ಆ್ಯಪ್ನಗರ

ಲೋಕಸಮರ: ಎಸ್‌ಪಿ-ಬಿಎಸ್ಪಿ 'ದೇವ್‌ಬಂದ್‌' ತಂತ್ರಕ್ಕೆ ಯೋಗಿ ಆದಿತ್ಯನಾಥ್ 'ಮಂದಿರದ ಪ್ರತಿತಂತ್ರ'

ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟ ತನ್ನ ಆದ್ಯತೆ ಮತ್ತು ಗುರಿಯನ್ನು ಆಧರಿಸಿ ದೇವಬಂದ್‌ನಿಂದ ಪ್ರಚಾರ ಆರಂಭಿಸುವುದಾಗಿ ಘೋಷಿಸಿವೆ. ಮುಖ್ಯಮಂತ್ರಿ ಆದಿತ್ಯನಾಥ್ ಮಾರ್ಚ್ 25ರಂದು (ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನ) ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಎಸ್‌ಪಿ-ಬಿಎಸ್ಪಿ-ಆರ್‌ಎಲ್‌ಡಿ ಕೂಟ ಏಷ್ಯಾದಲ್ಲೇ ಅತಿ ದೊಡ್ಡದು ಎಂಬ ಖ್ಯಾತಿ ಪಡೆದ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಕೇಂದ್ರವಾದ ದೇವ್‌ಬಂದ್‌ನಿಂದ ಏಪ್ರಿಲ್ 7ರಂದು ಪ್ರಚಾರ ಆರಂಭಿಸಲಿವೆ.

Vijaya Karnataka Web 18 Mar 2019, 3:22 pm
ಲಖನೌ: ಎಸ್‌ಪಿ-ಬಿಎಸ್ಪಿ ಮೈತ್ರಿಕೂಟದ ಚುನಾವಣಾ ಪ್ರಚಾರವನ್ನು ದೇವ್‌ಬಂದ್‌ನಿಂದ ಆರಂಭಿಸುವುದಾಗಿ ಮಾಯಾವತಿ ಮತ್ತು ಅಖಿಲೇಶ್‌ ಯಾದವ್ ಘೋಷಿಸಿದ ಹಿನ್ನೆಲೆಯಲ್ಲಿ, ಬಿಜೆಪಿ ಚುನಾವಣಾ ಪ್ರಚಾರವನ್ನು ಸಹಾರಣ್‌ಪುರದ ಐತಿಹಾಸಿಕ ಶಾಕಾಂಬರಿ ದೇವಿ ಮಂದಿರದಿಂದ ಆರಂಭಿಸುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.
Vijaya Karnataka Web CM Yogi Adityanath


ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟ ತನ್ನ ಆದ್ಯತೆ ಮತ್ತು ಗುರಿಯನ್ನು ಆಧರಿಸಿ ದೇವಬಂದ್‌ನಿಂದ ಪ್ರಚಾರ ಆರಂಭಿಸುವುದಾಗಿ ಘೋಷಿಸಿವೆ. ಮುಖ್ಯಮಂತ್ರಿ ಆದಿತ್ಯನಾಥ್ ಮಾರ್ಚ್ 25ರಂದು (ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನ) ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

ಎಸ್‌ಪಿ-ಬಿಎಸ್ಪಿ-ಆರ್‌ಎಲ್‌ಡಿ ಕೂಟ ಏಷ್ಯಾದಲ್ಲೇ ಅತಿ ದೊಡ್ಡದು ಎಂಬ ಖ್ಯಾತಿ ಪಡೆದ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಕೇಂದ್ರವಾದ ದೇವ್‌ಬಂದ್‌ನಿಂದ ಏಪ್ರಿಲ್ 7ರಂದು ಪ್ರಚಾರ ಆರಂಭಿಸಲಿವೆ.

ಶಾಕಾಂಬರಿ ದೇವಿ ಮಂದಿರ ಶಾಕಾಹಾರಿ ಪಂಥದ ಹಿಂದೂಗಳ ಶ್ರದ್ಧಾಕೇಂದ್ರವಾಗಿದೆ. ದೇವಿ ಶಾಕಾಂಬರಿ ಮಾತೆ ರಾಕ್ಷಸ ರಾಜ ಮಹಿಷಾಸುರನನ್ನು ಇದೇ ಸ್ಥಳದಲ್ಲಿ ಸಂಹರಿಸಿದ್ದಾಗಿ ಪೌರಾಣಿಕ ಐತಿಹ್ಯವಿದೆ. ದೇವಿ ಇದೇ ಜಾಗದಲ್ಲಿ 100 ವರ್ಷಗಳ ಕಾಲ ತಪಸ್ಸನ್ನಾಚರಿಸಿದ್ದಳು. ಆ ಅವಧಿಯಲ್ಲಿ ಪ್ರತಿ ಮಾಸದ ಕೊನೆಯ ದಿನ ಸಸ್ಯಾಹಾರ ಮಾತ್ರ ಸೇವಿಸುತ್ತಿದ್ದಳು. ಇದರಿಂದಾಗಿ ಇಲ್ಲಿನ ದೇವಾಲಯಕ್ಕೆ ಶಾಕಾಂಬರಿ ದೇವಿ ಮಂದಿರ ಎಂದು ಹೆಸರಾಯಿತು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ದೋಣಿ ಯಾತ್ರೆ ಮೂಲಕ ಮತಯಾಚಿಸುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಯೋಗಿ, ವಾರಾಣಸಿಯಿಂದ ಪ್ರಯಾಗ್‌ರಾಜ್‌ಗೆ ಜಲ ಸಾರಿಗೆ ಆರಂಭಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ನಾಯಕರು ಕೃತಜ್ಞತೆ ಹೇಳಬೇಕು ಎಂದರು.

'ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬಿಎಸ್ಪಿ ವರಿಷ್ಠೆ ಮಾಯಾವತಿ ಕೂಡ ಗಂಗಾ ನದಿಯಲ್ಲಿ ದೋಣಿ ಯಾತ್ರೆ ಮಾಡಿದರೆ ನನಗೆ ಬಹಳ ಖುಷಿಯಾದೀತು' ಎಂದು ಮುಖ್ಯಮಂತ್ರಿ ಆದಿತ್ಯನಾಥ್ ನುಡಿದರು.

ಪ್ರಿಯಾಂಕಾ ಸಕ್ರಿಯ ರಾಜಕಾರಣಕ್ಕೆ ಬಂದಿರುವುದರಿಂದ ಬಿಜೆಪಿಯ ಚುನಾವಣಾ ಫಲಿತಾಂಶಗಳ ಮೇಲೆ ಹೆಚ್ಚಿನ ಪರಿಣಾಮವೇನೂ ಉಂಟುಮಾಡದು ಎಂದು ಅವರು ಪ್ರತಿಕ್ರಿಯಿಸಿದರು.

ರಾಮ ಮಂದಿರ ನಿರ್ಮಾಣ ಬಿಜೆಪಿಗೆ ಯಾವತ್ತೂ ಚುನಾವಣಾ ವಿಷಯವೇ ಆಗಿರಲಿಲ್ಲ. ಅದು ಎಲ್ಲಕ್ಕಿಂತ ದೊಡ್ಡದು ಮತ್ತು ಜನತೆಯ ನಂಬಿಕೆಯ ವಿಷಯವನ್ನು ಎಲ್ಲರೂ ಗೌರವಿಸಲೇಬೇಕು ಎಂದು ಯೋಗಿ ಹೇಳಿದರು.

'ಭಗವಾನ್ ಶ್ರೀರಾಮ ಜನಿಸಿದ ಅಯೋಧ್ಯೆಯ ಜನ್ಮಭೂಮಿ ಮೇಲಿನ ಹಕ್ಕನ್ನು ಹಿಂದೂಗಳು ಯಾವತ್ತೂ ಬಿಟ್ಟುಕೊಡುವುದಿಲ್ಲ. ಮುಸ್ಲಿಮರು ಬಾಬರಿ ಮಸೀದಿ ಮೇಲೆ ಹಕ್ಕು ಪ್ರತಿಪಾದಿಸುವಂತಿಲ್ಲ. ಇದು ಪ್ರಾಚ್ಯವಸ್ತು ಇಲಾಖೆ ಸಂಶೋಧನೆ ಹಾಗೂ ಐತಿಹಾಸಿಕ ದಾಖಲೆಗಳಿಂದ ಎಂದು ಶ್ರುತಪಟ್ಟಿದೆ' ಎಂದು ಯೋಗಿ ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌