ಆ್ಯಪ್ನಗರ

ರಾಹುಲ್ ಗಾಂಧಿ ಕೊರಳಿಗೆ ಬಾಂಬ್ ಕಟ್ಟಿ ದೇಶದಿಂದಾಚೆ ದಬ್ಬಿ: ಬಿಜೆಪಿ ನಾಯಕಿ ವಿವಾದಿತ ಹೇಳಿಕೆ

'ನಮ್ಮ ದೇಶವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶ್ರಮಿಸುತ್ತಿದ್ದರೆ ವಿರೋಧಿಗಳು ಪ್ರಶ್ನಿಸುತ್ತಾರೆ, ಸಾಕ್ಷಿ ಕೇಳುತ್ತಾರೆ. ನಮ್ಮ ಯೋಧರ ಮೇಲೆ ದಾಳಿ ನಡೆದಾಗ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಮಟ್ಟಹಾಕಿದ್ದಾರೆ ಪ್ರಧಾನಿ ಮೋದಿ. ರಾಹುಲ್ ಗಾಂಧಿ ಅದಕ್ಕೆ ಸಾಕ್ಷಿ ಕೇಳುತ್ತಾರೆ. ಆತನ ಕೊರಳಿಗೆ ಬಾಂಬ್ ಕಟ್ಟಿ ದೇಶದಿಂದ ಹೊರಗೆ ದಬ್ಬಬೇಕು ಎಂದು ನಾನು ಹೇಳುತ್ತೇನೆ. ಈ ದಿನಗಳಲ್ಲಿ ಸರ್ಜಿಕಲ್ ದಾಳಿಯನ್ನು ಪ್ರಶ್ನಿಸುವವರೆಲ್ಲಾ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಮಾಡುತ್ತಾರೆ' ಎಂದು ಪಂಕಜಾ ಮುಂಧೆ ಹೇಳಿದ್ದಾರೆ.

Vijaya Karnataka Web 22 Apr 2019, 7:14 pm
[This story originally published in Timesnownews.com on April 22, 2019]
Vijaya Karnataka Web Pankaja Munde


ಮುಂಬಯಿ:
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಹಾರಾಷ್ಟ್ರ ಗ್ರಾಮೀಣಾಭಿವೃದ್ಧಿ ಸಚಿವೆ ಪಂಕಜಾ ಮುಂಧೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜಲ್ನಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ರ‍್ಯಾಲಿ ಉದ್ದೇಶಿಸಿ ಮಾತನಾಡುತ್ತ, ಬಾಲಾಕೋಟ್‌ ವೈಮಾನಿಕ ದಾಳಿಗೆ ಸಾಕ್ಷಿ ಕೇಳುತ್ತಿರುವ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡ ಸಚಿವೆ ವಿವಾದಾತ್ಮಕ ಹೇಳಿಕೆ ನೀಡಿದರು.

'ನಮ್ಮ ದೇಶವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶ್ರಮಿಸುತ್ತಿದ್ದರೆ ವಿರೋಧಿಗಳು ಪ್ರಶ್ನಿಸುತ್ತಾರೆ, ಸಾಕ್ಷಿ ಕೇಳುತ್ತಾರೆ. ನಮ್ಮ ಯೋಧರ ಮೇಲೆ ದಾಳಿ ನಡೆದಾಗ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಮಟ್ಟಹಾಕಿದ್ದಾರೆ ಪ್ರಧಾನಿ ಮೋದಿ. ರಾಹುಲ್ ಗಾಂಧಿ ಅದಕ್ಕೆ ಸಾಕ್ಷಿ ಕೇಳುತ್ತಾರೆ. ಆತನ ಕೊರಳಿಗೆ ಬಾಂಬ್ ಕಟ್ಟಿ ದೇಶದಿಂದ ಹೊರಗೆ ದಬ್ಬಬೇಕು ಎಂದು ನಾನು ಹೇಳುತ್ತೇನೆ. ಈ ದಿನಗಳಲ್ಲಿ ಸರ್ಜಿಕಲ್ ದಾಳಿಯನ್ನು ಪ್ರಶ್ನಿಸುವವರೆಲ್ಲಾ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಮಾಡುತ್ತಾರೆ' ಎಂದು ಪಂಕಜಾ ಮುಂಧೆ ಹೇಳಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ದಾನ್ವೆ ರಾವ್ ಸಾಹೇಬ್ ದಾದಾರಾವ್‌ ಅವರ ಎದುರೇ ಪಂಕಜಾ ಈ ಹೇಳಿಕೆ ನೀಡಿದ್ದಾರೆ.


ಕಾಂಗ್ರೆಸ್ ಈ ಹೇಳಿಕೆ ತೀಕ್ಷ್ಣವಾಗಿ ಖಂಡಿಸಿದೆ. 'ಬಿಜೆಪಿ ಕೀಳು ರಾಜಕೀಯ ಮಾಡುತ್ತಿದೆ. ಬಿಜೆಪಿ ನಾಯಕರ ಕೀಳುಮಟ್ಟದ ಚಿಂತನೆಗಳನ್ನು ಈ ಹೇಳಿಕೆ ಮತ್ತೊಮ್ಮೆ ಅನಾವರಣಗೊಳಿಸಿದೆ. ಅವರಿಂದ ನಾವು ಬೇರೇನನ್ನೂ ನಿರೀಕ್ಷಿಸಲಾರೆವು. ಹುತಾತ್ಮರೊಬ್ಬರನ್ನು (ಕರ್ಕರೆ) ದೇಶದ್ರೋಹಿ ಎಂದು ಜರೆಯುವ ಅವರಿಂದ ಏನನ್ನು ನಿರೀಕ್ಷಿಸಬಹುದು? ಮುಂಧೆ ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ'
ಎಂದು ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಪ್ರತಿಕ್ರಿಯಿಸಿದರು.

ಜಲ್ನಾ ಬಿಜೆಪಿಯ ಭದ್ರಕೋಟೆಯಾಗಿದ್ದು, 1996ರಿಂದಲೂ ಬಿಜೆಪಿ ಗೆಲ್ಲುತ್ತಲೇ ಬಂದಿದೆ. 2014ರಲ್ಲಿ ಬಿಜೆಪಿಯ ದಾದಾರಾವ್‌ ಕಾಂಗ್ರೆಸ್‌ನ ಎ.ವಿ ಕೇಶವರಾವ್ ಅವರನ್ನು 2 ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ