ಆ್ಯಪ್ನಗರ

Party History: ಮರಾಠಿ ಅಸ್ಮಿತೆಯೇ ಶಿವಸೇನೆಗೆ ಜೀವಾಳ

ಮರಾಠಿ ಅಸ್ಮಿತೆ ಮತ್ತು ಹಿಂದೂ ರಾಷ್ಟ್ರವಾದ ಸಿದ್ಧಾಂತದ ನೆಲೆಯಲ್ಲಿ ಉದಯವಾಗಿರುವ ಶಿವಸೇನೆ ಮಹಾರಾಷ್ಟ್ರದ ಪ್ರಮುಖ ರಾಜಕೀಯ ಪಕ್ಷ . ಬಾಳಾ ಠಾಕ್ರೆ ಅವರು 1966 ಜೂನ್‌ 19ರಂದು ಸ್ಥಾಪಿಸಿದರು.

Vijaya Karnataka 14 Mar 2019, 5:00 am
ಮರಾಠಿ ಅಸ್ಮಿತೆ ಮತ್ತು ಹಿಂದೂ ರಾಷ್ಟ್ರವಾದ ಸಿದ್ಧಾಂತದ ನೆಲೆಯಲ್ಲಿ ಉದಯವಾಗಿರುವ ಶಿವಸೇನೆ ಮಹಾರಾಷ್ಟ್ರದ ಪ್ರಮುಖ ರಾಜಕೀಯ ಪಕ್ಷ . ಬಾಳಾ ಠಾಕ್ರೆ ಅವರು 1966 ಜೂನ್‌ 19ರಂದು ಸ್ಥಾಪಿಸಿದರು. ಶಿವಸೇನೆಗೆ ಪಕ್ಷ ದ ಮಾನ್ಯತೆ ದೊರೆಯುವ ಮುಂಚೆ ಅದಕ್ಕೆ ಮುಂಬೈಯಲ್ಲಿ ಚಳವಳಿಯ ಸ್ವರೂಪವಿತ್ತು. ವಲಸಿಗರಿಂದಲೇ ತುಂಬಿರುವ ಮುಂಬೈ ಮಹಾನಗರದಲ್ಲಿ ಸ್ಥಳೀಯ ಮರಾಠಿಗರಿಗೇ ಆದ್ಯತೆ ದೊರಕಿಸುವುದಕ್ಕಾಗಿ ಬಾಳಾ ಠಾಕ್ರೆ ಅವರು ಆಂದೋಲನವನ್ನೇ ಶುರು ಮಾಡಿದ್ದರು. ಮುಂಬೈ ಮಹಾರಾಷ್ಟ್ರೀಯನ್ನರಿಗೆ ಸೇರಿದ್ದು ಎಂಬುದು ಅವರ ವಾದವಾಗಿತ್ತು. ಬಾಳಾ ಠಾಕ್ರೆ ಅವರು ಶಿವಸೇನೆಯ ಅಗ್ರ ನಾಯಕರಾದರೂ ಅವರು ಒಮ್ಮೆಯೂ ಸ್ಪರ್ಧಿಸಿಲ್ಲ. ಕೊನೆಯವರೆಗೂ 'ಕಿಂಗ್‌ ಮೇಕರ್‌' ಆಗಿಯೇ ಉಳಿದಿದ್ದ ಅವರು ದಶಕಗಳ ಕಾಲ ಮಹಾರಾಷ್ಟ್ರದ ರಾಜಕಾರಣವನ್ನು ಅವರು ತಮ್ಮ ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿದ್ದರು. ಸದ್ಯ ಶಿವಸೇನೆಯ ನಾಯಕತ್ವವನ್ನು ಬಾಳಾ ಠಾಕ್ರೆ ಅವರ ಪುತ್ರ ಉದ್ದವ್‌ ಠಾಕ್ರೆ ವಹಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರಾಬಲ್ಯ ಹೊಂದಿರುವ ಶಿವಸೇನೆಯನ್ನು ದೇಶಾದ್ಯಂತ ವಿಸ್ತರಿಸುವ ಕೆಲಸವನ್ನು ಮಾಡಲಾಯಿತಾದರೂ ಯಶಸ್ಸು ದೊರೆಯಲಿಲ್ಲ. ಬಿಜೆಪಿಯ ಸಹಜ ಮಿತ್ರಪಕ್ಷ ವಾಗಿದ್ದ ಶಿವಸೇನೆ ಮೊದಲು ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಅಡಿಯಿಟ್ಟಿತು. 1989ರಲ್ಲಿ ಬಿಜೆಪಿಯ ಜತೆ ಮೈತ್ರಿ ಮಾಡಿಕೊಂಡ ಶಿವಸೇನೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲೂ ಸ್ಪರ್ಧಿಸಿತು. 1995-1999ರ ಅವಧಿಯಲ್ಲಿ ಶಿವಸೇನೆ ನೇತೃತ್ವದ ಸರಕಾರ ಮಹಾರಾಷ್ಟ್ರದಲ್ಲಿತ್ತು. ಬಿಜೆಪಿ-ಶಿವಸೇನೆ ಮೈತ್ರಿ 2014ರ ವಿಧಾನಸಭೆ ಚುನಾವಣೆವರೆಗೆ ಸದೃಢವಾಗಿತ್ತು. ಆದರೆ, ಈ ಚುನಾವಣೆಯಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಶಿವಸೇನೆ ಮೈತ್ರಿಯಿಂದ ಹೊರ ಬಂದು ಏಕಾಂಗಿಯಾಗಿ ಸ್ಪರ್ಧಿಸಿತು. ಆದರೆ, ಚುನಾವಣೆ ಬಳಿಕ ಮತ್ತೆ ಬಿಜೆಪಿಯೊಂದಿಗೆ ಸೇರಿ ಸರಕಾರ ರಚಿಸಲು ನೆರವಾಯಿತು. ಸದ್ಯ, ಲೋಕಸಭೆಯಲ್ಲಿ 18, ರಾಜ್ಯಸಭೆಯಲ್ಲಿ 3 ಸಂಸದರಿದ್ದಾರೆ. ಹಾಗೆಯೇ ಮಹಾರಾಷ್ಟ್ರ ವಿಧಾನಸಭೆಯಲ್ಲಿ 62 ಶಾಸಕರನ್ನು ಶಿವಸೇನೆ ಹೊಂದಿದೆ. ಮಹಾರಾಷ್ಟ್ರದ ಮರಾಠ ಸಮುದಾಯವೇ ಶಿವಸೇನೆಯ ಬಹುದೊಡ್ಡ ಬೆಂಬಲಿಗ ಸಮುದಾಯವಾಗಿದೆ. 2005ರಲ್ಲಿ ಶಿವಸೇನೆಯ ಪ್ರಮುಖ ನಾಯಕ ನಾರಾಯಣ್‌ ರಾಣೆಯನ್ನು ಪಕ್ಷ ದಿಂದ ಹೊರಹಾಕಲಾಯಿತು. ಈ ವೇಳೆ ಅನೇಕ ಬದಲಾವಣೆಗಳಾದವು, ರಾಜ್‌ ಠಾಕ್ರೆ ಅವರೂ ಶಿವಸೇನೆಯಿಂದ ಹೊರ ಬಂದು ತಮ್ಮದೇ ಆದ ನವ ನಿರ್ಮಾಣ ಸೇನೆಯನ್ನು ಸ್ಥಾಪಿಸಿಕೊಂಡರು.
Vijaya Karnataka Web Bal Thakary

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌