ಮುಂಬಯಿ: ''ನಾವು ನಿಮಗೆ ಮೋಸ ಮಾಡುವುದಿಲ್ಲ, ನೀವೂ ನಮ್ಮ ಬೆನ್ನಿಗೆ ಇರಿಯುವ ಕೆಲಸ ಮಾಡಬೇಡಿ,'' ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿ ನಾಯಕರಿಗೆ ಕಿವಿಮಾತು ಹೇಳಿದ್ದಾರೆ. ಬಿಜೆಪಿ ಜತೆ ಮರುಮೈತ್ರಿ ಏರ್ಪಟ್ಟ ಬಳಿಕ ಪಕ್ಷದ ಮುಖವಾಣಿ 'ಸಾಮ್ನಾ'ಕ್ಕೆ ನೀಡಿರುವ ವಿಸ್ತೃತ ಸಂದರ್ಶನದಲ್ಲಿ ಅವರು, ಉಭಯ ಪಕ್ಷಗಳೂ ಪರಸ್ಪರ ನಿಷ್ಠೆಯಿಂದ ಇದ್ದರೆ ಮೈತ್ರಿ ಸದೃಢವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ''ಹಿಂದುತ್ವದ ಕಾರಣದಿಂದಲೇ ಬಿಜೆಪಿ ಜತೆಗೆ ಮರುಮೈತ್ರಿ ಏರ್ಪಟ್ಟಿದೆ. ಜನರ ಸಲುವಾಗಿ ನಾವು ಇಟ್ಟಿದ್ದ ಬೇಡಿಕೆಗಳನ್ನು ಈಡೇರಿಸುವುದಾಗಿ ಬಿಜೆಪಿಯೂ ಸಮ್ಮತಿಸಿದೆ,'' ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಪೈಕಿ ಶಿವಸೇನೆ 23 ಮತ್ತು ಬಿಜೆಒಇ 25 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿವೆ.
‘ನಾವೂ ದ್ರೋಹ ಮಾಡಲ್ಲ ನೀವೂ ಬೆನ್ನಿಗೆ ಇರಿಯದಿರಿ’
ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಪೈಕಿ ಶಿವಸೇನೆ 23 ಮತ್ತು ಬಿಜೆಒಇ 25 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿವೆ.
Vijaya Karnataka 3 Apr 2019, 5:00 am