ಆ್ಯಪ್ನಗರ

ಮೋದಿಯಿಂದ ತಪ್ಪಾಗಬಹುದು, ಆದ್ರೆ ದುಷ್ಕೃತ್ಯ ಸಾಧ್ಯವಿಲ್ಲ: ಶಂಕರ್ ಬಿದರಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರಷ್ಟೇ ಅಲ್ಲ ಮಾಣಿಕ್ ಸರಕಾರ ಅವರು ತ್ರಿಪುರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಇಂಥ ರಾಜಕಾರಣಿಗಳಿಗೆ ಪ್ರೋತ್ಸಾಹ ನೀಡುವುದು ಅವಶ್ಯವಿದೆ ಎಂದು ಹೇಳಿದರು.

Vijaya Karnataka Web 15 Mar 2019, 4:47 pm
ಕೊಪ್ಪಳ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಂದ ತಪ್ಪುಗಳಾಗಬಹುದು. ಆದರೆ, ದುಷ್ಕೃತ್ಯ ಮಾತ್ರ ಸಾಧ್ಯವಿಲ್ಲಲ್ಲ. ಆದ್ದರಿಂದ ದೇಶ ಪ್ರೇಮ ಹೊಂದಿರುವ ವ್ಯಕ್ತಿಗಳೇ ಪ್ರಧಾನಿ ಆಗಬೇಕಾಗಿದೆ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ಅಭಿಪ್ರಾಯಪಟ್ಟರು.
Vijaya Karnataka Web shankar bidari


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರಷ್ಟೇ ಅಲ್ಲ ಮಾಣಿಕ್ ಸರಕಾರ ಅವರು ತ್ರಿಪುರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಇಂಥ ರಾಜಕಾರಣಿಗಳಿಗೆ ಪ್ರೋತ್ಸಾಹ ನೀಡುವುದು ಅವಶ್ಯವಿದೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ಯಾರು ?ಯಾಕೆ ? ಕಣ್ಣೀರು ಹಾಕಿದರು ಎಂಬುದು ಗೊತ್ತಿಲ್ಲ. ಸುಮಾರು 30 ವರ್ಷದ ಹಿಂದೆಯೇ ಅಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದು, ನಂತರ ಅಲ್ಲಿಗೆ ಹೋಗಿಲ್ಲ. ಆದ್ದರಿಂದ ಕಣ್ಣೀರು ಯಾಕೆ ಹಾಕಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.

ದುಡ್ಡು ಮಾಡುವುದಕ್ಕಾಗಿ ರಾಜಕೀಯಕ್ಕೆ ಬರುವುದು ಸರಿಯಲ್ಲ. ದುಡ್ಡು ಗಳಿಸುವುದಕ್ಕೆ ಸಾಕಷ್ಟು ದಾರಿಗಳಿವೆ.ಆದರೆ ಜನಸೇವೆ ಹೆಸರಿನಲ್ಲಿ ಡಕಾಯಿತಿ ಮಾಡುವುದು ಬೇಡ ಎಂದು ಕಿವಿ ಮಾತು ಹೇಳಿದರು.

ರಾಜಕೀಯಕ್ಕೆ ಬರುವ ಬಹುತೇಕರು ಸ್ವಾರ್ಥ, ಹಣ ಮಾಡುವ ಉದ್ದೇಶ, ವೈಯಕ್ತಿಕ ಕೆಲಸ, ಕ್ರಿಮಿನಲ್ ಪ್ರಕರಣದಿಂದ ಪಾರಾಗುವುದು ಸೇರಿದಂತೆ ನಾನಾ ಆಸೆ ಈಡೇರಿಸಿಕೊಳ್ಳಲು ರಾಜಕೀಯ ಪ್ರವೇಶಿಸುತ್ತಿದ್ದಾರೆ. ಆದರೆ ನನಗೆ ಈ ತರಹದ ಉದ್ದೇಶದಿಂದ ರಾಜಕೀಯ ಸೇರುವ ಇರಾದೆ ಇಲ್ಲ. ದೇಶಕ್ಕಾಗಿ ಹಾಗೂ ನಿಸ್ವಾರ್ಥ ಸೇವೆಗಾಗಿ ರಾಜಕೀಯಕ್ಕೆ ಬರಬೇಕು. ಒಂದು ವೇಳೆ ಹಣ ಮಾಡುವ ಉದ್ದೇಶ ಹೊಂದಿದ್ದಾರೆ ಸಾಕಷ್ಟು ದಾರಿಗಳಿವೆ. ಬಡ್ಡಿ ವ್ಯವಹಾರ, ಕಿರಾಣಿ ಅಂಗಡಿ, ಡಕಾಯಿತಿ ಮಾಡಲಿ ಬೇಡ ಎನ್ನುವರ್ಯಾರು? ಆದರೆ ಸೇವೆಯ ಹೆಸರಿನಲ್ಲಿ ಡಕಾಯಿ ಮಾಡುವುದು ಸರಿಯಲ್ಲ. ರಾಜಕೀಯದಲ್ಲಿ ಎಲ್ಲರೂ ಒಂದೆ ರೀತಿ ಇಲ್ಲ. ಶೇ. 15 ರಿಂದ 20 ರಷ್ಟು ಜನರು ಒಳ್ಳೆಯವರಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ