ಆ್ಯಪ್ನಗರ

ಜೆಡಿಎಸ್‌ ಪರ ಕೆಲಸ ಮಾಡಿ: ಹಾಸನ ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಸೂಚನೆ

ಹಾಸನದಲ್ಲಿ ಬಿಕ್ಕಟ್ಟು ಎದುರಾದದ್ದರಿಂದ ಸಿದ್ದರಾಮಯ್ಯ ಅವರು ಉಭಯ ಪಕ್ಷಗಳ ಮುಖಂಡರೊಂದಿಗೆ ಗುರುವಾರ ಸಭೆ ನಡೆಸಬೇಕಿತ್ತು.

Vijaya Karnataka 22 Mar 2019, 8:52 am
ಬೆಂಗಳೂರು: ಮೈತ್ರಿ ಸೂತ್ರದಂತೆ ಹಾಸನದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸುತ್ತಿರುವ ಪ್ರಜ್ವಲ್‌ ರೇವಣ್ಣ ಪರ ಕೆಲಸ ಮಾಡುವಂತೆ ಜಿಲ್ಲೆಯ ಕಾಂಗ್ರೆಸ್‌ ಮುಖಂಡರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
Vijaya Karnataka Web siddaramaiah


ಹಾಸನದಲ್ಲಿ ಬಿಕ್ಕಟ್ಟು ಎದುರಾದದ್ದರಿಂದ ಸಿದ್ದರಾಮಯ್ಯ ಅವರು ಉಭಯ ಪಕ್ಷಗಳ ಮುಖಂಡರೊಂದಿಗೆ ಗುರುವಾರ ಸಭೆ ನಡೆಸಬೇಕಿತ್ತು. ಕಾಂಗ್ರೆಸ್‌ ಮುಖಂಡರು ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ್ದರು. ಆದರೆ, ಸಚಿವ ಹಾಗೂ ಜೆಡಿಎಸ್‌ ಮುಖಂಡ ಎಚ್‌.ಡಿ.ರೇವಣ್ಣ ಭೇಟಿ ನೀಡಿರಲಿಲ್ಲ. ಜತೆಗೆ ಹೈಕಮಾಂಡ್‌ ಮಟ್ಟದ ಸಭೆಯಲ್ಲಿ ಭಾಗಿಯಾಗಲು ದಿಲ್ಲಿಗೆ ತೆರಳಬೇಕಿರುವುದರಿಂದ ಈ ಸಭೆಯನ್ನು ಸಿದ್ದು ಮುಂದೂಡಿದರು. ಈ ಸಭೆ ಶನಿವಾರ ನಡೆಯುವ ಸಾಧ್ಯತೆಯಿದೆ.

ಈ ನಡುವೆಯೂ ಮೈತ್ರಿಧರ್ಮ ಪಾಲಿಸಬೇಕು. ಜೆಡಿಎಸ್‌ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ಜತೆಗಿರಬೇಕು. ವರಿಷ್ಠರ ನಿರ್ದೇಶನ ಇರುವುದರಿಂದ ರಾಜಕೀಯ ಪ್ರತಿಷ್ಠೆ ಬದಿಗಿರಿಸಿ ಇದೊಂದು ಬಾರಿ ಸಹಿಸಿಕೊಳ್ಳಬೇಕು ಎಂದು ಹಾಸನದ ಮುಖಂಡರಿಗೆ ಸಿದ್ದರಾಮಯ್ಯ ಕಟ್ಟಪ್ಪಣೆ ಮಾಡಿದರು ಎನ್ನಲಾಗಿದೆ.

''ಜಿಲ್ಲೆಯಲ್ಲಿ ಕಾಂಗ್ರೆಸ್‌ ಗೌರವವೂ ಉಳಿಯಬೇಕು. ಈ ದೃಷ್ಟಿಯಿಂದ ನಮ್ಮ ನಾಯಕರ ಮುಂದೆ ಕೆಲ ವಿಚಾರ ಹೇಳಿಕೊಂಡಿದ್ದೇವೆ. ವರಿಷ್ಠರ ಸೂಚನೆಯಂತೆ ನಾವು ಜಿಲ್ಲೆಯಲ್ಲಿ ಕೆಲಸ ಮಾಡುತ್ತೇವೆ,'' ಎಂದು ಸಿದ್ದರಾಮಯ್ಯ ಭೇಟಿ ಬಳಿಕ ಮಾಧ್ಯಮಕ್ಕೆ ಎದುರಾದ ಎಂಎಲ್ಸಿ ಗೋಪಾಲಸ್ವಾಮಿ ಸೇರಿದಂತೆ ಹಾಸನದ ಕಾಂಗ್ರೆಸ್‌ ಮುಖಂಡರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ