ಆ್ಯಪ್ನಗರ

ರಾಜೀವ್‌ ವಿರುದ್ಧ ಪ್ರಧಾನಿ ಹೇಳಿಕೆಗೆ ಅಕಾಲಿ ದಳ ಬೆಂಬಲ

ರಾಜೀವ್‌ ಗಾಂಧಿ ದೇಶ ಕಂಡ ಅತಿದೊಡ್ಡ ಸಾಮೂಹಿಕ ಹತ್ಯೆ ಎಸಗಿದವರು.

Vijaya Karnataka 7 May 2019, 7:37 am
ಹೊಸದಿಲ್ಲಿ : ಮಾಜಿ ಪ್ರಧಾನಿ ದಿ.ರಾಜೀವ್‌ ಗಾಂಧಿ ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಯನ್ನು ಶಿರೋಮಣಿ ಅಕಾಲಿ ದಳವು, ''ರಾಜೀವ್‌ ಭ್ರಷ್ಟಾಚಾರಿ ಮಾತ್ರವಲ್ಲ, ನಿರ್ದಿಷ್ಟ ಸಮುದಾಯ ಗುರಿಯಾಗಿಸಿ ಸಾಮೂಹಿಕ ಹತ್ಯಾಕಾಂಡ ಸಂಘಟಿಸಿದ ಪ್ರಧಾನಿ ಕೂಡ ಹೌದು,'' ಎಂದು ಹೇಳಿದೆ.
Vijaya Karnataka Web modi 1111


'' ರಾಜೀವ್‌ ಗಾಂಧಿ ದೇಶ ಕಂಡ ಅತಿದೊಡ್ಡ ಸಾಮೂಹಿಕ ಹತ್ಯೆ ಎಸಗಿದವರು. ಸಿಖ್ಖರನ್ನು ಹತ್ಯೆಗೈದವರಿಗೆ ಅವರು ಬಹುಮಾನ ಕೂಡ ನೀಡಿದ್ದರು. 1984ರಲ್ಲಿ ಸಿಖ್‌ ಹತ್ಯಾಕಾಂಡ ಸಂಘಟಿಸಿದ್ದಕ್ಕಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕ್ಷಮೆ ಯಾಚಿಸಬೇಕು. ಯಾವ ಕಾರಣಕ್ಕಾಗಿ ಹತ್ಯಾಕಾಂಡದ ಸಂತ್ರಸ್ತ ಕುಟುಂಬಗಳ ಬಗ್ಗೆ ಇದುವರೆಗೂ ರಾಹುಲ್‌ ಸಾಂತ್ವನ ವ್ಯಕ್ತಪಡಿಸಿಲ್ಲ,'' ಎಂದು ಪಕ್ಷದ ವಕ್ತಾರ ಮನ್‌ಜಿಂದರ್‌ ಸಿಂಗ್‌ ಸಿರ್ಸಾ ಪ್ರಶ್ನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌