ಆ್ಯಪ್ನಗರ

ಇಂದಿರಾ ಕಾಲದಿಂದ ಆರಂಭವಾದ ಗರೀಬಿ ಹಠಾವೋ ನಿವಾರಣೆ ಆಗಿಲ್ಲ: ರಾಹುಲ್‌ ಉತ್ತರಿಸಲಿ ಎಂದ ನಿರ್ಮಲಾ

ಮೋದಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದು ಕಾಂಗ್ರೆಸ್ ವಿವಿಧ ರಾಜ್ಯಗಳಲ್ಲಿ‌ ನೀಡಿದ ಭರವಸೆಗಳನ್ನು ಆಡಳಿತಕ್ಕೇರಿದ ಬಳಿಕ ಈಡೇರಿಸಲು ವಿಫಲವಾಗಿದೆ‌‌

Vijaya Karnataka Web 26 Mar 2019, 12:33 pm
ಉಡುಪಿ: ಮಾಜಿ‌ ಪ್ರಧಾನಿ ಇಂದಿರಾ ಕಾಲದಿಂದ ಆರಂಭವಾದ ಗರೀಬಿ‌ ಹಠಾವೋ ಮೊಮ್ಮಗನ‌‌ ಕಾಲಕ್ಕೂ ನಿವಾರಣೆಯಾಗದಿರಲು ಕಾರಣವೇನೆಂದು‌ ರಾಹುಲ್‌ ಗಾಂಧಿ ಉತ್ತರಿಸಬೇಕು ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ‌ ಸೀತಾರಾಮನ್‌ ಹೇಳಿದ್ದಾರೆ.
Vijaya Karnataka Web ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌


ಅವರು ಮಣಿಪಾಲದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದು ಕಾಂಗ್ರೆಸ್ ವಿವಿಧ ರಾಜ್ಯಗಳಲ್ಲಿ‌ ನೀಡಿದ ಭರವಸೆಗಳನ್ನು ಆಡಳಿತಕ್ಕೇರಿದ ಬಳಿಕ ಈಡೇರಿಸಲು ವಿಫಲವಾಗಿದೆ‌‌ ಎಂದರು.

ಬಿಜೆಪಿ‌ ವಿಜಯ ಸಂಕಲ್ಪ ಯಾತ್ರೆ ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ ಆಯೋಜಿಸಿದ್ದು ರಾಹುಲ್ ಗಾಂಧಿ‌ ಬಡವರಿಗೆ ಮಾಸಿಕ 6000 ರೂ. ನೀಡುವ ಪೊಳ್ಳು ಭರವಸೆ ಜನ ನಂಬಲ್ಲ. ಬಿಜೆಪಿ ಈಗಾಗಲೇ ಬಡವರಿಗೆ ನೆರವಾಗುವ ನಾನಾ ಯೋಜನೆ ಜಾರಿಗೆ ತಂದಿದೆ ಎಂದು ಸಚಿವರು ಹೇಳಿದರು.

ಉಡುಪಿ‌ ಚಿಕ್ಕಮಗಳೂರು ಕ್ಷೇತ್ರಕ್ಕೆ ಸಂಸದೆ ಶೋಭಾ‌ ಕರಂದ್ಲಾಜೆ ಕೇಂದ್ರೀಯ ವಿದ್ಯಾಲಯ, ಪಾಸ್ ಪೋಟ್೯ ಕೇಂದ್ರ, ಕುಶಲಕರ್ಮಿಗಳ ಕೌಶಲ್ಯಾಭಿವೃದ್ಧಿ ಕೇಂದ್ರ‌ ತಂದಿದ್ದಾರೆ. ಸ್ಟಾರ್ಟಪ್‌‌, ಅಟಲ್ ಜಿ ಟಿಂಕರಿಂಗ್ ಲ್ಯಾಬ್‌ ಕರಾವಳಿಯ‌ ಶಾಲಾ‌ ಕಾಲೇಜುಗಳಲ್ಲಿ ಸ್ಥಾಪಿಸಿ ಮಕ್ಕಳ ಮೂಲಕ ಸಂಶೋಧನೆಗೆ‌ ನೀತಿ ಆಯೋಗ ಅನುದಾನ ನೀಡಿದೆ. ನಿಟ್ಟೆಯಲ್ಲಿ ಸಂಶೋಧನಾ‌ ಹಬ್‌ ಆರಂಭವಾಗಿದೆ‌ ಎಂದರು.

ಸುವರ್ಣ‌ ತ್ರಿಭುಜ ದೋಣಿ‌ ಸಹಿತ 7 ಮೀನುಗಾರರ ನಾಪತ್ತೆ ಪ್ರಕರಣಕ್ಕೆ‌ ಸಂಬಂಧಿಸಿ‌ ಶೋಧ‌ ಮುಂದುವರಿದಿದೆ. ನೀತಿ‌ ಸಂಹಿತೆಯಿಂದಾಗಿ ನೌಕಾ ಪಡೆಯ‌ ಅಧಿಕಾರಿಗಳು ಮಲ್ಪೆಗೆ ಬಂದಿಲ್ಲ.‌ ಕಾಣೆಯಾದ ಮೀನುಗಾರ ಕುಟುಂಬ‌ ಸದಸ್ಯರು ರಕ್ಷಣಾ‌ ಸಚಿವರು ಹಾಗೂ ನೌಕಾ‌ಪಡೆ ಅಧಿಕಾರಿಗಳ ಭೇಟಿ ಮಾತುಕತೆಗಾಗಿ‌ ದಿಲ್ಲಿಗೆ ಆಹ್ವಾನಿಸಲಾಗಿದೆ ಎಂದು ನಿರ್ಮಲಾ ತಿಳಿಸಿದರು.

ಜೆಡಿಎಸ್ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್ ಮೀನುಗಾರರ ನಾಪತ್ತೆಗೆ ನೌಕಾಪಡೆ ಮೇಲೆ ಹೊರಿಸಿದ ಆರೋಪ‌ ಬೇಜವಾಬ್ದಾರಿಯುತವಾಗಿದೆ.
ಸೂಕ್ಷ್ಮ ವಿಷಯದಲ್ಲಿ ಆರೋಪ‌ ಒಳಿತಲ್ಲ, ಮೀನುಗಾರ ಕುಟುಂಬಕ್ಕೆ ನ್ಯಾಯ‌ ಒದಗಿಸಲು ಬದ್ಧ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ‌ ಜಿಲ್ಲಾಧ್ಯಕ್ಷ ಮಟ್ಟಾರು‌ ರತ್ನಾಕರ ಹೆಗ್ಡೆ, ಪ್ರಭಾರಿ ಉದಯ‌ ಕುಮಾರ್‌ ಶೆಟ್ಟಿ, ಉಡುಪಿ‌ ಶಾಸಕ‌ ಕೆ.ರಘುಪತಿ‌ ಭಟ್, ಕಾಪು‌ ಶಾಸಕ ಲಾಲಾಜಿ ಆರ್.ಮೆಂಡನ್, ಮೂಡಿಗೆರೆ ಶಾಸಕ ಕುಮಾರಸ್ವಾಮಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌