ಆ್ಯಪ್ನಗರ

ಆಯೋಗದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ತೇಜ್‌ ಮಾಡಿರುವ ಆರೋಪಗಳನ್ನು ಪರಿಶೀಲಿಸಿ, ಅವರ ನಾಮಪತ್ರ ತಿರಸ್ಕೃತಗೊಂಡಿದ್ದಕ್ಕೆ ಸೂಕ್ತ ಕಾರಣವನ್ನು ಗುರುವಾರ ಸಲ್ಲಿಸುವಂತೆ ಸಿಜೆಐ ನೇತೃತ್ವದ ಪೀಠ ನಿರ್ದೇಶಿಸಿದೆ.

Vijaya Karnataka 9 May 2019, 5:00 am
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿರುವುದನ್ನು ಬಿಎಸ್‌ಎಫ್‌ ಮಾಜಿ ಯೋಧ ತೇಜ್‌ ಬಹದ್ದೂರ್‌ ಯಾದವ್‌ ಪ್ರಶ್ನಿಸಿರುವ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
Vijaya Karnataka Web download (1)


ತೇಜ್‌ ಮಾಡಿರುವ ಆರೋಪಗಳನ್ನು ಪರಿಶೀಲಿಸಿ, ಅವರ ನಾಮಪತ್ರ ತಿರಸ್ಕೃತಗೊಂಡಿದ್ದಕ್ಕೆ ಸೂಕ್ತ ಕಾರಣವನ್ನು ಗುರುವಾರ ಸಲ್ಲಿಸುವಂತೆ ಸಿಜೆಐ ನೇತೃತ್ವದ ಪೀಠ ನಿರ್ದೇಶಿಸಿದೆ.

ತೇಜ್‌ ಪರ ವಾದಿಸಿದ ವಕೀಲ ಪ್ರಶಾಂತ್‌ ಭೂಷಣ್‌ ಪ್ರಕರಣ ಸಂಬಂಧ ತ್ವರಿತ ತೀರ್ಪು ನೀಡುವಂತೆ ಸಿಜೆಐ ಪೀಠಕ್ಕೆ ಮನವಿ ಮಾಡಿದರು.

ಮೊದಲು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ತೇಜ್‌ ಬಹದ್ದೂರ್‌ಗೆ ಬಳಿಕ ಸಮಾಜವಾದಿ ಪಕ್ಷದಿಂದ ಟಿಕೆಟ್‌ ನೀಡಲಾಗಿತ್ತು. ಬಳಿಕ ತೇಜ್‌ ಮತ್ತೊಂದು ನಾಮಪತ್ರ ಸಲ್ಲಿಸಿದ್ದರು. ಎರಡೂ ನಾಮಪತ್ರಗಳಲ್ಲಿ ಹಲವು ವ್ಯತ್ಯಾಸಗಳಿವೆ ಎಂದು ರಿಟರ್ನಿಂಗ್‌ ಆಫಿಸರ್‌(ಆರ್‌ಒ) ತೇಜ್‌ಗೆ ನೋಟಿಸ್‌ ನೀಡಿದ್ದರು. 2017ರಲ್ಲಿ ಬಿಎಸ್‌ಎಫ್‌ನಿಂದ ಅಮಾನತುಗೊಂಡ ಮಾಹಿತಿಯನ್ನು ಎರಡನೇ ನಾಮಪತ್ರದಲ್ಲಿ ಅವರು ದಾಖಲಿಸಿರಲಿಲ್ಲ ಎಂದು ಆಫಿಸರ್‌ ಹೇಳಿದ್ದರು. ಭ್ರಷ್ಟಾಚಾರ ಅಥವಾ ದೇಶವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ತೇಜ್‌ರನ್ನು ಅಮಾನತು ಮಾಡಲಾಗಿಲ್ಲ ಎಂದು ಬಿಎಸ್‌ಎಫ್‌ ನೀಡುವ ಪ್ರಮಾಣಪತ್ರವನ್ನು ಕೂಡ ತೇಜ್‌ ಸಲ್ಲಿಸಿಲ್ಲ ಎಂದು ಆರ್‌ಒ ಹೇಳಿದ್ದರು. ಹೀಗಾಗಿ ನಾಮಪತ್ರ ತಿರಸ್ಕೃತಗೊಂಡಿತ್ತು. ಮೇ 19ಕ್ಕೆ ವಾರಾಣಸಿಯಲ್ಲಿ ಮತದಾನ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ