ಆ್ಯಪ್ನಗರ

ದಕ್ಷಿಣ ಭಾರತದಿಂದ ಸ್ಪರ್ಧಿಸಿ: ಮೋದಿಗೆ ತರೂರ್‌ ಸವಾಲು

ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಅಥವಾ ಕೇರಳದಿಂದ ಸ್ಪರ್ಧಿಸುವ ಧೈರ್ಯ ಇದೆಯಾ ಎಂದು ಕೇರಳದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಸವಾಲು ಹಾಕಿದ್ದಾರೆ.

Vijaya Karnataka 8 Apr 2019, 5:00 am
ಹೊಸದಿಲ್ಲಿ: ಕೇರಳದ ವಯನಾಡ್‌ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ದಕ್ಷಿಣ ಹಾಗೂ ಉತ್ತರ ಭಾರತದ ಎರಡು ಕ್ಷೇತ್ರಗಳಿಂದ ಗೆಲ್ಲುವ ಭರವಸೆ ತೋರಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಅಥವಾ ಕೇರಳದಿಂದ ಸ್ಪರ್ಧಿಸುವ ಧೈರ್ಯ ಇದೆಯಾ ಎಂದು ಕೇರಳದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಸವಾಲು ಹಾಕಿದ್ದಾರೆ.
Vijaya Karnataka Web tharoor


ಉತ್ತರ ಪ್ರದೇಶದ ಅಮೇಠಿಯಲ್ಲಿ ಸೋಲುವ ಭಯದಿಂದ ರಾಹುಲ್‌ ವಯನಾಡ್‌ಗೆ ಪಲಾಯನ ಮಾಡಿದ್ದಾರೆ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿರುವ ಅವರು, ''ರಾಹುಲ್‌ ಅವರಂತೆ ಮೋದಿ ಕೂಡ ದಕ್ಷಿಣ ಭಾರತದಿಂದ ಅರ್ಥಾತ್‌ ವಾರಾಣಸಿಯ ಜತೆಗೆ ತಮಿಳುನಾಡು ಇಲ್ಲವೇ ಕೇರಳದಿಂದ ಸ್ಪರ್ಧಿಸುವ ಧೈರ್ಯ ತೋರುವರೇ?''ಎಂದು ಪ್ರಶ್ನಿಸಿದ್ದಾರೆ. ''ರಾಹುಲ್‌ ವಯನಾಡ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದರಿಂದ ದಕ್ಷಿಣ ರಾಜ್ಯಗಳಲ್ಲಿ ಭಾರಿ ಉತ್ಸಾಹ ಕಂಡುಬರುತ್ತಿದೆ. ದೇಶದ ಮುಂದಿನ ಪ್ರಧಾನಿ ಇಲ್ಲಿಂದಲೇ ಗೆದ್ದು ಬರಬಹದು,'' ಎಂದು ತರೂರ್‌ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

''ರಾಹುಲ್‌ ವಯನಾಡ್‌ ಕ್ಷೇತ್ರವನ್ನು ಆರಿಸಿಕೊಂಡ ಬಗ್ಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಬಹುಸಂಖ್ಯಾತರು ಹೆಚ್ಚಿರುವ ಕ್ಷೇತ್ರದಿಂದ ಓಡಿಹೋಗಿ ಅಲ್ಪಸಂಖ್ಯಾತರು ಹೆಚ್ಚಿರುವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದೆಲ್ಲಾ ಟೀಕಿಸುತ್ತಿರುವುದು ಧರ್ಮಾಂಧತೆಯ ಪ್ರತೀಕ,'' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌