ಹೊಸದಿಲ್ಲಿ: ಚುನಾವಣಾ ಆಯೋಗವನ್ನೇ ಜೈಲಿಗೆ ಕಳಿಸುವುದಾಗಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಬೆದರಿಕೆ ಹಾಕಿದ್ದಾರೆ. ಚುನಾವಣಾ ರ್ಯಾಲಿಯ ವೇಳೆ ಪ್ರಕಾಶ್ ಅಂಬೇಡ್ಕರ್ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾರಿಪಾ ಬಹುಜನ್ ಮಹಾಸಂಘದ (ಬಿಬಿಎಂ) ಮುಖ್ಯಸ್ಥನಾಗಿರುವ ಪ್ರಕಾಶ್ ಅಂಬೇಡ್ಕರ್ ತಾನು ಅಧಿಕಾರಕ್ಕೆ ಬಂದರೆ ಚುನಾವಣಾ ಆಯೋಗವನ್ನೇ ಎರಡು ದಿನಗಳ ಕಾಲ ಜೈಲಿಗೆ ಹಾಕಿಸುವುದಾಗಿ ಮಹಾರಾಷ್ಟ್ರದ ಯಾವತ್ಮಲ್ನಲ್ಲಿ ನಡೆದ ಚುನಾವಣಾ ರ್ಯಾಲಿಯ ವೇಳೆ ಹೇಳಿದ್ದಾರೆ.
ನಾವು ಪುಲ್ವಾಮಾ ದಾಳಿ ಬಗ್ಗೆ ಮಾತನಾಡುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳುತ್ತದೆ. ಆದರೆ, ಸಂವಿಧಾನ ನಮಗೆ ನಾವೇನು ಬೇಕಾದರೂ ಮಾಡಲು ಅವಕಾಶ ಕೊಟ್ಟಾಗ ನಾವು ಯಾಕೆ ಆ ಬಗ್ಗೆ ಮಾತನಾಡಬಾರದು ಎಂದು ಅಂಬೇಡ್ಕರ್ ಮೊಮ್ಮಗ ಹೇಳಿದರು. ಬಳಿಕ, ನಾನು ಅಧಿಕಾರಕ್ಕೆ ಬಂದರೆ ಚುನಾವಣಾ ಆಯೋಗವನ್ನೇ ಎರಡು ದಿನಗಳ ಕಾಲ ಜೈಲಿಗೆ ಹಾಕುವುದಾಗಿ ಪ್ರಕಾಶ್ ಅಂಬೇಡ್ಕರ್ ಹೇಳಿದರು.
ಮಹಾರಾಷ್ಟ್ರದ ಸೋಲಾಪುರ ಹಾಗೂ ಅಕೋಲಾ ಲೋಕಸಭೆ ಕ್ಷೇತ್ರಗಳಿಂದ ಪ್ರಕಾಶ್ ಅಂಬೇಡ್ಕರ್ ನಾಮಪತ್ರ ಸಲ್ಲಿಸಿದ್ದು, ಎರಡೂ ಕಡೆ ರೋಡ್ ಶೋ ವೇಳೆ ಸುಮಾರು 2 ಲಕ್ಷ ಬೆಂಬಲಿಗರು ಭಾಗಿಯಾಗಿದ್ದರು. ಜತೆಗೆ, ಅಸಾದುದ್ದೀನ್ ಓವೈಸಿಯ ಎಐಎಂಐಎಂ ಜತೆಗೆ ಮಹಾರಾಷ್ಟ್ರ ರಾಜ್ಯದಲ್ಲಿ ಅಂಬೇಡ್ಕರ್ ಮೊಮ್ಮಗ ಮೈತ್ರಿ ಮಾಡಿಕೊಂಡಿದ್ದಾರೆ. ಇದು ಬಿಜೆಪಿ - ಶಿವಸೇನಾ ಹಾಗೂ ಕಾಂಗ್ರೆಸ್ ಮೈತ್ರಿಕೂಟವನ್ನೂ ನಿದ್ದೆಗೆಡಿಸಿದೆ.
ಇನ್ನೊಂದೆಡೆ, ಸೋಲಾಪುರ ಲೋಕಸಭೆ ಕ್ಷೇತ್ರದಲ್ಲಿ ಪ್ರಕಾಶ್ ಅಂಬೇಡ್ಕರ್ಗೆ ಬೆಂಬಲ ನೀಡಲು ಸಿಪಿಐ(ಎಂ) ಸಹ ನಿರ್ಧರಿಸಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೇಂದ್ರ ಮಾಜಿ ಸಚಿವ ಸುಶೀಲ್ ಕುಮಾರ್ ಶಿಂಧೆ ವಿರುದ್ಧ ಪ್ರಕಾಶ್ ಅಂಬೇಡ್ಕರ್ ಚುನಾವಣೆಗೆ ಸ್ಪರ್ಧಿಸಿದ್ದು, ಬಿಜೆಪಿ ಖ್ಯಾತ ಆಧ್ಯಾತ್ಮಿಕ ನಾಯಕರಾಗಿರುವ ಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿಯನ್ನು ಲೋಕಸಭೆ ಚುನಾವಣೆಯಲ್ಲಿ ನಿಲ್ಲಿಸಿದೆ.
ಸೋಲಾಪುರ ಲೋಕಸಭೆ ಕ್ಷೆಥ್ರದಲ್ಲಿ ಗೆಲ್ಲಲು ಪಣತೊಟ್ಟಿರುವ ಬಿಜೆಪಿ - ಶಿವಸೇನಾ ಮೈತ್ರಿಕೂಟಕ್ಕೆ ಸಿಪಿಐ(ಎಂ) - ವಿಬಿಎ ಮೈತ್ರಿಕೂಟದ ಜತೆಗೆ ಬಿಎಸ್ಪಿ - ಎಸ್ಪಿ ಮೈತ್ರಿಕೂಟ ಸಹ ಸವಾಲಾಗಿ ಪರಿಣಮಿಸಿದ್ದು, ಎನ್ಡಿಎ ಮತಗಳು ವಿಭಜನೆಯಾಗುವ ಭೀತಿಯಲ್ಲಿದೆ.
ಭಾರಿಪಾ ಬಹುಜನ್ ಮಹಾಸಂಘದ (ಬಿಬಿಎಂ) ಮುಖ್ಯಸ್ಥನಾಗಿರುವ ಪ್ರಕಾಶ್ ಅಂಬೇಡ್ಕರ್ ತಾನು ಅಧಿಕಾರಕ್ಕೆ ಬಂದರೆ ಚುನಾವಣಾ ಆಯೋಗವನ್ನೇ ಎರಡು ದಿನಗಳ ಕಾಲ ಜೈಲಿಗೆ ಹಾಕಿಸುವುದಾಗಿ ಮಹಾರಾಷ್ಟ್ರದ ಯಾವತ್ಮಲ್ನಲ್ಲಿ ನಡೆದ ಚುನಾವಣಾ ರ್ಯಾಲಿಯ ವೇಳೆ ಹೇಳಿದ್ದಾರೆ.
ನಾವು ಪುಲ್ವಾಮಾ ದಾಳಿ ಬಗ್ಗೆ ಮಾತನಾಡುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳುತ್ತದೆ. ಆದರೆ, ಸಂವಿಧಾನ ನಮಗೆ ನಾವೇನು ಬೇಕಾದರೂ ಮಾಡಲು ಅವಕಾಶ ಕೊಟ್ಟಾಗ ನಾವು ಯಾಕೆ ಆ ಬಗ್ಗೆ ಮಾತನಾಡಬಾರದು ಎಂದು ಅಂಬೇಡ್ಕರ್ ಮೊಮ್ಮಗ ಹೇಳಿದರು. ಬಳಿಕ, ನಾನು ಅಧಿಕಾರಕ್ಕೆ ಬಂದರೆ ಚುನಾವಣಾ ಆಯೋಗವನ್ನೇ ಎರಡು ದಿನಗಳ ಕಾಲ ಜೈಲಿಗೆ ಹಾಕುವುದಾಗಿ ಪ್ರಕಾಶ್ ಅಂಬೇಡ್ಕರ್ ಹೇಳಿದರು.
ಮಹಾರಾಷ್ಟ್ರದ ಸೋಲಾಪುರ ಹಾಗೂ ಅಕೋಲಾ ಲೋಕಸಭೆ ಕ್ಷೇತ್ರಗಳಿಂದ ಪ್ರಕಾಶ್ ಅಂಬೇಡ್ಕರ್ ನಾಮಪತ್ರ ಸಲ್ಲಿಸಿದ್ದು, ಎರಡೂ ಕಡೆ ರೋಡ್ ಶೋ ವೇಳೆ ಸುಮಾರು 2 ಲಕ್ಷ ಬೆಂಬಲಿಗರು ಭಾಗಿಯಾಗಿದ್ದರು. ಜತೆಗೆ, ಅಸಾದುದ್ದೀನ್ ಓವೈಸಿಯ ಎಐಎಂಐಎಂ ಜತೆಗೆ ಮಹಾರಾಷ್ಟ್ರ ರಾಜ್ಯದಲ್ಲಿ ಅಂಬೇಡ್ಕರ್ ಮೊಮ್ಮಗ ಮೈತ್ರಿ ಮಾಡಿಕೊಂಡಿದ್ದಾರೆ. ಇದು ಬಿಜೆಪಿ - ಶಿವಸೇನಾ ಹಾಗೂ ಕಾಂಗ್ರೆಸ್ ಮೈತ್ರಿಕೂಟವನ್ನೂ ನಿದ್ದೆಗೆಡಿಸಿದೆ.
ಇನ್ನೊಂದೆಡೆ, ಸೋಲಾಪುರ ಲೋಕಸಭೆ ಕ್ಷೇತ್ರದಲ್ಲಿ ಪ್ರಕಾಶ್ ಅಂಬೇಡ್ಕರ್ಗೆ ಬೆಂಬಲ ನೀಡಲು ಸಿಪಿಐ(ಎಂ) ಸಹ ನಿರ್ಧರಿಸಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೇಂದ್ರ ಮಾಜಿ ಸಚಿವ ಸುಶೀಲ್ ಕುಮಾರ್ ಶಿಂಧೆ ವಿರುದ್ಧ ಪ್ರಕಾಶ್ ಅಂಬೇಡ್ಕರ್ ಚುನಾವಣೆಗೆ ಸ್ಪರ್ಧಿಸಿದ್ದು, ಬಿಜೆಪಿ ಖ್ಯಾತ ಆಧ್ಯಾತ್ಮಿಕ ನಾಯಕರಾಗಿರುವ ಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿಯನ್ನು ಲೋಕಸಭೆ ಚುನಾವಣೆಯಲ್ಲಿ ನಿಲ್ಲಿಸಿದೆ.
ಸೋಲಾಪುರ ಲೋಕಸಭೆ ಕ್ಷೆಥ್ರದಲ್ಲಿ ಗೆಲ್ಲಲು ಪಣತೊಟ್ಟಿರುವ ಬಿಜೆಪಿ - ಶಿವಸೇನಾ ಮೈತ್ರಿಕೂಟಕ್ಕೆ ಸಿಪಿಐ(ಎಂ) - ವಿಬಿಎ ಮೈತ್ರಿಕೂಟದ ಜತೆಗೆ ಬಿಎಸ್ಪಿ - ಎಸ್ಪಿ ಮೈತ್ರಿಕೂಟ ಸಹ ಸವಾಲಾಗಿ ಪರಿಣಮಿಸಿದ್ದು, ಎನ್ಡಿಎ ಮತಗಳು ವಿಭಜನೆಯಾಗುವ ಭೀತಿಯಲ್ಲಿದೆ.