ಆ್ಯಪ್ನಗರ

'ಗೋಡ್ಸೆ ದೇಶಭಕ್ತ' ಎಂದ ಪ್ರಜ್ಞಾ ಸಿಂಗ್‌ ಮಾತಿಗೆ ಬಿಜೆಪಿ ಖಂಡನೆ, ಪ್ರತಿಪಕ್ಷ ವಾಗ್ದಾಳಿ

'ಅವರ ಹೇಳಿಕೆಯನ್ನು ನಾವು ಸಂಪೂರ್ಣ ತಿರಸ್ಕರಿಸುತ್ತೇವೆ ಮತ್ತು ಖಂಡಿಸುತ್ತೇವೆ. ಇಂತಹ ಹೇಳಿಕೆ ನೀಡಿದ್ದೇಕೆ ಎಂದು ಬಿಜೆಪಿ ಅವರಿಂದ ಸ್ಪಷ್ಟನೆ ಕೇಳುತ್ತದೆ. ನಾಥೂರಾಂ ಗೋಡ್ಸೆ ಹಿಂದೆ-ಇಂದು-ಮುಂದೆಯೂ ದೇಶಭಕ್ತನೇ ಹೌದು ಎಂದು ನೀಡಿದ ಹೇಳಿಕೆ ಆಕ್ಷೇಪಾರ್ಹ. ಅದಕ್ಕಾಗಿ ಸಾರ್ವಜನಿಕ ಕ್ಷಮೆಯಾಚಿಸಬೇಕು' ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್ ನರಸಿಂಹರಾವ್ ಮಾಧ್ಯಮಗಳ ಮುಂದೆ ಹೇಳಿದರು.

Vijaya Karnataka Web 16 May 2019, 6:08 pm
ಹೊಸದಿಲ್ಲಿ: ಮಹಾತ್ಮಾ ಗಾಂಧಿ ಹತ್ಯೆ ಮಾಡಿರುವ ನಾಥೂರಾಂ ಗೋಡ್ಸೆ ದೇಶಭಕ್ತ ಎಂದು ಶ್ಲಾಘಿಸಿರುವ ಭೋಪಾಲ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್‌ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. ಇದೇ ವೇಳೆ ಪ್ರತಿಪಕ್ಷಗಳು ಬಿಜೆಪಿ ಮೇಲೆ ಮುಗಿಬಿದ್ದಿವೆ. ಪ್ರಧಾನಿ ನರೇಂದ್ರ ಮೋದಿ ಅವರೇ ಇದಕ್ಕೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿವೆ.
Vijaya Karnataka Web Pragya Singh new


'ಅವರ ಹೇಳಿಕೆಯನ್ನು ನಾವು ಸಂಪೂರ್ಣ ತಿರಸ್ಕರಿಸುತ್ತೇವೆ ಮತ್ತು ಖಂಡಿಸುತ್ತೇವೆ. ಇಂತಹ ಹೇಳಿಕೆ ನೀಡಿದ್ದೇಕೆ ಎಂದು ಬಿಜೆಪಿ ಅವರಿಂದ ಸ್ಪಷ್ಟನೆ ಕೇಳುತ್ತದೆ. ನಾಥೂರಾಂ ಗೋಡ್ಸೆ ಹಿಂದೆ-ಇಂದು-ಮುಂದೆಯೂ ದೇಶಭಕ್ತನೇ ಹೌದು ಎಂದು ನೀಡಿದ ಹೇಳಿಕೆ ಆಕ್ಷೇಪಾರ್ಹ. ಅದಕ್ಕಾಗಿ ಸಾರ್ವಜನಿಕ ಕ್ಷಮೆಯಾಚಿಸಬೇಕು' ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್ ನರಸಿಂಹರಾವ್ ಮಾಧ್ಯಮಗಳ ಮುಂದೆ ಹೇಳಿದರು.

ನಟ, ರಾಜಕಾರಣಿ ಕಮಲ್ ಹಾಸನ್ ನೀಡಿದ್ದ 'ಗೋಡ್ಸೆ' ಹೇಳಿಕೆಗೆ ಏನು ಹೇಳುವಿರಿ ಎಂದು ಗುರುವಾರ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ಪ್ರಜ್ಞಾ ಸಿಂಗ್‌ ಠಾಕೂರ್‌ 'ನಾಥೂರಾಂ ಗೋಡ್ಸೆ ದೇಶಭಕ್ತನಾಗಿದ್ದ. ಇಂದೂ ದೇಶಭಕ್ತನಾಗಿಯೇ ಇದ್ದಾನೆ. ಮುಂದೆಯೂ ದೇಶಭಕ್ತನಾಗಿಯೇ ಇರುತ್ತಾನೆ' ಎಂದು ಹೇಳಿಕೆ ನೀಡಿದ್ದರು.

'ಗೋಡ್ಸೆಯನ್ನು ಭಯೋತ್ಪಾದಕ ಎಂದು ಕರೆಯುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ. ಜನತೆ ಈ ಚುನಾವಣೆಯಲ್ಲಿ ಅವರಿಗೆ ತಕ್ಕ ಉತ್ತರ ಕೊಡುತ್ತಾರೆ' ಎಂದೂ ಪ್ರಜ್ಞಾ ಸಿಂಗ್ ಹೇಳಿದ್ದಾರೆ.

ನಾಥೂರಾಂ ಗೋಡ್ಸೆ ಯಾವತ್ತೂ ದೇಶಭಕ್ತನೇ: ಮತ್ತೆ ಸಾಧ್ವಿ ಪ್ರಜ್ಞಾ ಸಿಂಗ್ ವಿವಾದ


ಪ್ರಜ್ಞಾ ಹೇಳಿಕೆಗೆ ಕಾಂಗ್ರೆಸ್‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. 'ಭಾರತದ ಆತ್ಮದ ಮೇಲೆ ಗೋಡ್ಸೆ ಉತ್ತರಾಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಬಿಜೆಪಿ ಆಡಳಿತವಿದೆ, ಬಿಜೆಪಿ ನಾಯಕರು ರಾಷ್ಟ್ರಪಿತನ ಹಂತಕನನ್ನು ನಥಜ ದೇಶಭಕ್ತ ಎಂದು ಕರೆಯುತ್ತಿದ್ದಾರೆ. ಅದೇ ರೀತಿ ದೇಶಕ್ಕಾಗಿ ಪ್ರಾಣತೆತ್ತ ಹೇಮಂತ್ ಕರ್ಕರೆಯಂತಹ ಅಧಿಕಾರಿಗಳನ್ನು ದೇಶದ್ರೋಹಿಗಳು ಎನ್ನುತ್ತಾರೆ' ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ಬಣ್ಣಿಸಿದರು.

ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ದಿಗ್ವಿಜಯ್ ಸಿಂಗ್ ಕೂಡ ಠಾಕೂರ್ ಹೇಳಿಕೆಯನ್ನು ಖಂಡಿಸಿದರು. 'ಮೋದೀಜಿ, ಅಮಿತ್ ಶಾ ಜಿ ಮತ್ತು ರಾಜ್ಯ ಬಿಜೆಪಿ ಈ ಬಗ್ಗೆ ಹೇಳಿಕೆ ನೀಡಬೇಕು ಮತ್ತು ದೇಶದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಗೋಡ್ಸೆಯನ್ನು ವೈಭವೀಕರಿಸುವುದು ದೇಶಪ್ರೇಮವಲ್ಲ, ದೇಶದ್ರೋಹ ಎಂದು ದಿಗ್ವಿಜಯ್ ಹೇಳಿದರು.

ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ, ಎನ್‌ಸಿಪಿ ಮಹಾರಾಷ್ಟ್ರ ಅಧ್ಯಕ್ಷ ಜಯಂತ್ ಪಾಟೀಲ್‌ ಕೂಡ ಪ್ರಜ್ಞಾ ಸಿಂಗ್ ಹೇಳಿಕೆಯನ್ನು ಖಂಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ