ಆ್ಯಪ್ನಗರ

ಡಾ.ಲೋಹಿಯಾ ಗುಡುಗಿದರೆ ಕಾಂಗ್ರೆಸ್‌ ನಡುಗುತ್ತಿತ್ತು: ಪ್ರಧಾನಿ ಮೋದಿ

PTI 23 Mar 2019, 2:58 pm
ಹೊಸದಿಲ್ಲಿ: ಲೋಹಿಯಾ ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದೇವೆ. ಕೃಷಿ ಆಧುನಿಕತೆ ಮತ್ತು ರೈತರ ಏಳ್ಗೆ ಬಗ್ಗೆ ಲೋಹಿಯಾ ಬರೆದಿದ್ದಾರೆ. ಅವುಗಳನ್ನು ಎನ್‌ಡಿಎ ಸರಕಾರ ಸಮರ್ಥವಾಗಿ ಕಾರ್ಯರೂಪಕ್ಕೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.
Vijaya Karnataka Web whenever lohia spoke the congress trembled with fear says pm modi
ಡಾ.ಲೋಹಿಯಾ ಗುಡುಗಿದರೆ ಕಾಂಗ್ರೆಸ್‌ ನಡುಗುತ್ತಿತ್ತು: ಪ್ರಧಾನಿ ಮೋದಿ


ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ, ಕೃಷಿ ಸಿಂಚಾಯಿ ಯೋಜನೆ, ಇ-ನಾಮ್‌, ಮಣ್ಣಿನ ಆರೋಗ್ಯ ಕಾರ್ಡ್‌ ಮತ್ತಿತರ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಲೋಹಿಯಾ ಅವರ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಬರಹದಲ್ಲಿ ಹೇಳಿದ್ದಾರೆ.

ಡಾ. ರಾಮ್‌ ಮನೋಹರ್‌ ಲೋಹಿಯಾ ಅವರ 109 ಜನ್ಮದಿನದ ಅಂಗವಾಗಿ ಪ್ರಧಾನಿ ಮೋದಿ ತಮ್ಮ ಬ್ಲಾಗ್‌ ಬರಹದಲ್ಲಿ ಸ್ಮರಿಸಿದ್ದಾರೆ. ಸಮಾಜವಾದಿ ಹೆಸರಲ್ಲಿ ಹುಟ್ಟಿಕೊಂಡ ಕೆಲವು ಪ್ರಾದೇಶಿಕ ಪಕ್ಷಗಳು ಲೋಹಿಯಾ ಅವರ ಚಿಂತನೆಗಳನ್ನು ಗಾಳಿಗೆ ತೂರಿರುವ ಬಗ್ಗೆ ಪ್ರಧಾನಿ ಮೋದಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಡಾ. ಲೋಹಿಯಾ ಬೆಂಬಲಿಗರು ಎಂದು ಹೇಳಿಕೊಳ್ಳುವ ಪ್ರತಿಪಕ್ಷಗಳು ಸಮಾಜಿಕ ಪಿಡುಗಾಗಿದ್ದ ತ್ರಿವಳಿ ತಲಾಖ್‌ ನಿಷೇಧ ಕ್ರಮವನ್ನು ವಿರೋಧಿಸಿದರು ಎಂದು ಮೋದಿ ತಮ್ಮ ಬರಹದಲ್ಲಿ ದೂರಿದ್ದಾರೆ.

ಡಾ. ಲೋಹಿಯಾ ಗುಡುಗಿದರೆ ಕಾಂಗ್ರೆಸ್‌ ಭಯದಿಂದ ನಡುಗುತ್ತಿತ್ತು. ಕಾಂಗ್ರೆಸ್‌ ಆಡಳಿತವಧಿಯಲ್ಲಿ ಕೃಷಿ, ಉದ್ಯಮ, ಸೇನೆ ಹೀಗೆ ಯಾವ ವಿಭಾಗದಲ್ಲು ಅಭಿವೃದ್ಧಿ ಆಗದಿರುವ ಬಗ್ಗೆ ಲೋಹಿಯಾ ಧ್ವನಿ ಎತ್ತಿದ್ದರು ಎಂದು ಮೋದಿ ತಿಳಿಸಿದ್ದಾರೆ.

ಲೋಹಿಯಾ ಎಂದರೆ ಕಾಂಗ್ರೆಸ್‌ ವಿರೋಧಿ ಎಂಬಂತಿದ್ದರೂ ಅವರನ್ನು ಅನುಸರಿಸುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಪ್ರಾದೇಶಿಕ ಪಕ್ಷಗಳು ಮತಗಳಿಗಾಗಿ ಕಾಂಗ್ರೆಸ್‌ ಜತೆ ಮಹಾಮೈತ್ರಿ ಮಾಡಿಕೊಳ್ಳುತ್ತಿರುವುದು ಖಂಡನೀಯ ಎಂದು ಬರೆದಿದ್ದಾರೆ.

ಕಾಂಗ್ರೆಸ್‌ ಜತೆ ಪ್ರಾದೇಶಿಕ ಪಕ್ಷಗಳ ಮಹಾಮೈತ್ರಿ ಪ್ರಯತ್ನ ಖಂಡನೀಯ: ಪ್ರಧಾನಿ ಮೋದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌