ಆ್ಯಪ್ನಗರ

ಪ್ರಾಯಶ್ಚಿತಕ್ಕಾಗಿ ಮೌನ ವ್ರತ ಆಚರಿಸಲಿರುವ ಸಾಧ್ವಿ ಪ್ರಜ್ಞಾ

ಚುನಾವಣೆ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈಗ ಚಿಂತನೆ ಮತ್ತು ಆತ್ಮಾವಲೋಕನದ ಸಮಯ ಇದು ನನ್ನ ಹೇಳಿಕೆಯಿಂದ ದೇಶಭಕ್ತರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ...

Agencies 21 May 2019, 8:17 am
ಹೊಸದಿಲ್ಲಿ : ಚುನಾವಣೆ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈಗ ಚಿಂತನೆ ಮತ್ತು ಆತ್ಮಾವಲೋಕನದ ಸಮಯ ಇದು. ನನ್ನ ಹೇಳಿಕೆಯಿಂದ ದೇಶಭಕ್ತರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಸಾರ್ವಜನಿಕ ಜೀವನದಲ್ಲಿ ಇನ್ನು ಮೂರು ದಿನ ಮೌನ ವ್ರತ ವಹಿಸುತ್ತಿದ್ದೇನೆ ಎಂದು ಭೋಪಾಲ್‌ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಷಾ ಸಿಂಗ್‌ ಟ್ವೀಟ್‌ ಮಾಡಿದ್ದಾರೆ. ಈ ಮೂಲಕ, ಗೋಡ್ಸೆ ಒಬ್ಬ ನೈಜ ರಾಷ್ಟ್ರಭಕ್ತ ಎಂಬ ತಮ್ಮ ಹೇಳಿಕೆಯಿಂದ ವಿವಾದ ಮತ್ತಷ್ಟು ಉಲ್ಬಣಗೊಳ್ಳುವುದಕ್ಕೆ ಅಂಕುಶ ಹಾಕುವ ಯತ್ನ ನಡೆಸಿದ್ದಾರೆ.
Vijaya Karnataka Web Sadvi Prgjna


ಗೋಡ್ಸೆ ಪರ ಹೇಳಿಕೆಗಾಗಿ ಸಾಧ್ವಿಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಶೋಕಾಸ್‌ ನೋಟಿಸ್‌ ನೀಡಿದ್ದು, 10 ದಿನದೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿದ್ದಾರೆ.

ಮುಂಬೈ ಎಟಿಎಸ್‌ಪಡೆಯ ಪೊಲೀಸ್‌ ಅಧಿಕಾರಿ ಹೇಮಂತ್‌ ಕರ್ಕರೆ ಮೃತಪಡಲು ನನ್ನ ಶಾಪವೇ ಕಾರಣ ಎಂದು ಏಪ್ರಿಲ್‌ನಲ್ಲಿ ಸಾಧ್ವಿ ಪ್ರಜ್ಞಾ ಮತ್ತೊಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು.

ಮಾಲೇಗಾಂವ್‌ ಸ್ಫೋಟ ಪ್ರಕರಣ ಹಿನ್ನೆಲೆಯಲ್ಲಿ ಪೊಲೀಸ್‌ ವಶದಲ್ಲಿದ್ದಾಗ ಕರ್ಕರೆ ತನಗೆ ಹಿಂಸೆ ನೀಡಿದ್ದರು. ಅವರಿಗೆ ಶಪಿಸಿದ್ದೆ. ಹಾಗಾಗಿ ಉಗ್ರರಿಂದ ಅವರು ಹತ್ಯೆಗೀಡಾದರು ಎಂದು ಸಾಧ್ವಿ ಆರೋಪಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ