ಆ್ಯಪ್ನಗರ

ಹರಿಯಾಣ ಕಾಂಗ್ರೆಸ್‌ ಮಾಜಿ ಸಂಸದ ಅರವಿಂದ್‌ ಬಿಜೆಪಿಗೆ

1996ರಲ್ಲಿ ಸೋನೆಪತ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಅರವಿಂದ್‌ ಶರ್ಮಾ ಸ್ಪರ್ಧಿಸಿ ಗೆದ್ದಿದ್ದರು. 2004 ಮತ್ತು 2009ರಲ್ಲಿ ಕಾಂಗ್ರೆಸ್‌ನಿಂದ ಕರ್ನಾಲ್‌ ಕ್ಷೇತ್ರದ ಸಂಸದರಾಗಿದ್ದರು. 2014ರ ಚುನಾವಣೆಯಲ್ಲಿ ಬಿಜೆಪಿಯ ಅಶ್ವಿನಿ ಚೋಪ್ರಾ ವಿರುದ್ಧ ಮುಖಭಂಗ ಅನುಭವಿಸಿದ್ದರು.

Vijaya Karnataka 16 Mar 2019, 5:00 am
ಚಂಡೀಗಢ: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಪಕ್ಷಾಂತರ ಪರ್ವ ಜೋರಾಗಿದೆ. ಹರಿಯಾಣದ ಮಾಜಿ ಸಂಸದ, ಕಾಂಗ್ರೆಸ್‌ ನಾಯಕ ಅರವಿಂದ್‌ ಶರ್ಮಾ ಅವರು ಸಿಎಂ ಮನೋಹರ್‌ಲಾಲ್‌ ಖಟ್ಟರ್‌ ಸಮ್ಮುಖದಲ್ಲಿ ಶುಕ್ರವಾರ ಬಿಜೆಪಿ ಸೇರಿದ್ದಾರೆ. ಬ್ರಾಹ್ಮಣ ಸಮುದಾಯದ ಶರ್ಮಾ ಸೇರ್ಪಡೆಯಿಂದ ಬಿಜೆಪಿಗೆ ಮೇಲ್ವರ್ಗದ ಮತಗಳನ್ನು ಸೆಳೆಯಲು ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಇವರಿಗೆ ಕರ್ನಾಲ್‌ ಕ್ಷೇತ್ರದಿಂದ ಟಿಕೆಟ್‌ ನೀಡುವ ಸಾಧ್ಯತೆಗಳಿವೆ. 1996ರಲ್ಲಿ ಸೋನೆಪತ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. 2004 ಮತ್ತು 2009ರಲ್ಲಿ ಕಾಂಗ್ರೆಸ್‌ನಿಂದ ಕರ್ನಾಲ್‌ ಕ್ಷೇತ್ರದ ಸಂಸದರಾಗಿದ್ದರು. 2014ರ ಚುನಾವಣೆಯಲ್ಲಿ ಬಿಜೆಪಿಯ ಅಶ್ವಿನಿ ಚೋಪ್ರಾ ವಿರುದ್ಧ ಮುಖಭಂಗ ಅನುಭವಿಸಿದ್ದರು.
Vijaya Karnataka Web three term haryana mp arvind sharma joins bjp
ಹರಿಯಾಣ ಕಾಂಗ್ರೆಸ್‌ ಮಾಜಿ ಸಂಸದ ಅರವಿಂದ್‌ ಬಿಜೆಪಿಗೆ


ಬಿಜೆಪಿ ತೊರೆದ ರೇಷ್ಮಾ ಪಟೇಲ್‌:
ಗುಜರಾತಿನ ಬಿಜೆಪಿ ನಾಯಕಿ ರೇಷ್ಮಾ ಪಟೇಲ್‌ ಅವರು ಪಕ್ಷ ತೊರೆದಿದ್ದಾರೆ. ''ಬಿಜೆಪಿ ಒಂದು ಮಾರ್ಕೆಟಿಂಗ್‌ ಕಂಪನಿ. ಸದಸ್ಯರು ಅದರ ಸೇಲ್ಸ್‌ ಪರ್ಸನ್ಸ್‌ ಆಗಿಬಿಟ್ಟಿದ್ದಾರೆ,'' ಎಂದು ಜರಿದಿರುವ ಅವರು ಪೋರ್‌ಬಂದರ್‌ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಅದರೇ ಯಾವುದೇ ಪಕ್ಷ ಸೇರುವುದಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದ್ದಾರೆ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ