ಆ್ಯಪ್ನಗರ

ಮೋದಿ ಜಾತಿ ಪ್ರಶ್ನಿಸುವ ಮೂಲಕ ಎಸ್ಪಿ-ಬಿಎಸ್ಪಿ ಅತ್ಯಂತ ಕೆಳಮಟ್ಟಕ್ಕೆ ಹೋಗಿವೆ: ಯೋಗಿ ಆದಿತ್ಯನಾಥ್‌

ಇತ್ತೀಚೆಗೆ ಚುನಾವಣೆ ಪ್ರಚಾರದ ವೇಳೆ ಬಿಎಸ್ಪಿ ನಾಯಕಿ ಮಾಯಾವತಿ, ಮೋದಿ ಅವರು ಮೇಲ್ವರ್ಗದ ಕುಟುಂಬದಲ್ಲಿ ಜನಿಸಿದವರಾಗಿದ್ದು, ರಾಜಕೀಯ ಲಾಭಕ್ಕಾಗಿ ಕೆಳವರ್ಗದಲ್ಲಿ ಜನಿಸಿರುವುದಾಗಿ ಟೀಕಿಸಿದ್ದರು.

TOI.in 13 May 2019, 4:11 pm
ಮಹಾರಾಜ್‌ಗಂಜ್‌: ಪ್ರಧಾನಿ ನರೇಂದ್ರ ಮೋದಿ ಅವರ ಜಾತಿಯನ್ನು ಪ್ರಶ್ನಿಸುವ ಮೂಲಕ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಅತ್ಯಂತ ಕೆಳಮಟ್ಟಕ್ಕೆ ಇಳಿದಿವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web Yogi Adityanath


ಪ್ರಧಾನಿ ಮೋದಿ ಆಡಳಿತದಡಿ ಉತ್ತರ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಆರ್ಥಿಕ ವಲಯ ಬೆಳೆದಿದೆ. ಹಾಗಾಗಿ ನರೇಂದ್ರ ಮೋದಿ ಅವರ ಜಾತಿಯನ್ನು ಗುರಿಯಾಗಿಸಿಕೊಂಡು ಎಸ್ಪಿ ಮತ್ತು ಬಿಎಸ್ಪಿ ವೈಯಕ್ತಿಕವಾಗಿ ದಾಳಿ ನಡೆಸುತ್ತಿವೆ ಎಂದರು.

ಮೋದಿ ಅವರ ಜಾತಿಯನ್ನು ಪ್ರಶ್ನಿಸುವ ಮೂಲಕ ಈ ಎರಡು ಪಕ್ಷಗಳು ಹೊಸ ಕೆಳ ಮಟ್ಟಕ್ಕೆ ಇಳಿದಿವೆ ಎಂದು ಆದಿತ್ಯನಾಥ್‌ ಆಕ್ರೋಷ ವ್ಯಕ್ತ ಪಡಿಸಿದರು.

ಇತ್ತೀಚೆಗೆ ಚುನಾವಣೆ ಪ್ರಚಾರದ ವೇಳೆ ಬಿಎಸ್ಪಿ ನಾಯಕಿ ಮಾಯಾವತಿ, ಮೋದಿ ಅವರು ಮೇಲ್ವರ್ಗದ ಕುಟುಂಬದಲ್ಲಿ ಜನಿಸಿದವರಾಗಿದ್ದು, ರಾಜಕೀಯ ಲಾಭಕ್ಕಾಗಿ ಕೆಳವರ್ಗದಲ್ಲಿ ಜನಿಸಿರುವುದಾಗಿ ಟೀಕಿಸಿದ್ದರು.

ರಾಜಕೀಯ ಲಾಭಕ್ಕಾಗಿ ಪತ್ನಿಯನ್ನು ಬಿಟ್ಟ ನರೇಂದ್ರ ಮೋದಿ ಇತರ ಮಹಿಳೆಯರನ್ನು ಗೌರವಿಸಲು ಹೇಗೆ ಸಾಧ್ಯ? ಬಿಜೆಪಿಯಲ್ಲಿ ಮದುವೆಯಾದ ಮಹಿಳೆಯರು ತಮ್ಮ ಗಂಡಂದಿರು ನರೇಂದ್ರ ಮೋದಿ ಅವರನ್ನು ಭೇಟಿಯಾಗುವುದನ್ನು ನೋಡಿ ಭಯ ಪಡುತ್ತಿದ್ದಾರೆ. ಎಲ್ಲಿ ನರೇಂದ್ರ ಮೋದಿ ಅವರು ತಮ್ಮ ಗಂಡಂದಿರನ್ನು ತಮ್ಮಿಂದ ದೂರ ಮಾಡಿಬಿಡುತ್ತಾರೋ ಎಂಬ ಭೀತಿ ಎದುರಿಸುತ್ತಿರುವ ವಿಚಾರ ನನಗೆ ತಿಳಿದಿದೆ ಎಂದು ಮಾಯಾವತಿ ಹೇಳಿದ್ದಾರೆ. ಎಂದು ಮಾಯಾವತಿ ಪ್ರಶ್ನಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ