ಆ್ಯಪ್ನಗರ

ತಿರುಪತಿ ಕಣದಲ್ಲಿ ಟಿಟಿಡಿಯ ಇಬ್ಬರು ಮಾಜಿ ಮುಖ್ಯಸ್ಥರ ಫೈಟ್‌

ಟಿಟಿಡಿಯ ಮಾಜಿ ಅಧ್ಯಕ್ಷರಾದ ಚಡಲವಾಡ ಕೃಷ್ಣಮೂರ್ತಿ ಅವರು ನಟ ಪವನ್‌ ಕಲ್ಯಾಣ್‌ರ ಜನಸೇನಾ ಪಕ್ಷದಿಂದ ಕಣಕ್ಕೆ ಇಳಿದಿದ್ದರೆ, ಮತ್ತೊಬ್ಬ ಟಿಟಿಡಿ ಮಾಜಿ ಮುಖ್ಯಸ್ಥ ಬಿ.ಕರುಣಾಕರ ರೆಡ್ಡಿ ವೈಎಸ್ಸಾರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಇತ್ತ ಹಾಲಿ ಶಾಸಕಿ ಟಿಡಿಪಿಯ ಎಂ.ಸುಗುಣಾ ಅವರು ಪುನರಾಯ್ಕೆ ಬಯಸಿ ಸ್ಪರ್ಧಿಸುತ್ತಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

Vijaya Karnataka 22 Mar 2019, 5:00 am
ಹೈದರಾಬಾದ್‌: ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿಯ ಇಬ್ಬರು ಮಾಜಿ ಮುಖ್ಯಸ್ಥರು ತಿರುಪತಿ ಕ್ಷೇತ್ರದಿಂದ ಕಣಕ್ಕಿಳಿದಿದ್ದು ಕುತೂಹಲದ ಫೈಟ್‌ ನಿರೀಕ್ಷಿಸಲಾಗಿದೆ. ಏಪ್ರಿಲ್‌ 11ರಂದು ಲೋಕಸಭೆ ಜತೆಗೆ ಆಂಧ್ರ ವಿಧಾನಸಭೆಗೂ ಒಟ್ಟಿಗೆ ಚುನಾವಣೆ ನಡೆಯಲಿದೆ.
Vijaya Karnataka Web ttd


ಟಿಟಿಡಿಯ ಮಾಜಿ ಅಧ್ಯಕ್ಷರಾದ ಚಡಲವಾಡ ಕೃಷ್ಣಮೂರ್ತಿ ಅವರು ನಟ ಪವನ್‌ ಕಲ್ಯಾಣ್‌ರ ಜನಸೇನಾ ಪಕ್ಷದಿಂದ ಕಣಕ್ಕೆ ಇಳಿದಿದ್ದರೆ, ಮತ್ತೊಬ್ಬ ಟಿಟಿಡಿ ಮಾಜಿ ಮುಖ್ಯಸ್ಥ ಬಿ.ಕರುಣಾಕರ ರೆಡ್ಡಿ ವೈಎಸ್ಸಾರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಇತ್ತ ಹಾಲಿ ಶಾಸಕಿ ಟಿಡಿಪಿಯ ಎಂ.ಸುಗುಣಾ ಅವರು ಪುನರಾಯ್ಕೆ ಬಯಸಿ ಸ್ಪರ್ಧಿಸುತ್ತಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಪ್ರಭಾವಿ ಬಲಿಜ ಸಮುದಾಯಕ್ಕೆ ಸೇರಿರುವ ಕೃಷ್ಣಮೂರ್ತಿ ಕಳೆದ ವರ್ಷ ಟಿಡಿಪಿ ತೊರೆದು ಜನಸೇನಾ ಪಕ್ಷ ಸೇರಿದರು. ಇವರು 2015ರಲ್ಲಿ ಟಿಟಿಡಿಯ ಮುಖ್ಯಸ್ಥರಾಗಿದ್ದರು. ಇನ್ನು ಕರುಣಾಕರ ರೆಡ್ಡಿ ಕೂಡ ಟಿಡಿಪಿಯಲ್ಲಿಯೇ ಇದ್ದವರು. ಹಾಲಿ ಶಾಸಕಿ ಸುಗುಣ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿ ಸದ್ದು ಮಾಡಿದ್ದ ಇವರು ಕಳೆದ ವರ್ಷ ಟಿಡಿಪಿ ತೊರೆದು ವೈಎಸ್ಸಾರ್‌ ಕಾಂಗ್ರೆಸ್‌ ಸೇರಿದರು. 2006ರಲ್ಲಿ ಟಿಟಿಡಿ ಅಧ್ಯಕ್ಷರಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ