ಆ್ಯಪ್ನಗರ

ಪಾಕ್‌ ಮೇಲೆ ಆಕ್ರಮಣ ಮಾಡಲು ಧೈರ್ಯ ತೋರುವ ಪ್ರಧಾನಿ ಬೇಕು, ಹೀಗಾಗಿ ಬಿಜೆಪಿ ಜತೆ ಮೈತ್ರಿ: ಶೀವಸೇನೆ

ಕೆಲವು ವಿಷಯಗಳಲ್ಲಿ ಬಿಜೆಪಿ ಜತೆ ಭಿನ್ನಾಭಿಪ್ರಾಯ ಇದೆ. ಆದರೆ ದೇಶ ರಕ್ಷಣೆ, ಭದ್ರತೆ ವಿಷಯದಲ್ಲಿ ಯಾವುದೇ ರಾಜೀ ಇಲ್ಲ. ಗಡಿ ಕಾಯುವ ಪ್ರಧಾನಿಗೆ ನಮ್ಮ ಬೆಂಬಲ. ಹೀಗಾಗಿ ಬಿಜೆಪಿ ಜತೆ ಮೈತ್ರಿಕೊಂಡಿದ್ದೇವೆ.

Vijaya Karnataka Web 20 Apr 2019, 7:37 pm
ಮುಂಬೈ: ಪಾಕಿಸ್ತಾನದ ಮೇಲೆ ಅತಿಕ್ರಮಣ ಮಾಡಲು ಧೈರ್ಯ ಇರುವವರು, ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ಪ್ರಧಾನಿ ಬೇಕಾಗಿದೆ. ಹೀಗಾಗಿ ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.
Vijaya Karnataka Web ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ


ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಯನ್ನು ಉದ್ಧವ್‌ ಸಮರ್ಥಿಸಿಕೊಂಡಿದ್ದಾರೆ.

ಕೆಲವು ವಿಷಯಗಳಲ್ಲಿ ಬಿಜೆಪಿ ಜತೆ ಭಿನ್ನಾಭಿಪ್ರಾಯ ಇದೆ. ಆದರೆ ದೇಶ ರಕ್ಷಣೆ, ಭದ್ರತೆ ವಿಷಯದಲ್ಲಿ ಯಾವುದೇ ರಾಜೀ ಇಲ್ಲ. ಗಡಿ ಕಾಯುವ ಪ್ರಧಾನಿಗೆ ನಮ್ಮ ಬೆಂಬಲ. ಹೀಗಾಗಿ ಬಿಜೆಪಿ ಜತೆ ಮೈತ್ರಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಔರಂಗಾಬಾದ್‌ನಲ್ಲಿ ಪ್ರಚಾರ ಭಾಷಣ ಮಾಡಿದ ಉದ್ಧವ್‌ ಠಾಕ್ರೆ, ದೇಶದ ಜತೆಗೆ ನಮ್ಮ ರಾಜ್ಯದ ಹಿತಾಸಕ್ತಿಯು ನಮಗೆ ಮುಖ್ಯ. ಮರಾಠವಾಡ, ಮಹಾರಾಷ್ಟ್ರ ಕಲ್ಯಾಣಕ್ಕಾಗಿ ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದರು.

ಜಮ್ಮು ಕಾಶ್ಮೀರಕ್ಕೆ ನೀಡಲಾಗಿರುವ 370ನೇ ವಿಧಿ ರದ್ದುಪಡಿಸುವ ಕುರಿತು ಬಿಜೆಪಿ ನಿಲುವಿಗೆ ಶಿವಸೇನೆ ಬೆಂಬಲ ನೀಡಿದೆ.

ಇಡೀ ದೇಶಕ್ಕೆ ಅನ್ವಯವಾಗು ನೀತಿ ಜಮ್ಮು ಕಾಶ್ಮೀರಕ್ಕೂ ಅನ್ವಯವಾಗಬೇಕು. ಇದನ್ನು ವಿರೋಧಿಸುವ ಕಾಂಗ್ರೆಸ್‌ ದ್ವಿಮುಖ ಧೋರಣೆ ಹೊಂದಿದೆ ಎಂದು ಶಿವಸೇನೆ ನಾಯಕರು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರ ವಿಷಯದಲ್ಲಿ ಬಿಜೆಪಿ ಕೆಲವು ನಿರ್ಧಾರಗಳನ್ನು ಸ್ಪಷ್ಟವಾಗಿ ತೆಗೆದುಕೊಂಡಿದೆ ಎಂದು ಉದ್ಧವ್‌ ಠಾಕ್ರೆ ತಿಳಿಸಿದರು.

ನರೇಂದ್ರ ಮೋದಿ ಆಡಳಿತದ ಕುರಿತು ಕಳೆದ ನಾಲ್ಕೂವರೆ ವರ್ಷದಲ್ಲಿ ಅತಿ ಹೆಚ್ಚು ಟೀಕೆ ಮಾಡಿದ್ದು ಶಿವಸೇನೆ. ಆದರೂ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೈತ್ರಿ ಮುಂದುವರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌