ಆ್ಯಪ್ನಗರ

ಜನರ ಒಲವು ನಮ್ಮ ಪರ: ಮೋದಿ

ಅಸ್ಸಾಂನ ಸಿಲ್ಚಾರ್‌ನಲ್ಲಿ ಪ್ರಚಾರ ಸಭೆ ನಡೆಸಿದ ಮೋದಿ, ''ಜನರು ಈಗಾಗಲೇ ಬಿಜೆಪಿಗೆ ತಮ್ಮ ಮತ ಎಂದು ನಿರ್ಧರಿಸಿಯಾಗಿದೆ. ಇಲ್ಲಿ ಪ್ರತಿಪಕ್ಷಗಳಿಗೆ ಅವಕಾಶವೇ ಉಳಿದಿಲ್ಲ. ಜನರ ಒಲವು ನಮ್ಮ ಪಕ್ಷಕ್ಕಿದೆ. ಭಾರತ ಯಾವ ದಿಶೆಯತ್ತ ಸಾಗಿದೆ ಎಂಬುದನ್ನು ಈ ಚುನಾವಣೆ ನಿರ್ಧರಿಸುತ್ತದೆ,'' ಎಂದರು.

Vijaya Karnataka 12 Apr 2019, 5:00 am
ಸಿಲ್ಚಾರ್‌: ''ದೇಶಾದ್ಯಂತ ಜನರ ಒಲವು ನಮ್ಮ ಪರವಿದೆ. ಚುನಾವಣಾ ರಾರ‍ಯಲಿಗೆ ಸೇರುವ ಜನರಿಂದಲೇ ಜನರ ಅನಿಸಿಕೆ ಏನೆಂದು ಗೊತ್ತಾಗುತ್ತಿದೆ,'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Vijaya Karnataka Web modi


ಅಸ್ಸಾಂನ ಸಿಲ್ಚಾರ್‌ನಲ್ಲಿ ಪ್ರಚಾರ ಸಭೆ ನಡೆಸಿದ ಮೋದಿ, ''ಜನರು ಈಗಾಗಲೇ ಬಿಜೆಪಿಗೆ ತಮ್ಮ ಮತ ಎಂದು ನಿರ್ಧರಿಸಿಯಾಗಿದೆ. ಇಲ್ಲಿ ಪ್ರತಿಪಕ್ಷಗಳಿಗೆ ಅವಕಾಶವೇ ಉಳಿದಿಲ್ಲ. ಜನರ ಒಲವು ನಮ್ಮ ಪಕ್ಷಕ್ಕಿದೆ. ಭಾರತ ಯಾವ ದಿಶೆಯತ್ತ ಸಾಗಿದೆ ಎಂಬುದನ್ನು ಈ ಚುನಾವಣೆ ನಿರ್ಧರಿಸುತ್ತದೆ,'' ಎಂದರು.

''ನಮ್ಮ ಸರಕಾರ ರಾಷ್ಟ್ರೀಯ ಪೌರತ್ವ (ತಿದ್ದುಪಡಿ) ವಿಧೇಯಕ ಜಾರಿಗೆ ಬದ್ಧವಾಗಿದ್ದು, ಇದರಿಂದ ಅಸ್ಸಾಂ ಜನರ ಮೇಲೆ ಪ್ರಭಾವ ಬೀರುವುದಿಲ್ಲ. ಈ ವಿಷಯವನ್ನು ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿಯೇ ಸ್ಪಷ್ಟಪಡಿಸಿದೆ. ಅಸ್ಸಾಂ ಮತ್ತು ಈಶಾನ್ಯ ರಾಜ್ಯದ ಜನರು ತಮ್ಮ ಅಸ್ಮಿತೆಗಾಗಿ ಹೇಗೆ ಹೋರಾಡುತ್ತಿದ್ದರು ಎಂಬುದು ನೆನಪಿದೆ. ಆದರೆ ಕಾಂಗ್ರೆಸ್‌ ಬಾಂಗ್ಲಾದೇಶದ ಅಕ್ರಮ ನುಸುಳುಕೋರರ ಸಮಸ್ಯೆ ಬಗೆಹರಿಸದೇ ಅವರನ್ನೇ ವೋಟ್‌ ಬ್ಯಾಂಕ್‌ ಆಗಿ ಬಳಸಿಕೊಂಡು ಅಧಿಕಾರಕ್ಕೆ ಬಂತು,'' ಎಂದು ವಾಗ್ದಾಳಿ ನಡೆಸಿದರು. ಬಿಜೆಪಿಗೆ ನೀವು ಹಾಕುವ ಒಂದೊಂದು ಮತವೂ ದೇಶದ ಭದ್ರತಾ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲಿದೆ ಎಂದರು.

ಕೆಂಡುಕೋನಾದ ರಾರ‍ಯಲಿಯಲ್ಲಿ ಅವರು, ''ನಾಮ್‌ದಾರಿ ಪರಿವಾರ್‌(ಸೋನಿಯಾ ಕುಟುಂಬ) ಭ್ರಷ್ಟಾಚಾರದಲ್ಲಿ ತೊಡಗಿದೆ. ಮಧ್ಯಪ್ರದೇಶದ ಸಿಎಂ ಕಮಲ್‌ನಾಥ್‌ ಆಪ್ತರ ಮನೆ ಮೇಲಿನ ಐಟಿ ದಾಳಿ ವೇಳೆ ವಶಪಡಿಸಿಕೊಂಡ ಕೋಟ್ಯಂತ ಮೌಲ್ಯದ ಅಕ್ರಮ ಹಣ ಇದಕ್ಕೆ ಇತ್ತೀಚಿನ ಸೇರ್ಪಡೆ,'' ಎಂದು ಆಪಾದಿಸಿದರು. ಇತ್ತ ಬಿಹಾರದ ಭಾಗಲ್ಪುರದ ಪ್ರಚಾರ ಸಭೆಯಲ್ಲೂ ಅವರು ಯುಪಿಎ ಅವಧಿಯ ಹಗರಣಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಉಗ್ರವಾದ ಹಾಗೂ ನಕ್ಸಲ್‌ ಸಮಸ್ಯೆ ನಿವಾರಣೆಗೆ ದಿಟ್ಟತನದ ಕ್ರಮಗಳನ್ನು ಕೈಗೊಳ್ಳಲು ತಮ್ಮ ಸರಕಾರ ಸದಾ ಸಿದ್ಧ ಎಂದರು.

2004ರಲ್ಲಿ ಏನಾಯಿತು?: ಸೋನಿಯಾ

''ಪ್ರಧಾನಿ ನರೇಂದ್ರ ಮೋದಿ ಅವರೇನೂ ಅಜೇಯರಾಗಿ ಉಳಿಯಲ್ಲ. 2004 ಲೋಕಸಭೆ ಚುನಾವಣೆ ವೇಳೆಯೂ ಅಂದಿನ ಪ್ರಧಾನಿ ವಾಜಪೇಯಿ ಇದೇ ರೀತಿಯ ಮತ್ತೊಂದು ಅವಧಿಗೆ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ ವಿಜಯಮಾಲೆ ಒಲಿದಿದ್ದು ನಮಗೆ. 2019ರ ಚುನಾವಣೆಯಲ್ಲೂ ಇದೇ ರೀತಿಯ ಫಲಿತಾಂಶ ಮರುಕಳಿಸಲಿದೆ,'' ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ರಾಯ್‌ಬರೇಲಿಯಲ್ಲಿ ಹೇಳಿದ್ದಾರೆ. ''ಮೋದಿ ಅವರು ದೇಶದಲ್ಲಿ ತಮ್ಮ ಹವಾ ಇದೆ. ಈ ಬಾರಿಯೂ ತಮ್ಮದೇ ಸರಕಾರ ರಚನೆಯಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. 2004ರ ಚುನಾವಣೆಯಲ್ಲೂ 'ಇಂಡಿಯಾ ಶೈನಿಂಗ್‌' ಅಭಿಯಾನದ ಅಲೆಯಲ್ಲಿ ಬಿಜೆಪಿ ತೇಲುತ್ತಿತ್ತು. ವಾಜಪೇಯಿ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬರಲಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ ನಮ್ಮ ಯುಪಿಎ ಮೈತ್ರಿಕೂಟ ಗೆದ್ದಿತು. ಈ ಬಾರಿಯೂ ಇದು ಪುನರಾವರ್ತನೆಯಾಗಲಿದೆ,'' ಎಂದು ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ