರನ ಗೆಲುವಿಗೆ ಶ್ರಮಿಸುವ ಆಯ್ದ ಕಾರ್ಯಕರ್ತರಿಗೆ 50 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಉಚಿತ ಉಡುಗೊರೆ ನೀಡುವ ಆಮಿಷದ ವಿಷಯದಲ್ಲಿ ತಮಿಳುನಾಡಿನ ಎಲ್ಲ ಪಕ್ಷಗಳೂ ಪೈಪೋಟಿ ನಡೆಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌