ಆ್ಯಪ್ನಗರ

ಮೋದಿಗೆ ವಿಶ್ವನಾಯಕರ ಅಭಿನಂದನೆ

ಭೂತಾನ್‌ ದೊರೆ ಜಿಗ್ಮೆ ಖೇಸರ್‌ ವಾಂಗ್‌ಚುಕ್‌ ಪ್ರಧಾನಿ ಮೋದಿಗೆ ಕರೆ ಮಾಡಿ ಶುಭಾಶಯ ಕೋರಿದ್ದಾರೆ. ಥಿಂಫು/ವಾಷಿಂಗ್ಟನ್‌ : ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಮೂಲಕ ಎರಡನೇ ಅವಧಿಗೆ ಪ್ರಧಾನಿ ಗದ್ದುಗೆ ...

Vijaya Karnataka 25 May 2019, 5:00 am
ಥಿಂಫು/ವಾಷಿಂಗ್ಟನ್‌ : ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಮೂಲಕ ಎರಡನೇ ಅವಧಿಗೆ ಪ್ರಧಾನಿ ಗದ್ದುಗೆ ಏರುತ್ತಿರುವ ನರೇಂದ್ರ ಮೋದಿ ಅವರಿಗೆ ವಿಶ್ವಾದ್ಯಂತ ಗಣ್ಯರಿಂದ ಅಭಿನಂದನೆಯ ಮಹಾಪೂರವೇ ಹರಿದುಬಂದಿದೆ.
Vijaya Karnataka Web world leaders congrats narendra modi
ಮೋದಿಗೆ ವಿಶ್ವನಾಯಕರ ಅಭಿನಂದನೆ


ಭೂತಾನ್‌ ದೊರೆ ಜಿಗ್ಮೆ ಖೇಸರ್‌ ವಾಂಗ್‌ಚುಕ್‌ ಪ್ರಧಾನಿ ಮೋದಿಗೆ ಕರೆ ಮಾಡಿ ಶುಭಾಶಯ ಕೋರಿದ್ದಾರೆ. ''ಮೋದಿ ನಾಯಕತ್ವದಲ್ಲಿ ಭಾರತದಲ್ಲಿ ಅಭಿವೃದ್ಧಿ, ಸಮೃದ್ಧತೆ ಹೆಚ್ಚಲಿ,'' ಎಂದು ಹಾರೈಸಿದ್ದಾರೆ. ಭೂತಾನ್‌ ಪ್ರಧಾನಿ ಲೊತೆ ಶೆರಿಂಗ್‌ ಕೂಡ ಪ್ರಧಾನಿ ಮೋದಿಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ.

ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಗುರುವಾರ ರಾತ್ರಿ ಮೋದಿ ಅವರಿಗೆ ಕರೆ ಮಾಡಿ ಬಿಜೆಪಿಯ ವಿಜಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ''ಆರ್ಥಿಕ ಸಹಭಾಗಿತ್ವ, ಸುಭದ್ರ ಒಪ್ಪಂದಗಳ ಮೂಲಕ ಉಭಯ ದೇಶಗಳು ಅಭಿವೃದ್ಧಿ ಕಾಣುವುದನ್ನು ಬಯಸುತ್ತೇನೆ,'' ಎಂದಿದ್ದಾರೆ.

ಭೇಟಿ ಎದುರು ನೋಡುವೆನೆಂದ ಮೋದಿ
ಪಕ್ಷದ ಜಯಕ್ಕೆ ಅಭಿನಂದನೆ ತಿಳಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಉಪಾಧ್ಯಕ್ಷ ಮೈಕ್‌ ಪೆನ್ಸ್‌, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಕೆನಡಾ ಪ್ರಧಾನಿ ಜಸ್ಟಿನ್‌ ಟ್ರ್ಯುಡೆ ಸೇರಿದಂತೆ ಫ್ರಾನ್ಸ್‌, ಜಿಂಬಾಬ್ವೆ, ಇಂಡೋನೇಷ್ಯಾ, ನೈಜೀರಿಯಾ, ಸೌದಿ ಅರೇಬಿಯಾದ ಗಣ್ಯರಿಗೆ ಟ್ವೀಟ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದಾರೆ. ''ಇದು ಪ್ರಜಾಪ್ರಭುತ್ವದ ಜಯ. ತಮ್ಮ ಸಹಭಾಗಿತ್ವ ಹಾಗೂ ಒಪ್ಪಂದಗಳು ಅಭಿವೃದ್ಧಿ ಎಡೆಗೆ ಮುಂದುವರಿಯಲಿವೆ. ನಿಮ್ಮೆಲ್ಲರನ್ನೂ ಶೀಘ್ರ ಭೇಟಿಯಾಗುವುದನ್ನು ಎದುರು ನೋಡುತ್ತಿದ್ದೇನೆ,'' ಎಂದು ಮೋದಿ ಟ್ವೀಟ್‌ನಲ್ಲಿ ಹೇಳಿದ್ದಾರೆ. ಶುಭಾಶಯ ಕೋರಿದ ಬಾಲಿವುಡ್‌ ತಾರೆಯರು, ಕ್ರೀಡಾಪಟುಗಳಿಗೂ ಕೂಡ ಪ್ರಧಾನಿ ಧನ್ಯವಾದ ತಿಳಿಸಿದ್ದಾರೆ.
......................

ನಿಮ್ಮೆದುರಿಗಿರುವ ಸವಾಲುಗಳನ್ನು ಎದುರಿಸುವಲ್ಲಿ ಯಶಸ್ವಿಯಾಗಿ ಎಂದು ನಾನು ಪ್ರಾರ್ಥಿಸುತ್ತೇನೆ. ಭಾರತದ ಜನರ ನಿರೀಕ್ಷೆಗಳನ್ನು ಈಡೇರಿಸಿ, ಅವರ ವಿಶ್ವಾಸ ಉಳಿಸಿಕೊಳ್ಳುತ್ತೀರಿ ಎಂದು ನಂಬಿದ್ದೇನೆ. ಟಿಬೆಟಿಯನ್ನರಿಗೆ ಭಾರತ ತೋರಿಸಿದ ಉದಾರತೆ ಧನ್ಯವಾದ.
- ದಲೈ ಲಾಮಾ, ಟಿಬೆಟ್‌ ಧರ್ಮಗುರು

ಮೋದಿ ವಿರುದ್ಧ ಕಿಡಿಕಾರುವುದನ್ನು ಬಿಟ್ಟ ಪಾಕ್‌ ಮಾಧ್ಯಮಗಳು
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಾ ಕಿಡಿಕಾರುತ್ತಿದ್ದ ಪಾಕಿಸ್ತಾನ ಮಾಧ್ಯಮಗಳು ಎನ್‌ಡಿಎ ಪ್ರಚಂಡ ಜಯ ಗಳಿಸಿದ ನಂತರ ತಣ್ಣಗಾಗಿವೆ. ಇದೊಂದು 'ಮಹತ್ವಪೂರ್ಣ ಜನಾದೇಶ' ಎಂದು ಫಲಿತಾಂಶವನ್ನು ಕೊಂಡಾಡಿರುವ ಕೆಲವು ಮಾಧ್ಯಮಗಳು ರಾಷ್ಟ್ರೀಯ ಭದ್ರತೆಗೆ ಹೆಚ್ಚು ಒತ್ತು ನೀಡಿದ್ದರಿಂದ ಜನರು ಮೋದಿ ಪರ ಒಲವು ತೋರಿದ್ದಾರೆ ಎಂದು ವಿಶ್ಲೇಷಿಸಿವೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ