ಹೈದರಾಬಾದ್: ವಿದ್ಯುನ್ಮಾನ ಮತಯಂತ್ರಗಳನ್ನು ಸ್ಟ್ರಾಂಗ್ರೂಂನಲ್ಲಿ ಜೋಡಿಸಿ ಇಡುತ್ತಿದ್ದ ಸಂದರ್ಭದಲ್ಲಿ ಫೋಟೊ ತೆಗೆದು, ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ಟಿಆರ್ಎಸ್ ಅಭ್ಯರ್ಥಿಯೊಬ್ಬರ ಚುನಾವಣಾ ಏಜೆಂಟ್ನನ್ನು ಭಾನುವಾರ ಹೈದರಾಬಾದ್ನಲ್ಲಿ ಬಂಧಿಸಲಾಗಿದೆ. ಮಾಲ್ಕಜ್ಗಿರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ರಾಜಶೇಖರ ರೆಡ್ಡಿ ಅವರ ಚುನಾವಣಾ ಏಜೆಂಟ್ ಎನ್. ವೆಂಕಟೇಶ್ ಬಂಧಿತ ವ್ಯಕ್ತಿ. ಅವರನ್ನು ಸ್ಥಳೀಯ ನ್ಯಾಯಾಲಯವು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಏ.11ರಂದು ನಡೆದ ಮತದಾನದ ಬಳಿಕ ಇವಿಎಂಗಳನ್ನು ಹೈದರಾಬಾದ್ನ ಭೋಗಾರಾಮ್ ಕಾಲೇಜಿನ ಕೊಠಡಿಯಲ್ಲಿ ಪೇರಿಸಿಡುತ್ತಿದ್ದ ವೇಳೆ ವೆಂಕಟೇಶ್ ಅಕ್ರಮವಾಗಿ ಅವುಗಳ ಫೋಟೊ ತೆಗೆದಿದ್ದಲ್ಲದೇ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರು. ಚುನಾವಣಾ ಅಧಿಕಾರಿಗೆ ನೆರವಾಗುತ್ತಿದ್ದ ಸಿಕಂದರಾಬಾದ್ ಕಂಟೋನ್ಮೆಂಟ್ ಬೋರ್ಡ್ನ ಸಿಇಒ ಅವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು.
ಇವಿಎಂ ಕೊಠಡಿಯ ಫೋಟೊ ತೆಗೆದ ಚುನಾವಣಾ ಏಜೆಂಟ್ ಬಂಧನ
ಮಾಲ್ಕಜ್ಗಿರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ರಾಜಶೇಖರ ರೆಡ್ಡಿ ಅವರ ಚುನಾವಣಾ ಏಜೆಂಟ್ ಎನ್. ವೆಂಕಟೇಶ್ ಬಂಧಿತ ವ್ಯಕ್ತಿ. ಅವರನ್ನು ಸ್ಥಳೀಯ ನ್ಯಾಯಾಲಯವು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
Vijaya Karnataka 15 Apr 2019, 5:00 am