ಆ್ಯಪ್ನಗರ

ಸುಲ್ತಾನ್‌ಪುರದಲ್ಲಿ ಗಾಂಧಿ ವರ್ಸಸ್ ಗಾಂಧಿ ಸೆಣಸಾಟ?

ವರುಣ್ ಗಾಂಧಿ ಬಿಜೆಪಿಯಲ್ಲಿದ್ದುಕೊಂಡೂ ತಮ್ಮ ಸೋದರ ಸಂಬಂಧಿಗಳಾದ ರಾಹುಲ್ ಮತ್ತು ಪ್ರಿಯಾಂಕಾ ಹಾಗೂ ಸೋನಿಯಾ ಗಾಂಧಿ ಜತೆಗೂ ಸ್ನೇಹಮಯ ಸಂಬಂಧ ಹೊಂದಿದ್ದಾರೆ. ಆಧರೆ ಮೇನಕಾ ಗಾಂಧಿ ಬಗ್ಗೆ ಇದೇ ಮಾತು ಹೇಳುವಂತಿಲ್ಲ. 2014ರ ಚುನಾವಣೆ ವೇಳೆ ಉತ್ತರ ಪ್ರದೇಶದಾದ್ಯಂತ ಬಿಜೆಪಿ ವಿರುದ್ಧ ಕಾಂಗ್ರೆಸ್ ಕುಟುಂಬ ಸೆಣಸಿದ್ದರೂ ಸುಲ್ತಾನ್‌ಪುರದಲ್ಲಿ ಮಾತ್ರ ಪ್ರಚಾರ ನಡೆಸಿರಲಿಲ್ಲ. ಹೀಗಾಗಿ ವರುಣ್ ಗಾಂಧಿ ಸುಲಭವಾಗಿ ಗೆದ್ದರು ಎಂಬ ವಿಶ್ಲೇಷಣೆಯೂ ಇದೆ.

Vijaya Karnataka Web 7 Apr 2019, 10:09 am
ಲಖನೌ: ಮೇನಕಾ ಗಾಂಧಿ ಅವರು ತಮ್ಮ ಪುತ್ರ ವರುಣ್ ಗಾಂಧಿಗಾಗಿ ತಾವು ಪ್ರತಿನಿಧಿಸುತ್ತಿದ್ದ ಸುರಕ್ಷಿತ ಕ್ಷೇತ್ರವಾದ ಪಿಲಿಭಿತ್‌ ಅನ್ನು ಬಿಟ್ಟುಕೊಟ್ಟು ತಾವು ಸುಲ್ತಾನ್‌ಪುರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಆದರೆ ಮೇನಕಾ ಅವರಿಗೆ ಸುಲ್ತಾನ್‌ಪುರ ಸುಲಭದ ತುತ್ತಾಗಬಹುದೆ? ಕಾಂಗ್ರೆಸ್‌ ಪಕ್ಷ ಈಗ ಅವರ ವಿರುದ್ಧ ತೀವ್ರ ಪ್ರತಿಸ್ಪರ್ಧೆ ಒಡ್ಡಬಹುದೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
Vijaya Karnataka Web Maneka Gandhi- Varun Gandhi


ವರುಣ್ ಗಾಂಧಿ ಬಿಜೆಪಿಯಲ್ಲಿದ್ದುಕೊಂಡೂ ತಮ್ಮ ಸೋದರ ಸಂಬಂಧಿಗಳಾದ ರಾಹುಲ್ ಮತ್ತು ಪ್ರಿಯಾಂಕಾ ಹಾಗೂ ಸೋನಿಯಾ ಗಾಂಧಿ ಜತೆಗೂ ಸ್ನೇಹಮಯ ಸಂಬಂಧ ಹೊಂದಿದ್ದಾರೆ. ಆಧರೆ ಮೇನಕಾ ಗಾಂಧಿ ಬಗ್ಗೆ ಇದೇ ಮಾತು ಹೇಳುವಂತಿಲ್ಲ. 2014ರ ಚುನಾವಣೆ ವೇಳೆ ಉತ್ತರ ಪ್ರದೇಶದಾದ್ಯಂತ ಬಿಜೆಪಿ ವಿರುದ್ಧ ಕಾಂಗ್ರೆಸ್ ಕುಟುಂಬ ಸೆಣಸಿದ್ದರೂ ಸುಲ್ತಾನ್‌ಪುರದಲ್ಲಿ ಮಾತ್ರ ಪ್ರಚಾರ ನಡೆಸಿರಲಿಲ್ಲ. ಹೀಗಾಗಿ ವರುಣ್ ಗಾಂಧಿ ಸುಲಭವಾಗಿ ಗೆದ್ದರು ಎಂಬ ವಿಶ್ಲೇಷಣೆಯೂ ಇದೆ.

ಮೇನಕಾ ಗಾಂಧಿ ಕೂಡ ಅಮೇಥಿಯಲ್ಲಿ ಬಿಜೆಪಿ ಪರ ಪ್ರಚಾರದ ವೇಳೆ ರಾಹುಲ್ ಗಾಂಧಿಯಂತೂ ಪ್ರಧಾನಿಯಾಗುವ ಸಾಧ್ಯತೆಯಿಲ್ಲ ಎಂದು ಸ್ಪಷ್ಟವಾಗಿಯೇ ಹೇಳಿದ್ದರು.

ಕಾಂಗ್ರೆಸ್‌ನ ಪ್ರಮುಖ ನಾಯಕರೊಬ್ಬರ ಪ್ರಕಾರ, ಪ್ರಿಯಾಂಕಾ ಅಥವಾ ರಾಹುಲ್ ಸುಲ್ತಾನ್‌ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಜಯ್ ಸಿಂಗ್ ಪರ ಪ್ರಚಾರ ನಡೆಸುವ ಸಾಧ್ಯತೆಯಿಲ್ಲ. 'ಯಾವುದೇ ರೀತಿಯ ಮೊದಲ ಹೆಜ್ಜೆಯನ್ನು ನಾವು ಇಡುವುದಿಲ್ಲ' ಎಂದು ಅವರು ತಿಳಿಸಿದರು.

ಆದರೆ ಅಮೇಥಿಯಲ್ಲಿ ಮೇನಕಾ ಗಾಂಧಿ ನೀಡಿದ ಹೇಳಿಕೆ ಬಿಜೆಪಿ ನಾಯಕತ್ವದ ನಿರೀಕ್ಷೆಗೆ ಅನುಗುಣವಾಗಿ ನೀಡಿದ್ದು ಎಂಬ ಭಾವನೆ ಕಾಂಗ್ರೆಸ್‌ನಲ್ಲಿದೆ. ಸುಲ್ತಾನ್‌ಪುರದಲ್ಲಿ ಮೇ 12ರಂದು ಚುನಾವಣೆ ನಡೆಯಲಿದೆ.

ರಾಯ್‌ಬರೇಲಿ-ಅಮೇಠಿ-ಸುಲ್ತಾನ್‌ಪುರ ಕ್ಷೇತ್ರಗಳು ಗಾಂಧಿ ಕುಟುಂಬದ ಭದ್ರಕೋಟೆಗಳೆಂದೇ ಪರಿಗಣಿಸಲ್ಪಟ್ಟಿದ್ದವು. ಸುಲ್ತಾನ್‌ಪುರ ಪ್ರತ್ಯೇಕ ಜಿಲ್ಲೆಯಾಗುವ ವರೆಗೂ ಅಮೇಥಿಯ ಭಾಗವಾಗಿಯೇ ಇತ್ತು. ಅಮೇಥಿಯಲ್ಲಿ 1980ರಲ್ಲಿ ಸಂಜಯ್ ಗಾಂಧಿ ಸಂಸದರಾಗಿದ್ದರು.

ಆ ಬಳಿಕ ಗಾಂಧಿ ಕುಟುಂಬದಲ್ಲಿ ಒಡಕುಂಟಾಗಿ ಪರಸ್ಪರ ಎದುರಾಳಿಗಳಾಗಿ ಸೆಣಸಲಾರಂಭಿಸಿದರು. 2014ರಲ್ಲಿ ವರುಣ್ ಗಾಂಧಿ ಬಿಜೆಪಿಯಿಂದ ಆಯ್ಕೆಯಾಗಿ ಬಂದಾಗಲೂ ರಾಹುಲ್ ಅಥವಾ ಪ್ರಿಯಾಂಕಾ ಗಾಂಧಿ ವಿರುದ್ಧ ಹೇಳಿಕೆ ನೀಡಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ