ಆ್ಯಪ್ನಗರ

ಉ.ಪ್ರದಲ್ಲಿ 2014ರ ಫಲಿತಾಂಶವೇ ಮರುಕಳಿಸಲಿದೆ: ಮುಸ್ಲಿಂ ಮತದಾರರು

TOI.in 15 May 2019, 3:13 pm
ಗೋರಾಖ್‌ಪುರ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮುಖ್ಯಸ್ಥರಾಗಿರುವ ಮಠದ ಗೋರಕ್ಷನಾಥ ಚಿಕಿತ್ಸಾಲಯ ಟ್ರಸ್ಟ್‌ ನಿರ್ವಹಿಸುತ್ತಿರುವ ಝಾಕಿರ್‌ ವರ್ಸಿ, 2014ರ ಫಲಿತಾಂಶವೇ ಈ ಬಾರಿಯ ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಮರುಕಳುಹಿಸಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
Vijaya Karnataka Web Warsi


2004ರಿಂದ ಯೋಗಿ ಆದಿತ್ಯನಾಥ್‌ ಅವರ ಜತೆ ಕೆಲಸ ನಿರ್ವಹಿಸುತ್ತಿರುವ ಝಾಕಿರ್‌ ಮತ್ತು ಅವರ ಸ್ನೇಹಿತ ಮೊಹಮ್ಮದ್‌ ಯಾಸಿನ್‌ ಅವರು 2019ರ ಚುನಾವಣೆಯಲ್ಲಿ ಮೊದಲಿನಂತೆ ಯಶಸ್ಸು ಕಾಣಲಿದೆ ಎಂದಿದ್ದಾರೆ. ಯಾಸಿನ್‌ ಅವರು ದೇವಸ್ಥಾನದ ಆವರಣದಲ್ಲಿ ಹೊಸ ಕಟ್ಟಡ ನಿರ್ವಹಣೆಯ ಜಬಾಬ್ದಾರಿ ಹೊತ್ತಿದ್ದಾರೆ.

ಇದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಬಿಜೆಪಿಗೆ 70-72 ಸ್ಥಾನಗಳು ಉತ್ತರ ಪ್ರದೇಶದಲ್ಲಿ ಸಿಗಲಿವೆ. ಯೋಗಿ ಅವರ ಕೆಲಸದ ಫಲವಿದು. ಗೋರಾಖ್‌ಪುರದಲ್ಲಿ ಅಪರಾಧಗಳ ಪ್ರಮಾಣ ಕಡಿಮೆಯಾಗಿದೆ. ರಸ್ತೆಗಳು, ವಿದ್ಯುತ್‌, ಸ್ವಚ್ಛತೆ, ಪ್ರವಾಸೋದ್ಯಮ ಹೀಗೆ ಎಲ್ಲವೂ ಅಭಿವೃದ್ಧಿಯಾಗಿದೆ ಎಂದು 52 ವರ್ಷದ ವರ್ಸಿ ತಿಳಿಸಿದ್ದಾರೆ.

ಪ್ರಧಾನ್‌ ಮಂತ್ರಿ ಆವಾಸ್‌ ಯೋಜನೆಯಡಿ ರಸೂಲ್‌ಪುರದಲ್ಲಿ ನೂರಾರು ಮುಸ್ಲಿಮರು ಮತ್ತು ಹಿಂದೂಗಳಿಗೆ ರೂ. 2.5 ಲಕ್ಷ ಸಿಕ್ಕಿದೆ ಎಂಬ ಮಾಹಿತಿಯನ್ನು ವರ್ಸಿ ಹಂಚಿಕೊಂಡರು.

ಯೋಗಿ ಆದಿತ್ಯನಾಥ್‌ ಅವರನ್ನು ಮಹಾರಾಜ್‌ಜೀ ಎಂದು ಕರೆಯುವ ವರ್ಸಿ ಟೈಮ್ಸ್‌ ಆಫ್‌ ಇಂಡಿಯಾ ಜತೆ ಮಾತನಾಡುತ್ತ, ಯಾವ ಅಭ್ಯರ್ಥಿ ಸ್ಪರ್ಧಿಸುತ್ತಿದ್ದಾರೆ ಎಂಬುದು ಮುಖ್ಯವಾಗುವುದಿಲ್ಲ. ನಮಗೆ ಮತ್ತು ಯೋಗಿ ಅವರ ಬೆಂಬಲಿಗರಿಗೆ ಮಹಾರಾಜ್‌ಜೀ ಅವರೇ ಗೆಲವೇ ಮುಖ್ಯವಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌