ಹೊಸದಿಲ್ಲಿ: ಚುನಾವಣೆ ಹೊತ್ತಲ್ಲಿ ನಾಯಕರ ಪಕ್ಷ ಜಿಗಿದಾಟ ಮತ್ತಷ್ಟು ಜೋರಾಗಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ (ಎಸ್ಪಿ) ಇಬ್ಬರು ಹಾಗೂ ರಾಷ್ಟ್ರೀಯ ಲೋಕ ಸಮತಾ ಪಕ್ಷದ (ಆರ್ಎಲ್ಎಸ್ಪಿ) ಒಬ್ಬ ನಾಯಕರು ಬುಧವಾರ ದಿಲ್ಲಿಯಲ್ಲಿ ಬಿಜೆಪಿ ಸೇರಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಮ್ಮುಖದಲ್ಲಿ ಎಸ್ಪಿ ನಾಯಕರಾದ ಉ.ಪ್ರದೇಶದ ಮಾಜಿ ಸಚಿವ ರಾಮ್ ಸಕಲ್ ಗುರ್ಜಾರ್, ಮಾಜಿ ಶಾಸಕ ರಾಜೇಂದ್ರ ಸಿಂಗ್ ಹಾಗೂ ಆರ್ಎಲ್ಎಸ್ಪಿಯ ಶಿವರಾಜ್ ಸಿಂಗ್ ಅವರು ಬಿಜೆಪಿಗೆ ಸೇರ್ಪಡೆಯಾಗಿ ಪ್ರಧಾನಿ ಮೋದಿ ಸರಕಾರದ ಗುಣಗಾನ ಮಾಡಿದ್ದಾರೆ. ಈ ಮೂವರೂ ನಾಯಕರ ಸೇರ್ಪಡೆಯಿಂದ ಆಗ್ರಾ ಮತ್ತು ಫತೇಹಾಬಾದ್ನಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.
ಎಸ್ಪಿ, ಆರ್ಎಲ್ಎಸ್ಪಿಯ ಮೂವರು ನಾಯಕರು ಬಿಜೆಪಿಗೆ
ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಮ್ಮುಖದಲ್ಲಿ ಎಸ್ಪಿ ನಾಯಕರಾದ ಉ.ಪ್ರದೇಶದ ಮಾಜಿ ಸಚಿವ ರಾಮ್ ಸಕಲ್ ಗುರ್ಜಾರ್, ಮಾಜಿ ಶಾಸಕ ರಾಜೇಂದ್ರ ಸಿಂಗ್ ಹಾಗೂ ಆರ್ಎಲ್ಎಸ್ಪಿಯ ಶಿವರಾಜ್ ಸಿಂಗ್ ಅವರು ಬಿಜೆಪಿಗೆ ಸೇರ್ಪಡೆಯಾಗಿ ಪ್ರಧಾನಿ ಮೋದಿ ಸರಕಾರದ ಗುಣಗಾನ ಮಾಡಿದ್ದಾರೆ.
Vijaya Karnataka 4 Apr 2019, 5:00 am