ಆ್ಯಪ್ನಗರ

ಸೋಲಿಗೆ ಕನ್ಹಯ್ಯ ಕುಮಾರ್ ಪ್ರತಿಕ್ರಿಯಿಸಿದ್ದು ಹೇಗೆ?

ಒಟ್ಟು 12. 17 ಲಕ್ಷ ಮತಗಳಲ್ಲಿ ಕೇಂದ್ರ ಸಚಿವ ಗಿರಿ ರಾಜ್ ಸಿಂಗ್ ಅವರು 6. 88 ಮತಗಳನ್ನು ಸೆಳೆದುಕೊಂಡಿದ್ದರೆ, ಕನ್ಹಯ್ಯ ಕೇವಲ 2.68 ಲಕ್ಷ ಮತ ಪಡೆದಿದ್ದಾರೆ.

Times Now 25 May 2019, 8:11 am
ಹೊಸದಿಲ್ಲಿ: ಬಿಜೆಪಿ ಫ್ರೈರ್ ಬ್ರ್ಯಾಂಡ್ ನಾಯಕ ಗಿರಿರಾಜ್ ಸಿಂಗ್ ವಿರುದ್ಧ ಸೋತ ಬಳಿಕ ಪ್ರತಿಕ್ರಿಯಿಸಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ, ಸಿಪಿಐ ನಾಯಕ ಕನ್ಹಯ್ಯ ಕುಮಾರ್, ನಾನು ಚುನಾವಣೆಯಲ್ಲಿ ಸೋತಿರಬಹುದು, ಆದರೆ ಯುದ್ಧದಲ್ಲಲ್ಲ ಎಂದಿದ್ದಾರೆ. ಸಿಂಗ್ ಅವರಿಂದ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಅವರು ಸೋಲೊಪ್ಪಿಕೊಂಡಿದ್ದಾರೆ.
Vijaya Karnataka Web Kanhaiya


ದೇಶದ್ರೋಹ ಪ್ರಕರಣ ಎದುರಿಸುತ್ತಿರುವ, ತುಕಡೆ ತುಕಡೆ ಗ್ಯಾಂಗ್ ಸದಸ್ಯ ಕನ್ಹಯ್ಯ ಕುಮಾರ್ ಬಿಹಾರದ ಬೇಗುಸರಾಯ್ ಕ್ಷೇತ್ರದಿಂದ ಕಣಕ್ಕಿಳಿದಿದ್ದರು.

ಒಟ್ಟು 12. 17 ಲಕ್ಷ ಮತಗಳಲ್ಲಿ ಕೇಂದ್ರ ಸಚಿವ ಗಿರಿ ರಾಜ್ ಸಿಂಗ್ ಅವರು 6. 88 ಮತಗಳನ್ನು ಸೆಳೆದುಕೊಂಡಿದ್ದರೆ, ಕನ್ಹಯ್ಯ ಕೇವಲ 2.68 ಲಕ್ಷ ಮತ ಪಡೆದಿದ್ದಾರೆ.

ಎಲ್ಲರ ಸಂತೋಷಕ್ಕಾಗಿ ನಾನು ನಡೆಯುತ್ತೇನೆ, ಈ ಹಾದಿಯಲ್ಲಿ ನೆಲಕ್ಕುರುಳಬಹುದು, ಮತ್ತೆದ್ದು ಹೋರಾಡಿ ಗೆಲ್ಲುತ್ತೇನೆ ಎಂದವರು ಟ್ವೀಟ್ ಮಾಡಿದ್ದಾರೆ.


2014ರ ಲೋಕಸಭಾ ಚುನಾವಣೆಯಲ್ಲಿ ಗಿರಿರಾಜ್‌ ಸಿಂಗ್‌ ನವಡಾ ಕ್ಷೇತ್ರದಿಂದ ಗೆದ್ದಿದ್ದರು. ಆದರೆ ಈ ಬಾರಿ ಅವರಿಗೆ ನವಡಾ ಕ್ಷೇತ್ರದಿಂದ ಟಿಕೆಟ್‌ ನೀಡದೆ, ಬೇಗುಸರಾಯ್‌ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ನವಡಾ ಕ್ಷೇತ್ರವನ್ನು ಮಿತ್ರಪಕ್ಷ ಎಲ್‌ಜೆಪಿಗೆ ಬಿಟ್ಟುಕೊಡಲಾಗಿತ್ತು. ಪಕ್ಷದ ವರಿಷ್ಠರ ಈ ನಡೆಯು ಗಿರಿರಾಜ್‌ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಅಸಮಧಾನದ ನಡುವೆಯೂ ಅವರು ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಪರ್ಧೆಗೆ ಬಿಜೆಪಿ ನಾಯಕನ ಹಿಂಜರಿಕೆ ಬಗ್ಗೆ ವ್ಯಂಗ್ಯವಾಡಿದ್ದ ಕನ್ಹಯ್ಯ ಕುಮಾರ್‌, ಗಿರಿರಾಜ್‌ ಸಿಂಗ್‌ ಅವರನ್ನು ಶಾಲೆಗೆ ಹೋಗೆನೆಂದು ಚಂಡಿ ಹಿಡಿಯುವ ಹುಡುಗನಿಗೆ ಹೋಲಿಸಿದ್ದರು.


ಮತ್ತೀಗ ಗಿರಿರಾಜ್ ಸಿಂಗ್ ವಿರುದ್ಧ ಲಕ್ಷಾಂತರ ಮತಗಳ ಅಂತರದಿಂದ ಸಿಪಿಐ ಅಭ್ಯರ್ಥಿ ಸೋಲುಂಡಿದ್ದಾರೆ.

ಕನ್ಹಯ್ಯ ಸೋಲಿಗೆ ಪ್ರತ್ರಿಕ್ರಿಯಿಸಿರುವ, ಗೋರಖ್‌ಪುರ ಕ್ಷೇತ್ರದ ವಿಜೇತ ರವಿ ಕಿಶನ್ , ದೇಶವನ್ನು ಒಡೆಯುತ್ತೇನೆ ಎಂದವರು, ದೇಶ್ ತುಕ್ಡೆ ತುಕ್ಡೆ ಕರೇಂಗೆ ಎಂದವರು ಜನರ ವಿಶ್ವಾಸವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ದೇಶ ವಿರೋಧಿ ಮಾತನಾಡುವವರು ಗೆಲುವನ್ನು ಸಾಧಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ