ಆ್ಯಪ್ನಗರ

ಪ್ರೀತಿಗೆ ಮಾತ್ರ ದ್ವೇಷ ಗೆಲ್ಲುವ ಶಕ್ತಿ ಇದೆ ಎಂದು ರಾಹುಲ್‌

ಸಿಖ್‌ ವಿರೋಧಿ ದಂಗೆ ಕುರಿತು ಕಾಂಗ್ರೆಸ್‌ ನಾಯಕ ಸ್ಯಾಮ್‌ ಪಿತ್ರೊಡಾ ಆಡಿರುವ ಮಾತುಗಳಿಗೆ ತಮ್ಮ ಸಮ್ಮತಿ ಇಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದ್ದಾರೆ...

Vijaya Karnataka 12 May 2019, 5:00 am
ಭೋಪಾಲ್‌: ಸಿಖ್‌ ವಿರೋಧಿ ದಂಗೆ ಕುರಿತು ಕಾಂಗ್ರೆಸ್‌ ನಾಯಕ ಸ್ಯಾಮ್‌ ಪಿತ್ರೊಡಾ ಆಡಿರುವ ಮಾತುಗಳಿಗೆ ತಮ್ಮ ಸಮ್ಮತಿ ಇಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದ್ದಾರೆ.
Vijaya Karnataka Web sam pitroda wrong no debate on 1984 tragedy rahul gandhi
ಪ್ರೀತಿಗೆ ಮಾತ್ರ ದ್ವೇಷ ಗೆಲ್ಲುವ ಶಕ್ತಿ ಇದೆ ಎಂದು ರಾಹುಲ್‌


1984ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ ಸುಮಾರು 3 ಸಾವಿರ ಸಿಖ್ಖರು ಹತ್ಯೆಗೀಡಾಗಿದ್ದರು. ಈ ಕುರಿತು ಪ್ರಸ್ತಾಪಿಸಿದ್ದ ಪತ್ರೊಡಾ, ಈ ಚುನಾವಣೆಗೆ ಆ ವಿಷಯ ಚರ್ಚಿಸುವಷ್ಟು ಪ್ರಸ್ತುತ ಅಲ್ಲ ಎಂದಿದ್ದರು. ಅದಾಗಿ ಕಾಂಗ್ರೆಸ್‌ಗೆ ಅಂಟಿದ ಕಳಂಕ ಕುರಿತು ಪ್ರಶ್ನಿಸಿದಾಗ, ''ಹೌದು ನಡೆದು ಹೋಗಿದೆ, ಏನೀಗ?,'' ಎಂದು ಪ್ರಶ್ನಿಸಿದ್ದರು. ''ಪಿತ್ರೊಡಾ ಏನು ಹೇಳಿದ್ದಾರೋ, ಅದು ತಪ್ಪು. ಆ ರೀತಿ ಮಾತಾಡಬೇಡಿ ಎಂದು ಅವರಿಗೆ ಸಲಹೆ ನೀಡಿದ್ದೇನೆ. 1984ರ ದುರಂWತದ ಕುರಿತು ಚರ್ಚೆ ಬೇಕಾಗಿಲ್ಲ. ಅಂದು ಹಿಂಸಾಚಾರ ಎಸಗಿದ್ದು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು,'' ಎಂದು ರಾಹುಲ್‌ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಪ್ರಧಾನಿ ಮೋದಿ ಅತ್ಯಂತ ಶ್ರಮ ಜೀವಿ, ದಿನದಲ್ಲಿ 3 ತಾಸು ಮಾತ್ರ ನಿದ್ರಿಸಿ ಉಳಿದ ಅವಧಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎನ್ನುವ ಪ್ರಶಂಸೆ ಇದೆ ಎಂಬ ಕುರಿತು ಅವರ ಗಮನ ಸೆಳೆದಾಗ, ''ಹಾಗಾದರೆ ದೇಶವನ್ನು ಕಾಡುತ್ತಿರುವ ಭ್ರಷ್ಟಾಚಾರ, ನೋಟು ನಿಷೇಧ, ಜಿಎಸ್‌ಟಿ ಮತ್ತು ರೈತರ ಸಮಸ್ಯೆ ಕುರಿತು ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರಲಿ,'' ಎಂದು ಸವಾಲು ಹಾಕಿದರು. ಅಲ್ಲದೇ, ದೇಶವನ್ನು ಹಾಳು ಮಾಡುವುದು ಹೇಗೆಂಬುದನ್ನು ಮೋದಿ ಅವರಿಂದ ಕಲಿಯಬೇಕು ಎಂದು ಟೀಕಿಸಿದರು.

ನಮ್ಮ ಬಗ್ಗೆ ದ್ವೇಷ: ''ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ನರೇಂದ್ರ ಮೋದಿ ಅವರ ಹೃದಯದಲ್ಲಿ ನಮ್ಮ ಕುಟುಂಬದ ಬಗ್ಗೆ ಅಪಾರ ದ್ವೇಷ ಇದೆ, ಆದರೆ ನಾನು ಮಾತ್ರ ಪ್ರಧಾನಿಯನ್ನು ಅಪ್ಪಿಕೊಳ್ಳುವುದನ್ನು ಮುಂದುವರಿಸುತ್ತೇನೆ. ಯಾಕೆಂದರೆ ಪ್ರೀತಿಗೆ ಮಾತ್ರ ದ್ವೇಷವನ್ನು ಸೋಲಿಸುವ ಸಾಮರ್ಥ್ಯ‌ ಇದೆ,'' ಎಂದು ರಾಹುಲ್‌ ಗಾಂಧಿ ಹೇಳಿದರು. ಮಧ್ಯಪ್ರದೇಶದಲ್ಲಿ ಶನಿವಾರ ಪ್ರಚಾರ ರಾರ‍ಯಲಿಯಲ್ಲಿ ಮಾತನಾಡಿದ ರಾಹುಲ್‌, ಈ ಚುನಾವಣೆ ಕಾಂಗ್ರೆಸ್‌ ಮತ್ತು ಬಿಜೆಪಿ-ಆರ್‌ಎಸ್‌ಎಸ್‌ ಎರಡು ಸಿದ್ಧಾಂತಗಳ ನಡುವಿನ ಸಮರ ಎಂದು ಬಣ್ಣಿಸಿದರು.

''ನನ್ನ ಕುಟುಂಬದ ಬಗ್ಗೆ ಮೋದಿ ಅವರಲ್ಲಿ ಇರುವ ದ್ವೇಷದ ಭಾವನೆಯನ್ನು ತೊಡೆದು ಹಾಕುವುದು ನಮ್ಮ ಕೆಲಸ. ನನ್ನ ತಂದೆ, ನನ್ನ ಅಜ್ಜಿ ಮತ್ತು ನನ್ನ ಮುತ್ತಜ್ಜನ ಬಗ್ಗೆ ಅವರು (ಮೋದಿ) ದ್ವೇಷ ಹಾಗೂ ಆಕ್ರೋಶದಿಂದ ಮಾತಾಡುತ್ತಾರೆ. ಆದರೆ ನಾನು ಅವರ ಬಳಿ ಹೋಗಿ ಅಪ್ಪುಗೆ ನೀಡುತ್ತೇನೆ. ಪ್ರೀತಿಯ ಮೂಲಕ ದ್ವೇಷ ಭಾವನೆ ಅಳಿಸುತ್ತೇನೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ