ಆ್ಯಪ್ನಗರ

ಬಿಜೆಪಿ ಅಭ್ಯರ್ಥಿಗೆ ಮೇ 28ರವರೆಗೆ ಬಂಧನದಿಂದ ರಕ್ಷಣೆ ನೀಡಿದ ಕೋರ್ಟ್‌

ಅರ್ಜುನ್‌ ಸಿಂಗ್‌ ವಿರುದ್ಧ ಮಮತಾ ಬ್ಯಾನರ್ಜಿ ಸರಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಏಪ್ರಿಲ್‌ 4ರಿಂದ ಮೇ 20ರವರೆಗಿನ ಅವಧಿಯಲ್ಲಿ ಅವರ ವಿರುದ್ಧ 20 ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಾಗಿದೆ ಎಂದು ಸಿಂಗ್‌ ಅವರ ವಕೀಲ ರಂಜಿತ್‌ ಕುಮಾರ್‌ ನ್ಯಾಯಪೀಠಕ್ಕೆ ಮನವರಿಕೆ

PTI 23 May 2019, 5:00 am
ಹೊಸದಿಲ್ಲಿ: ಕ್ರಿಮಿನಲ್‌ ಅಪರಾಧ ಪ್ರಕರಣಗಳ ಆರೋಪ ಎದುರಿಸುತ್ತಿರುವ ಪಶ್ಚಿಮ ಬಂಗಾಳದ ಬರಾಖ್‌ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರ್ಜುನ್‌ ಸಿಂಗ್‌ ಅವರಿಗೆ ಮೇ 28ರವರೆಗೆ ಪೊಲೀಸ್‌ ಬಂಧನದಿಂದ ಸುಪ್ರೀಂ ಕೋರ್ಟ್‌ ರಕ್ಷಣೆ ನೀಡಿದೆ. ಗುರುವಾರ ನಡೆಯುವ ಮತ ಎಣಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಿಂಗ್‌ ಅವರಿಗೆ ಅನುವು ಮಾಡಿಕೊಟ್ಟ ಸುಪ್ರೀಂ ಕೋರ್ಟ್‌ನ ರಜಾಕಾಲದ ಪೀಠವು, ಮೇ 28ರವರೆಗೆ ಅವರನ್ನು ಬಂಧಿಸಕೂಡದು ಎಂದು ಪಶ್ಚಿಮ ಬಂಗಾಳ ಸರಕಾರಕ್ಕೆ ತಾಕೀತು ಮಾಡಿತು. ''ಅರ್ಜುನ್‌ ಸಿಂಗ್‌ ವಿರುದ್ಧ ಮಮತಾ ಬ್ಯಾನರ್ಜಿ ಸರಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಏಪ್ರಿಲ್‌ 4ರಿಂದ ಮೇ 20ರವರೆಗಿನ ಅವಧಿಯಲ್ಲಿ ಅವರ ವಿರುದ್ಧ 20 ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಾಗಿದೆ,'' ಎಂದು ಸಿಂಗ್‌ ಅವರ ವಕೀಲ ರಂಜಿತ್‌ ಕುಮಾರ್‌ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.
Vijaya Karnataka Web sc grants protection from arrest till may 28 to bjp candidate from barrackpore ls seat
ಬಿಜೆಪಿ ಅಭ್ಯರ್ಥಿಗೆ ಮೇ 28ರವರೆಗೆ ಬಂಧನದಿಂದ ರಕ್ಷಣೆ ನೀಡಿದ ಕೋರ್ಟ್‌




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ